
ಸನಾತನ ಧರ್ಮದ ಕುರಿತು ೧೯೩೦ ರಲ್ಲಿಯ ಒಂದು ಲೇಖನದಲ್ಲಿ ಸ್ವಾತಂತ್ರ್ಯವೀರ ಸಾವರಕರರು, “ಹಳೆಯ ಎಲ್ಲ ಕರ್ಮಕಾಂಡಗಳನ್ನು ಬದಲಾಯಿಸಿದರೂ, ಸನಾತನ ಧರ್ಮ ಮುಳುಗಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ಮುಳುಗಿಸುವುದು ಒಂದು ಮುಷ್ಠಿಯಷ್ಟು ಸುಧಾರಕರಿಗಾಗಲಿ, ಸಂಪೂರ್ಣ ಮನುಕುಲಕ್ಕೂ ಸಾಧ್ಯವಿಲ್ಲ” ಎಂದು ಹೇಳುತ್ತಾರೆ. ಯಾವಾಗ ನಾವು ಧರ್ಮ ಶಬ್ದಕ್ಕೆ ‘ಸನಾತನ ಎಂಬ ವಿಶೇಷಣವನ್ನು ಜೋಡಿಸುತ್ತೇವೆ, ಆಗ ಅದರ ಅರ್ಥ ಈಶ್ವರ, ಜೀವ ಮತ್ತು ಜಗತ್ತು ಇವುಗಳ ಸ್ವರೂಪದ ಕುರಿತು ವಿವರಣೆ ನೀಡುವ ಶಾಸ್ತ್ರ ಮತ್ತು ಅವರ ಸಿದ್ಧಾಂತ ಮತ್ತು ತತ್ತ್ವ್ವಜ್ಞಾನ’ ಎಂದಾಗಿರುತ್ತದೆ. ಆದಿಶಕ್ತಿಯ ಸ್ವರೂಪ, ಜಗತ್ತಿನ ಆದಿಕಾರಣ ಮತ್ತು ಆದಿನಿಯಮ ಇವು ಸನಾತನ, ಶಾಶ್ವತ ಮತ್ತು ತ್ರಿಕಾಲಾಬಾಧಿತವಾಗಿರುತ್ತವೆ. ಭಗವದ್ಗೀತೆಯಲ್ಲಿ ಅಥವಾ ಉಪನಿಷತ್ತಿನಲ್ಲಿ ಈ ಕುರಿತು ಯಾವ ಸಿದ್ಧಾಂತವು ಪ್ರಕಟವಾಗಿರುತ್ತವೆ, ಅವು ಸನಾತನವಾಗಿರುತ್ತದೆ. ಅವುಗಳನ್ನು ಬದಲಾಯಿಸುವುದು ಮನುಷ್ಯಶಕ್ತಿಯ ಆಚೆಯ ಮಾತಾಗಿರುತ್ತದೆ. ಆ ಸಿದ್ಧಾಂತಗಳು ಇವೆ ಮತ್ತು ಹಾಗೆಯೇ ಇರಲಿವೆ ಮತ್ತು ಹಾಗೆಯೇ ಶಾಶ್ವತವಾಗಿ ಉಳಿಯುವವು.
ದಿಟ್ಟ ಉತ್ತರ ನೀಡಿ ರಾಹುಲ್ ಗಾಂಧಿ ಅವರ ವಕೀಲರ ದುರುದ್ದೇಶಗಳನ್ನು ಹುಸಿಗೊಳಿಸಿದ ಸಾವರ್ಕರ್ ಅವರ ಮೊಮ್ಮಗ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಲಂಡನ್ ಮನೆಯಂತೆ ಮಹಾರಾಷ್ಟ್ರದಲ್ಲಿರುವ ಸಾವರ್ಕರ್ ಸದನವನ್ನು ಖರೀದಿಸಿ ಸಂರಕ್ಷಿಸಬೇಕು !
ಸರಕಾರವು ಸಾವರ್ಕರ್ ಸದನವನ್ನು ಸ್ವಾಧೀನಪಡಿಸಿಕೊಂಡು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !