ಇದು ಹಿಂದೂಗಳಿಗೆ ಲಜ್ಜಾಸ್ಪದ !

೧. ಇಂತಹ ವಿಷಯಗಳನ್ನು ವಿರೋಧಿಸಲೇಬೇಕು !

ದೇಶದಲ್ಲಿ ಅನೇಕ ಗರ್ಭಿಣಿ ನಟಿಯರು ತಮ್ಮ ಅರೆನಗ್ನ ಮತ್ತು ಅಶ್ಲೀಲ ಚಿತ್ರಗಳನ್ನು ‘ಬೇಬಿ ಬಂಪ್ ಫ್ಲಾಂಟಿಂಗ್’ ಹೆಸರಿನಲ್ಲಿ ಪ್ರಸಾರ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಿದ್ದಾರೆ. ಇದು ಶಿಕ್ಷಾರ್ಹ ಅಪರಾಧವಿದೆ. ಅವರ ವಿರುದ್ಧ ಅಪರಾಧ ದಾಖಲಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ‘ರಣರಾಗಿಣಿ’ ಶಾಖೆ ಆಗ್ರಹಿಸಿದೆ.

೨. ಇದು ಹಿಂದೂಗಳಿಗೆ ಲಜ್ಜಾಸ್ಪದ !

ಸ್ಥಳೀಯ ಮುಸ್ಲಿಂ ಸಂಘಟನೆಯ ಒಪ್ಪಿಗೆಯ ನಂತರವೇ ಬಡಾವಣೆಯಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು ಆಚರಿಸಬೇಕೆಂದು ಕೊಯಮುತ್ತೂರು ನಗರ ಪೊಲೀಸರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ.

೩. ವಾಸನಾಂಧ ಪಾದ್ರಿಗಳ ನಿಜಸ್ವರೂಪವನ್ನು ತಿಳಿಯಿರಿ !

ಕೇರಳದ ಜೋಸ್ ಪ್ರಕಾಶ್ ಎಂಬ ಕ್ರೈಸ್ತ ಪಾದ್ರಿಯು ೧೩ ವರ್ಷದ ಬಾಲಕಿಯನ್ನು ಅನೇಕ ಬಾರಿ ಅತ್ಯಾಚಾರ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ. ಸಂತ್ರಸ್ತಳಿಗೆ ಎರಡೂವರೆ ಲಕ್ಷ ರೂಪಾಯಿ ನಷ್ಟಪರಿಹಾರ ನೀಡುವಂತೆಯೂ ಈ ಪಾದ್ರಿಗೆ ಆದೇಶಿಸಲಾಗಿದೆ.

೪. ಇಂತಹ ಪ್ರತ್ಯೇಕತಾವಾದಿ ಪಕ್ಷಗಳನ್ನು ನಿಷೇಧಿಸಿ !

ತಮಿಳುನಾಡಿನ ಆಡಳಿತಾರೂಢ ದ್ರಾಮುಕ ಪಕ್ಷವನ್ನು ಬೆಂಬಲಿಸುವ ‘ವಿದುಥಾಲೈ ಚಿರುಥೈಗಲ್ ಕಚ್ಚಿ’ ಅಂದರೆ ‘ವಿಸಿಕೆ’ಯ ನಾಯಕ ತಮಿಳುನಾಡನ್ನು ಭಾರತದಿಂದ ಸ್ವತಂತ್ರಗೊಳಿಸಬೇಕೆಂಬ ಘೋಷಿಸಿದ್ದಾರೆ.

೫. ಈಗ ಕ್ರೈಸ್ತರಿಂದಲೂ ಹಿಂದೂ ದೇವತೆಗಳ ಅವಮಾನ !

ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಇಲಾಖೆಯ ಸಾಮಾಜಿಕ ಮಾಧ್ಯಮದ ಆಸ್ಟಿನ್ ಥಾಮಸ್ ಎಂಬ ಸಿಬ್ಬಂದಿಯು ಶ್ರೀ ಗಣೇಶನನ್ನು ಅವಮಾನಿಸಿದ್ದಾನೆ. ಶ್ರೀ ಗಣೇಶ ಚತುರ್ಥಿಯಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆಯ ಸ್ಥಳದಲ್ಲಿ ಅವನು ಬೂಟ್ ಹಾಕಿಕೊಂಡು ಕುಳಿತಿದ್ದನು.

೬. ಜಾತ್ಯತೀತರು ಈಗೇಕೆ ಸುಮ್ಮನಿದ್ದಾರೆ?

ಅಲಿಗಡನ (ಉತ್ತರಪ್ರದೇಶ)ದ ಭಾಜಪ ನಾಯಕಿ ರೂಬಿ ಖಾನ್ ಇವರು ಶ್ರೀ ಗಣೇಶಚತುರ್ಥಿ ನಿಮಿತ್ತವಾಗಿ ಶ್ರೀ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇದರಿಂದಾಗಿ ಖಾನ್ ವಿರುದ್ಧ ದಾರುಲ್ ಉಲೂಮ್ ದೇವಬಂದ ಫತ್ವಾ ಹೊರಡಿಸಿದೆ.

೭. ಇಂತಹ ದೇಶದ್ರೋಹಿಗಳನ್ನು ಗಲ್ಲಿಗೇರಿಸಿ !

ಕಿಶ್ತವಾಡ (ಜಮ್ಮು-ಕಾಶ್ಮೀರ)ದ ಒಂದು ಮಸೀದಿಯ ಅಬ್ದುಲ್ ವಾಹಿದ್ ಎಂಬ ೨೨ ವರ್ಷದ ಮೌಲ್ವಿಯನ್ನು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ‘ಕಾಶ್ಮೀರಿ ಜಾಂಬಾಜ್ ಫೋರ್ಸ್’ಗೆ ಗೌಪ್ಯ ಮಾಹಿತಿಯನ್ನು ನೀಡಿದಕ್ಕಾಗಿ ಬಂಧಿಸಲಾಗಿದೆ.