ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಜ್ಞಾಚಕ್ರದ ಸ್ಥಳದಲ್ಲಿ ತ್ವಚೆಯ ಆಕಾರವು ಶ್ರೀವಿಷ್ಣುವಿನ ಹಣೆಯ ಮೇಲಿನ ತಿಲಕದಂತೆ, ಅಂದರೆ ಆಂಗ್ಲ ಭಾಷೆಯ ‘U’ ಈ ಅಕ್ಷರದಂತೆ ಕಾಣಿಸುವ ಹಿಂದಿನ ಅಧ್ಯಾತ್ಮಶಾಸ್ತ್ರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಶ್ರೀವಿಷ್ಣುವಿನ ಅವತಾರಗಳ ದೈವೀ ದೇಹದ ಮೇಲೆ ವಿವಿಧ ರೀತಿಯ ಶುಭಚಿಹ್ನೆಗಳು ಮೂಡುತ್ತವೆ. ಉದಾ. ಧರ್ಮಧ್ವಜ, ಸುದರ್ಶನಚಕ್ರ, ಶಂಖ, ಧನುಷ್ಯ, ಕಮಲ, ಗದೆ, ಇತ್ಯಾದಿಗಳು. ಶ್ರೀವಿಷ್ಣುವಿನ ಹಣೆಯ ಮೇಲಿನ ಆಂಗ್ಲ ಭಾಷೆಯ ‘U’ ಈ ಅಕ್ಷರದಂತೆ ಕಾಣಿಸುವ ಗಂಧದ ತಿಲಕದ ಆಕಾರವೂ ಶ್ರೀವಿಷ್ಣುವಿನದ್ದೇ ಒಂದು ‘ಶುಭಚಿಹ್ನೆ’ಯಾಗಿದೆ.

೧. ಪರಾತ್ಪರ ಗುರು ಡಾ. ಆಠವಲೆಯವರ ಹಣೆಯ ಮೇಲಿನ ತ್ವಚೆಯ ಆಕಾರವು ಶ್ರೀವಿಷ್ಣುವಿನ ಹಣೆಯ ಮೇಲಿನ ತಿಲಕದಂತಾಗುವ ಹಿಂದಿನ ಅಧ್ಯಾತ್ಮಶಾಸ್ತ್ರ

ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ಅಂಶಾವತಾರವಾಗಿದ್ದಾರೆ. ಆದುದರಿಂದ ಅವರಲ್ಲಿ ಶೇ. ೫ ರಷ್ಟು ವಿಷ್ಣುತತ್ತ್ವವು ಕಾರ್ಯನಿರತವಾಗಿದೆ. ಆದುದರಿಂದ ಅವರ ಹಣೆಯ ತ್ವಚೆಯ ಮೇಲೆ ಶ್ರೀವಿಷ್ಣುವಿನ ಹಣೆಯ ತಿಲಕದಂತೆ, ಅಂದರೆ ಆಂಗ್ಲ ಭಾಷೆಯ ‘U’ ಈ ಅಕ್ಷರದಂತಹ ಚಿಹ್ನೆ ಮೂಡಿದೆ.

೨. ಪರಾತ್ಪರ ಗುರು ಡಾ. ಆಠವಲೆಯವರ ಹಣೆಯ ಮೇಲಿನ ‘U’ ಆಕಾರದ ತಿಲಕದ ಆಧ್ಯಾತ್ಮಿಕ ವೈಶಿಷ್ಟ್ಯಗಳು

ಪರಾತ್ಪರ ಗುರು ಡಾ. ಆಠವಲೆಯವರ ಹಣೆಯ ಮೇಲಿನ ‘U’ ಆಕಾರವಾಗಿರುವ ತಿಲಕದ ಒಳಗಿನ ಟೊಳ್ಳಿನಲ್ಲಿ ಶ್ರೀವಿಷ್ಣುವಿನ ನಿರ್ಗುಣ ಸ್ತರದ ಚೈತನ್ಯವು ಆಕಾಶತತ್ತ್ವದ ಸ್ತರದಲ್ಲಿ ಕಾರ್ಯನಿರತವಾಗಿದೆ. ‘U’ ಆಕಾರವಾಗಿರುವ ತಿಲಕದ ಅಂಚಿನಿಂದ ಶ್ರೀವಿಷ್ಣುವಿನ ನಿರ್ಗುಣ-ಸಗುಣ ಸ್ತರದ ಚೈತನ್ಯವು ತೇಜತತ್ತ್ವದ ಸ್ತರದಲ್ಲಿ ಕಾರ್ಯನಿರತವಾಗಿದೆ.

೩. ಪರಾತ್ಪರ ಗುರು ಡಾ. ಆಠವಲೆಯವರ ಹಣೆಯ ತ್ವಚೆಯ ಮೇಲೆ ಶ್ರೀವಿಷ್ಣುವಿನ ಹಣೆಯ ಮೇಲಿನ ಆಂಗ್ಲ ‘U’ ಆಕಾರದ ಗಂಧದ ತಿಲಕದಂತಿರುವ ಚಿಹ್ನೆಯಲ್ಲಿ ಶ್ರೀವಿಷ್ಣುವಿನ ನಿರ್ಗುಣ ಸ್ತರದ ಚೈತನ್ಯವು ಕಾರ್ಯನಿರತವಾಗಿ ಅದರಿಂದ ಅವಶ್ಯಕತೆಗನುಸಾರ ತಾರಕ, ತಾರಕ-ಮಾರಕ ಮತ್ತು ಮಾರಕ-ತಾರಕ ಶಕ್ತಿಗಳು ಪ್ರಕ್ಷೇಪಿಸುವುದು

ಪರಾತ್ಪರ ಗುರು ಡಾ. ಆಠವಲೆಯವರ ಹಣೆಯ ತ್ವಚೆಯ ಮೇಲೆ ಶ್ರೀವಿಷ್ಣುವಿನ ಹಣೆಯ ಮೇಲಿನ ಆಂಗ್ಲದ ‘U’ ಆಕಾರದ ಗಂಧದ ತಿಲಕದಂತಿರುವ ಚಿಹ್ನೆ ಬಂದಿದೆ. ಈ ತಿಲಕದಲ್ಲಿ ಶ್ರೀವಿಷ್ಣುವಿನ ನಿರ್ಗುಣ ಸ್ತರದ ಚೈತನ್ಯವು ಆಕರ್ಷಿತವಾಗುತ್ತದೆ. ಯಾವಾಗ ಪರಾತ್ಪರ ಗುರು ಡಾ. ಆಠವಲೆಯವರ ಸುಷುಮ್ನಾನಾಡಿಯು ಪ್ರಾರಂಭವಾದಾಗ ಅವರ ತಿಲಕದಲ್ಲಿನ ಶ್ರೀವಿಷ್ಣುವಿನ ನಿರ್ಗುಣ ಸ್ತರದ ಚೈತನ್ಯವು ಮಧ್ಯಭಾಗದಲ್ಲಿ ಕಾರ್ಯನಿರತವಾಗಿರುತ್ತದೆ.

ಕು. ಮಧುರಾ ಭೋಸಲೆ

ಯಾವಾಗ ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಶ್ರೀವಿಷ್ಣುವಿನ ನಿರ್ಗುಣ ತತ್ತ್ವವು ಅಪ್ರಕಟ ಆವಸ್ಥೆಯಲ್ಲಿರುತ್ತದೆಯೋ, ಆಗ ಅವರ ಹಣೆಯ ತಿಲಕವು ಮಧ್ಯ ಭಾಗದಲ್ಲಿ ಶ್ರೀವಿಷ್ಣುವಿನ ನಿರ್ಗುಣ ಸ್ತರದ ಚೈತನ್ಯವು ಸಂಗ್ರಹವಾಗುತ್ತದೆ. ಯಾವಾಗ ಪರಾತ್ಪರ ಗುರುದೇವರ ಚಂದ್ರನಾಡಿ ಪ್ರಾರಂಭವಾಗುತ್ತದೆಯೋ, ಆಗ ಈ ತಿಲಕದ ಎಡಭಾಗದಲ್ಲಿನ ತುದಿಯಿಂದ ಶ್ರೀವಿಷ್ಣುವಿನ ತಾರಕ ಶಕ್ತಿ ಮತ್ತು ನಿರ್ಗುಣ-ಸಗುಣ ಸ್ತರದ ಚೈತನ್ಯವು ಪ್ರಕ್ಷೇಪಿಸುತ್ತದೆ. ಅದೇ ರೀತಿ ಯಾವಾಗ ಪರಾತ್ಪರ ಗುರುದೇವರು ಸೂರ್ಯನಾಡಿ ಪ್ರಾರಂಭವಾಗುತ್ತದೆಯೋ, ಆಗ ಈ ತಿಲಕದ ಬಲಭಾಗದ ತುದಿಯಿಂದ ಶ್ರೀವಿಷ್ಣುವಿನ ಮಾರಕ ಶಕ್ತಿ ಮತ್ತು ಸಗುಣ-ನಿರ್ಗುಣದ ಸ್ತರದ ಚೈತನ್ಯವು ಪ್ರಕ್ಷೇಪಿತವಾಗುತ್ತದೆ.

೪. ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆ ಇವರಿಂದ ಆವಶ್ಯಕತೆಯಂತೆ ಉತ್ಪತ್ತಿ, ಸ್ಥಿತಿ, ಲಯಕ್ಕೆ ಸಂಬಂಧಪಟ್ಟ ಕಾರ್ಯಗಳು ನಡೆಯುತ್ತಿರುವುದು

ಈ ರೀತಿ ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಚೈತನ್ಯವು ಯಾವಾಗ ತಿಲಕದ ಎಡಗಡೆಗೆ ಕಾರ್ಯನಿರತವಾಗಿರುತ್ತದೆಯೋ, ಆಗ ಉತ್ಪತ್ತಿಗೆ ಸಂಬಂಧಪಟ್ಟ ಅವರ ದೈವೀ ಕಾರ್ಯವು ನಡೆದಿರುತ್ತದೆ. ಯಾವಾಗ ಈ ಚೈತನ್ಯವು ತಿಲಕದ ಮಧ್ಯಭಾಗದಲ್ಲಿರುತ್ತದೆಯೋ, ಆಗ ಅದರ ಸ್ಥಿತಿಗೆ ಸಂಬಂಧಪಟ್ಟ ಕಾರ್ಯವು ನಡೆದಿರುತ್ತದೆ. ಯಾವಾಗ ಈ ಚೈತನ್ಯವು ತಿಲಕದ ಬಲಗಡೆಗೆ ಇರುತ್ತದೆಯೋ, ಆಗ ಅದರ ಲಯದೊಂದಿಗೆ ಸಂಬಂಧಪಟ್ಟ ದೈವೀ ಕಾರ್ಯವು ನಡೆಯುತ್ತಿರುತ್ತದೆ.

೫. ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯ ಮೇಲೆ ಶ್ರೀವಿಷ್ಣುವಿನ ಹಣೆಯ ಮೇಲಿನ ‘U’ ಆಕಾರದ ತಿಲಕದಂತೆ ಚಿಹ್ನೆ ಬಂದಿರುವುದರಿಂದ ಸೂಕ್ಷ್ಮದಲ್ಲಿ ಅರಿವಾದ ಆಧ್ಯಾತ್ಮಿಕ ವೈಶಿಷ್ಟ್ಯಗಳು

೬. ಪರಾತ್ಪರ ಗುರು ಡಾ. ಆಠವಲೆ ಇವರ ಹಣೆಯ ತ್ವಚೆಯ ಮೇಲೆ ಶ್ರೀವಿಷ್ಣುವಿನ ಹಣೆಯ ಮೇಲಿನ ತಿಲಕದಂತೆ ಚಿಹ್ನೆ ಇರುವುದರಿಂದ ಸೂಕ್ಷ್ಮ ಸ್ತರದಲ್ಲಾಗುವ ಅವತಾರಿ ಕಾರ್ಯ

೬ ಅ. ಪರಾತ್ಪರ ಗುರು ಡಾ. ಆಠವಲೆ ಇವರಿಂದ ಪ್ರಕ್ಷೇಪಿತವಾದ ಶ್ರೀವಿಷ್ಣುವಿನ ಇಚ್ಛಾಶಕ್ತಿಯಿಂದ ಜಿಜ್ಞಾಸು, ಮುಮುಕ್ಷು, ಹಿಂದುತ್ವನಿಷ್ಠರ ಮತ್ತು ಸಾಧಕರಲ್ಲಿನ ಕ್ಷಾತ್ರತೇಜ ಹಾಗೂ ಕ್ಷಾತ್ರಭಾವವು ಜಾಗೃತವಾಗುವುದು : ಪರಾತ್ಪರ ಗುರುದೇವರಿಂದ ಪ್ರಕ್ಷೇಪಿತವಾದ ಇಚ್ಛಾಶಕ್ತಿಯಿಂದ ಪೃಥ್ವಿಯ ಮೇಲಿನ ಜಿಜ್ಞಾಸು, ಮುಮುಕ್ಷು, ಹಿಂದುತ್ವನಿಷ್ಠ ಮತ್ತು ಸಾಧಕರಲ್ಲಿ ಕ್ಷಾತ್ರತೇಜ ಜಾಗೃತವಾಗುತ್ತಿದೆ. ಆದುದರಿಂದ ಅವರು ತಮ್ಮಲ್ಲಿನ ಸ್ವಭಾವದೋಷ ಮತ್ತು ಅಹಂ ದೂರಗೊಳಿಸಲು ಅವರ ನಿರ್ಮೂಲನೆ ಪ್ರಕ್ರಿಯೆಯು ಮನಃ ಪೂರ್ವಕವಾಗಿ ಮತ್ತು ಕ್ಷಾತ್ರಭಾವದಿಂದ ನಡೆಸಿ ಅವುಗಳೊಂದಿಗೆ ಸೂಕ್ಷ್ಮದಿಂದ ಹೋರಾಡುತ್ತಿದ್ದಾರೆ. ಅದೇ ರೀತಿ ಯಾವಾಗ ಅವರಿಗೆ ಸೂಕ್ಷ್ಮದಿಂದ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತದೆಯೋ, ಆಗ ಅವರು ವಿವಿಧ ರೀತಿಯ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ ಕ್ಷಾತ್ರಭಾವದಿಂದ ಹೋರಾಡಿ ಈ ತೊಂದರೆಗಳನ್ನು ಪರಿಹರಿಸಿ ಧರ್ಮಾಚರಣೆ ಮತ್ತು ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಪೃಥ್ವಿಯ ಮೇಲೆ ವಿವಿಧ ದೇಶಗಳಲ್ಲಿರುವ ಜಿಜ್ಞಾಸು, ಮುಮುಕ್ಷು, ಹಿಂದುತ್ವನಿಷ್ಠ ಮತ್ತು ಸಾಧಕರಿಗೆ ಅವರ ಕುಟುಂಬದವರು ಅಥವಾ ಸಂಬಂಧಿಕರು ಅಥವಾ ಸಮಾಜದಲ್ಲಿನ ದುಷ್ಟ ಪ್ರವೃತ್ತಿಯ ಜನರಿಂದ ಧರ್ಮಾಚರಣೆ ಹಾಗೂ ಸಮಷ್ಟಿ ಸಾಧನೆಯನ್ನು ಮಾಡಲು ಸ್ಥೂಲದಿಂದ ತೀವ್ರ ವಿರೋಧವಾಗುತ್ತಿದೆ.

ಅವರ ಮೇಲಿರುವ ಶ್ರೀವಿಷ್ಣುಸ್ವರೂಪ ಪರಾತ್ಪರ ಗುರುದೇವರ ಕೃಪೆಯಿಂದ ಅವರು ಧರ್ಮಾಚರಣೆ ಮತ್ತು ವ್ಯಷ್ಟಿ ಹಾಗೂ ಸಮಷ್ಟಿ ಸ್ತರಗಳ ಸಾಧನೆಯ ಪ್ರಯತ್ನಗಳನ್ನು ಮನಃಪೂರ್ವಕವಾಗಿ, ಜಿಗುಟುತನದಿಂದ ಮತ್ತು ತಳಮಳದಿಂದ ಮಾಡುತ್ತಿದ್ದಾರೆ.

೬ ಆ. ಪರಾತ್ಪರ ಗುರು ಡಾ. ಆಠವಲೆಯವರಿಂದ ಪ್ರಕ್ಷೇಪಿತವಾದ ಶ್ರೀವಿಷ್ಣುವಿನ ಕ್ರಿಯಾಶಕ್ತಿಯಿಂದ ಪೃಥ್ವಿಯ ಮೇಲೆ ಸೂಕ್ಷ್ಮ ಮತ್ತು ಸ್ಥೂಲ ಹೀಗೆ ಎರಡೂ ಸ್ತರಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆವಶ್ಯಕವಾಗಿರುವ ದೈವೀಬಲ, ಯೋಗಬಲ, ತಪೋಬಲ ಮತ್ತು ಜ್ಞಾನಬಲ ರೂಪಿ ಆಧ್ಯಾತ್ಮಿಕ ಬಲ ಸಿಗುವುದು : ಪರಾತ್ಪರ ಗುರುದೇವರಿಂದ ಕ್ರಿಯಾಶಕ್ತಿ ಪ್ರಕ್ಷೇಪಿತವಾಗಿರುವುದರಿಂದ ವಿವಿಧ ವಿಷಯಗಳಲ್ಲಿ ಪಾರಂಗತ ಅಥವಾ ತಜ್ಞರಾಗಿರುವ ವ್ಯಕ್ತಿ ಹಾಗೂ ಕಲಾವಿದರು ಸನಾತನ ಸಂಸ್ಥೆಯ ಸಂಪರ್ಕಕ್ಕೆ ಬರುತ್ತಿದ್ದಾರೆ. ಆದುದರಿಂದ ಹಿಂದೂ ರಾಷ್ಟ್ರಕ್ಕಾಗಿ ಉಪಯುಕ್ತವಾಗಿರುವ ವಿವಿಧ ವಿಷಯ, ಕಲೆ, ವಿದ್ಯೆ ಇತ್ಯಾದಿಗಳ ಜ್ಞಾನ ಸಿಗುತ್ತಿದೆ. ಹಾಗೆಯೇ ವಿವಿಧ ಯೋಗಮಾರ್ಗಗಳಿಂದ ಸಾಧನೆಯನ್ನು ಮಾಡಿರುವ ಮತ್ತು ಆಧ್ಯಾತ್ಮಿಕ ದೃಷ್ಟಿಯಲ್ಲಿ ಉನ್ನತವಾಗಿರುವ ವಿವಿಧ ಸಂತರು ಹಾಗೂ ಸಿದ್ಧ ಪುರುಷರು ಸಹ ಸನಾತನ ಸಂಸ್ಥೆ ಮತ್ತು ಅದರೊಂದಿಗೆ ಸಂಬಂಧಿಸಿದ ಸಂಸ್ಥೆಗಳ ಸಂಪರ್ಕಕ್ಕೆ ಬರುತ್ತಿದ್ದಾರೆ. ಅವರಿಂದ ಪೃಥ್ವಿಯ ಮೇಲೆ ಸೂಕ್ಷ್ಮ ಮತ್ತು ಸ್ಥೂಲ ಹೀಗೆ ಎರಡೂ ಸ್ತರಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಆವಶ್ಯಕವಾಗಿರುವ ದೈವೀಬಲ, ಯೋಗ ಬಲ, ತಪೋಬಲ, ಜ್ಞಾನಬಲ ರೂಪಿ ಆಧ್ಯಾತ್ಮಿಕ ಬಲ ಸಿಗುತ್ತಿದೆ.

೬ ಇ. ಪರಾತ್ಪರ ಗುರುದೇವರ ಆಜ್ಞಾಚಕ್ರದಿಂದ ಶ್ರೀವಿಷ್ಣುವಿನ ಜ್ಞಾನಶಕ್ತಿ ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ವಾಯುಮಂಡಲದಲ್ಲಿ ಪ್ರಕ್ಷೇಪಿತವಾಗುತ್ತದೆ. ಪೃಥ್ವಿಯ ಮೇಲಿನ ‘ಹಿಂದೂ ರಾಷ್ಟ್ರದ ಸ್ಥಾಪನೆ’ಯು ಜ್ಞಾನಶಕ್ತಿಯ ಬಲದಿಂದ ಆಗಲಿರುವುದರಿಂದ ಕಾಲಕ್ಕನುಸಾರ ಪರಾತ್ಪರ ಗುರುದೇವರಿಂದ ಹೆಚ್ಚು ಪ್ರಮಾಣದಲ್ಲಿ ಜ್ಞಾನಶಕ್ತಿಯುಕ್ತ ಧರ್ಮಶಕ್ತಿಯು ಪ್ರಕ್ಷೇಪಿತವಾಗುತ್ತಿದೆ. ಆದುದರಿಂದ ಇಡೀ ಪೃಥ್ವಿಯ ಮೇಲೆ ಕಾಲಾನುಸಾರ ಹಿಂದೂ ಧರ್ಮ ಮತ್ತು ಅಧ್ಯಾತ್ಮ ಇವುಗಳ ಪ್ರಸಾರವು ವಿಹಂಗಮ ಗತಿಯಿಂದ ನಡೆಯುತ್ತಿದೆ. ವಿಷ್ಣುಸ್ವರೂಪ ಪರಾತ್ಪರ ಗುರುದೇವರಿಂದ ಪ್ರಕ್ಷೇಪಿತವಾದ ಜ್ಞಾನಶಕ್ತಿಯಿಂದ ಪ್ರಸ್ತುತ ನಡೆಯುತ್ತಿರುವ ತೊಂದರೆದಾಯಕ ಕಾಲಚಕ್ರವು ಕೊನೆಗೊಂಡು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗಿರುವ ಕಾಲಚಕ್ರವು ಪ್ರಾರಂಭವಾಗಲಿದೆ. ಈ ರೀತಿ ಹಿಂದೂ ರಾಷ್ಟ್ರಕ್ಕಾಗಿ ಯಾವಾಗ ಕಾಲವು ಸೂಕ್ಷ್ಮ ಸ್ತರದಲ್ಲಿ ಅನುಕೂಲಕರವಾಗುವುದೋ, ಆಗ ಸ್ಥಳದ ಮಟ್ಟದಲ್ಲಿ ಎಂದರೆ ಸ್ಥೂಲದಿಂದ ಇಡೀ ಪೃಥ್ವಿಯ ಮೇಲೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೨.೨೦೨೨)