ಕಾಂಗ್ರೆಸ್ನ ಹಿಂದೂ ದ್ವೇಷಿ ಗೃಹ ಸಚಿವ ಪ್ರಿಯಾಂಕ ಖರ್ಗೆಯವರ ಹುರುಳಿಲ್ಲದ ಹೇಳಿಕೆ!

ಬೆಂಗಳೂರು – ‘ಕುಂಕುಮವನ್ನು ಕೇಸರಿಯಿಂದ ತಯಾರಿಸಲಾಗುತ್ತದೆ. (ಈ ವಿನೂತನ ಸಂಶೋಧನೆಗಾಗಿ ಕಾಂಗ್ರೆಸ್ನ ಗೃಹ ಸಚಿವರಿಗೆ ಬಹುಮಾನ ನೀಡಬೇಕು! – ಸಂಪಾದಕರು) ಶೇ. 90 ರಷ್ಟು ಕುಂಕುಮವು ಇಸ್ಲಾಮಿ ದೇಶಗಳಿಂದ ಬರುತ್ತದೆ. ಹೀಗೆ ಹೇಳಿದಾಗ ನಾಳೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’, ಎಂಬ ಪ್ರಶ್ನೆಯನ್ನು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ ಖರ್ಗೆ ಯವರು ಎತ್ತಿದ್ದಾರೆ. ಈ ಜನರಿಗೆ (ಸಂಘ ಮತ್ತು ಬಿಜೆಪಿಗೆ) ಅವರ ಕಡೆಗೆ (ಇಸ್ಲಾಮಿ ದೇಶಗಳ ಕಡೆಗೆ) ನೋಡುವುದೂ ಇಷ್ಟವಿಲ್ಲ, ಎಂದು ಹೇಳುತ್ತಾ ಪ್ರಿಯಾಂಕ ಖರ್ಗೆ ಯವರು ಬಿಜೆಪಿ ಮತ್ತು ರಾ. ಸ್ವ. ಸಂಘದ ಮೇಲೆ ಟೀಕಿಸಿದರು. ಇಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಕುಂಕುಮದ ಬಗ್ಗೆ ಹೇಳಿಕೆ ನೀಡಿದರು.
🚨 Congress Minister Under Fire for Bizarre Claim! 🚨
Karnataka Home Minister Priyank Kharge has sparked intense criticism after claiming that Kumkum is made from saffron (kesar) imported from Islamic countries, questioning if Hindus would stop wearing it. 🧐❌
Here are the… pic.twitter.com/MfsAO4PP5S
— Sanatan Prabhat (@SanatanPrabhat) July 8, 2026
1. ಪ್ರಿಯಾಂಕ ಖರ್ಗೆಯವರ ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆಯೇ ಅದರ ಮೇಲೆ ಟೀಕೆಗಳು ವ್ಯಕ್ತವಾಗತೊಡಗಿವೆ. ಮೂಲತಃ ಕುಂಕುಮ ಕೇಸರಿಯಿಂದ ತಯಾರಾಗುವುದಿಲ್ಲ. ಅರಿಶಿನ ಮತ್ತು ಸುಣ್ಣದಂತಹ ಸ್ಥಳೀಯ ವಸ್ತುಗಳನ್ನು ಬಳಸಿಕೊಂಡು ಕುಂಕುಮವನ್ನು ತಯಾರಿಸಲಾಗುತ್ತದೆ; ಆದರೆ ಗೃಹ ಸಚಿವರಿಗೆ ಇದು ಕೂಡ ತಿಳಿದಿಲ್ಲ ಎಂದು ಹೇಳುತ್ತಾ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಟೀಕಿಸುತ್ತಿದ್ದಾರೆ.
2. ಕೇಂದ್ರೀಯ ಮಂತ್ರಿಗಳಾದ ಶೋಭಾ ಕರಂದ್ಲಾಜೆಯವರು ಕೂಡ ಈ ವಿಡಿಯೋ ವಿಷಯವಾಗಿ ಪ್ರಿಯಾಂಕ ಖರ್ಗೆ ಯವರ ಮೇಲೆ ಟೀಕೆ ಮಾಡಿದ್ದಾರೆ. ಅವರು ಖರ್ಗೆಯವರಿಗೆ ಕುಂಕುಮ ಹೇಗೆ ತಯಾರಾಗುತ್ತದೆ ಎಂಬುದೂ ಗೊತ್ತಿಲ್ಲ, ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ