ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ಮಾಡುತ್ತಿದ್ದ ನ್ಯಾಯವಾದಿ ರಿಜ್ವಾನ್ ಬಂಧನ

ನೂಹ (ಹರಿಯಾಣ) – ಹರಿಯಾಣದ ನೂಹ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐ.ಎಸ್‌.ಐ. (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಗಾಗಿ ಗೂಢಚಾರಿಕೆ ಮಾಡುತ್ತಿದ್ದ ನ್ಯಾಯವಾದಿ ರಿಜ್ವಾನ್ ಎಂಬಾತನನ್ನು ಇತ್ತೀಚೆಗೆ ಬಂಧಿಸಿದ್ದಾರೆ. ರಿಜ್ವಾನ್ ಹರಿಯಾಣದ ನೂಹ್‌ ನಲ್ಲಿರುವ ಖರ್‌ಖಡಿ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಗುಡಗಾಂವ್

ನ್ಯಾಯಾಲಯದಲ್ಲಿ ನ್ಯಾಯವಾದಿನಾಗಿ ಕೆಲಸ ಮಾಡುತ್ತಿದ್ದನು. ಈ ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷರ್ರಫ್ ಎಂಬ ಮತ್ತೊಬ್ಬ ನ್ಯಾಯವಾದಿನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವರ್ಷ ಹರಿಯಾಣದ ಮೇವಾತ್ ಪ್ರದೇಶದಲ್ಲಿ ಪಾಕಿಸ್ತಾನಿ ಗೂಢಚಾರರನ್ನು ಹಿಡಿದಿರುವುದು ಇದು ಮೂರನೇ ಬಾರಿಯಾಗಿದೆ.

1. ರಿಜ್ವಾನ್ ಪಾಕಿಸ್ತಾನದಲ್ಲಿನ ‘ಐ.ಎಸ್‌.ಐ.’ ಸಂಪರ್ಕದಲ್ಲಿದ್ದನು. ಈತನಿಗೆ ಹವಾಲಾ (ಬ್ಯಾಂಕ್‌ಗಳಲ್ಲದೆ ಇತರ ಮಾರ್ಗಗಳ ಮೂಲಕ ಹಣದ ವಿನಿಮಯ) ಮೂಲಕ ಕೋಟ್ಯಂತರ ರೂಪಾಯಿಗಳು ಬರುತ್ತಿದ್ದವು.

2. ಈ ಹಣವನ್ನು ಭಯೋತ್ಪಾದಕ ಕೃತ್ಯಗಳು, ಗೂಢಚಾರಿಕೆ ಮತ್ತು ಮಾದಕವಸ್ತು ಕಳ್ಳಸಾಗಣೆಗಾಗಿ ಬಳಸಲಾಗುತ್ತಿತ್ತು ಎಂದು ತನಿಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈತನನ್ನು 8 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

3. ಈ ಹಿಂದೆ ಮೇ ತಿಂಗಳಲ್ಲಿ, ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ಮಹಮ್ಮದ್ ತಾರಿಫ್ ಮತ್ತು ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ಮಾಡಿದ್ದಕ್ಕಾಗಿ ಅರಮಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು.

ಸಂಪಾದಕೀಯ ನಿಲುವು

ಮುಸಲ್ಮಾನ ವೈದ್ಯರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ದೆಹಲಿಯ ಬಾಂಬ್ ಸ್ಫೋಟದಿಂದ ಬೆಳಕಿಗೆ ಬಂದಿತ್ತು. ಈಗ ಮುಸಲ್ಮಾನ ನ್ಯಾಯವಾದಿರು ಸಹ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿರುವುದು ಬಹಿರಂಗವಾಗುತ್ತಿದೆ. ‘ಬಡತನದಿಂದಾಗಲ್ಲ, ಬದಲಾಗಿ ಮುಸ್ಲಿಮರಿಗೆ ನೀಡಲಾಗುತ್ತಿರುವ ಕಟ್ಟರವಾದಿ ಬೋಧನೆಗಳ ಕಾರಣದಿಂದಾಗಿ ಮುಸಲ್ಮಾನರು ಭಯೋತ್ಪಾದಕರು ಅಥವಾ ದೇಶ ವಿರೋಧಿ ಚಟುವಟಿಕೆಗಳ ಕಡೆಗೆ ವಾಲುತ್ತಾರೆ’ ಎಂಬುದನ್ನು ಇದು ಸಾಬೀತುಪಡಿಸುತ್ತದೆ!