ಪಲಾಯನವಲ್ಲ, ಪ್ರತಿರೋಧವೊಂದೇ ಪರಿಹಾರ ! – ನ್ಯಾಯವಾದಿ ನೀಲೇಶ ಸಾಂಗೋಲಕರ, ಸಂಘಟಕರು, ಹಿಂದೂ ವಿಧಿಜ್ಞ ಪರಿಷತ್ತು

ನ್ಯಾಯವಾದಿ ನಿಲೇಶ ಸಾಂಗೋಲಕರ

೧೯೯೦ ರಲ್ಲಿ ಕಾಶ್ಮೀರದಲ್ಲಿ ಏನು ನಡೆಯಿತೋ ಅದು ರಾಜಸ್ಥಾನದ ಕರೌಲಿ, ಮಧ್ಯಪ್ರದೇಶದ ಖರ್ಗೋನ್ ಮತ್ತು ದೇಶದಾದ್ಯಂತ ನಡೆಯುತ್ತಿದೆ. ಹಿಂದೂ ಸಮಾಜವು ಜಾಗೃತವಾಗುವುದು ಆವಶ್ಯಕವಾಗಿದೆ. ನಮ್ಮ ತೇಜಸ್ವಿ ರಾಷ್ಟ್ರಪುರುಷರ ಮತ್ತು ಪರಾಕ್ರಮಿ ರಾಜರ ಇತಿಹಾಸವನ್ನು ನಾವು ನೆನಪಿಸಿ ಕೊಳ್ಳಬೇಕು. ಪಲಾಯನವಲ್ಲ; ಪ್ರತಿರೋಧವೊಂದೇ ಪರಿಹಾರ ವಾಗಿದೆ. ಎಲ್ಲಿಯ ತನಕ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲವೋ, ಅಲ್ಲಿಯ ತನಕ ಗಲಭೆಕೋರರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂಬುದು ಇಲ್ಲಿಯವರೆಗಿನ ಅನುಭವವಾಗಿದೆ. ಗಲಭೆಕೋರರ ವಿರುದ್ಧ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ದೂರು, ಪತ್ರವ್ಯವಹಾರ, ಮಾಹಿತಿ ಹಕ್ಕು, ನ್ಯಾಯಾಂಗ ಹೋರಾಟ ಇತ್ಯಾದಿಗಳ ಮೂಲಕ ಒತ್ತಡ ಹೇರಬೇಕು. – ನ್ಯಾಯವಾದಿ ನೀಲೇಶ ಸಾಂಗೋಲಕರ