ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರದ್ದುಗೊಳಿಸಿ ‘ವೈಷ್ಣೋದೇವಿ ಶ್ರೈನ್ ಬೋರ್ಡ್’ ಮಾದರಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರುವ ಸಾಧ್ಯತೆ

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದಲ್ಲಿ ದೇಣಿಗೆ ಹಣ ಕಳ್ಳತನದ ನಂತರ, ಸದ್ಯಕ್ಕಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ವಿಸರ್ಜಿಸಿ, ಅದರ ಜಾಗದಲ್ಲಿ ವೈಷ್ಣೋದೇವಿ ಶ್ರೈನ್ ಬೋರ್ಡ್ ಮಾದರಿಯ ಹೊಸ ವ್ಯವಸ್ಥೆಯನ್ನು ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಸ್ಪಷ್ಟ ಅರ್ಥವೇನೆಂದರೆ, ಮಂದಿರದ ಆಡಳಿತ ಮತ್ತು ಹಣಕಾಸಿನ ಜವಾಬ್ದಾರಿ ಇನ್ಮುಂದೆ ನೇರವಾಗಿ ಆಡಳಿತದ (ಸರಕಾರದ) ನಿಯಂತ್ರಣಕ್ಕೆ ಹೋಗಬಹುದು. ಅಂದರೆ, ಶ್ರೀರಾಮ ಮಂದಿರವೂ ಸಹ ಸರಕಾರೀಕರಣ ಆಗುವ ಸಾಧ್ಯತೆ ಇದೆ.