ಪಾಕ್ ಬೆಂಬಲಿತ ಉಗ್ರರಿಂದ ಕಾಶ್ಮೀರದಲ್ಲಿ ೬೪ ಸಾವಿರ ೮೨೭ ಹಿಂದೂ ಕುಟುಂಬಗಳ ಪಲಾಯನ – ಕೇಂದ್ರ ಸರಕಾರ

ಇದರಲ್ಲಿನ ಎಷ್ಟು ಕುಟುಂಬಗಳಿಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಮತ್ತು ಎಷ್ಟು ಜನರ ಪುನರ್ವಸತಿ ಬಾಕಿ ಇದೆ ? ಇದರಲ್ಲಿ ಯಾವ ಅಡಚಣೆಗಳಿವೆ ಮತ್ತು ಸರಕಾರ ಅದರಲ್ಲಿ ಯಾವ ಉಪಾಯಯೋಜನೆ ಮಾಡುತ್ತಿದೆ ? ಇದರ ಮಾಹಿತಿ ಸರಕಾರ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ನವ ದೆಹಲಿ – ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಉಗ್ರವಾದದಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಇತರೆಡೆ ಪಲಾಯನ ಮಾಡಬೇಕಾಯಿತು.

ಗೃಹ ಸಚಿವಾಲಯ ೨೦೨೦-೨೧ ಇಸವಿಯ ವಾರ್ಷಿಕ ವರದಿಯ ಪ್ರಕಾರ ೧೯೯೦ ರ ದಶಕ ಮತ್ತು ೨೦೨೦ ರ ಸಮಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದದಿಂದ ೧೪ ಸಾವಿರ ೯೧ ನಾಗರಿಕರು ಮತ್ತು ೫ ಸಾವಿರ ೩೫೬ ಸೈನಿಕರು ಸಾವನ್ನಪ್ಪಿದರು. ಈ ವರದಿಯಲ್ಲಿ ಭಯೋತ್ಪಾದನೆಯಿಂದ ಹಿಂದೂಗಳೊಂದಿಗೆ  ಕೆಲವು ಸಿಖ್ಖರು ಮತ್ತು ಮುಸಲ್ಮಾನ ಕುಟುಂಬಗಳೂ ಕಾಶ್ಮೀರದಿಂದ ಪಲಾಯನ ಮಾಡಬೇಕಾಯಿತು ಎನ್ನಲಾಗಿದೆ.