​ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ

ಧನಬಾದ (ಜಾರ್ಖಂಡ) – ‘ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್’ ಸಂಸ್ಥೆಯ ಉದ್ಯೋಗಿಯಾಗಿದ್ದ ತಂದೆಯ ಹತ್ಯೆ ಮಾಡಿ, ಅವರ ಜಾಗದಲ್ಲಿ ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಯತ್ನಿಸಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಮಗನು ತಂದೆಯ ಹತ್ಯೆಗಾಗಿ ಇಬ್ಬರಿಗೆ ಸುಪಾರಿ (ಹಣದ ಆಮಿಷ) ನೀಡಿದ್ದನು. ಪೊಲೀಸರು ಅವರನ್ನೂ ಸಹ ಬಂಧಿಸಿದ್ದಾರೆ.

ಧನಬಾದ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮಹಮ್ಮದ ಯಾಕೂಬ ರವರು ಮಾಹಿತಿ ನೀಡಿ, ಮೃತ ತುಲೇಶ್ವರ್ ನೋನಿಯಾರವರ ಮಗ ವಿಜಯ ಚೌಹಾಣ ಸೇರಿದಂತೆ ಅಮಿತ ಸಿಂಗ ಮತ್ತು ಅಖಿಲೇಶ ಮಲ್ಲಾಹ ಎಂಬ ಇಬ್ಬರು ಬಾಡಿಗೆ ಕೊಲೆಗಡುಕರನ್ನು ಈ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ನೋನಿಯಾರವರು ಬರೋರಾದ ಕಲ್ಲಿದ್ದಲು ಗಣಿಯಲ್ಲಿ ಕಾರ್ಮಿಕರಾಗಿದ್ದರು. ಅವರ ನಿವೃತ್ತಿಗೆ ಕೇವಲ ೨ ವರ್ಷಗಳು ಉಳಿದಿದ್ದವು. ಅವರ ಮಗ ವಿಜಯ್ ಚೌಹಾಣ್‌ಗೆ ತಂದೆಯ ಮರಣದ ನಂತರ ಅನುಕಂಪದ ಆಧಾರದಲ್ಲಿ ಗಣಿಯಲ್ಲಿ ಖಾಯಂ ಕೆಲಸ ಪಡೆಯುವ ಆಸೆಯಿತ್ತು. ಇದಕ್ಕಾಗಿ ಅವನು ತಂದೆಯನ್ನು ಮುಗಿಸಲು ಸಂಚು ರೂಪಿಸಿದ್ದನು ಎಂದು ಪೋಲಿಸರು ತಿಳಿಸಿದ್ದಾರೆ. ಚೌಹಾಣನು ತಂದೆಯ ಹತ್ಯೆಗಾಗಿ ತನ್ನ ಸಹಚರರಿಗೆ ೧೦ ಲಕ್ಷ ರೂಪಾಯಿ ಕೊಡುವುದಾಗಿ ಒಪ್ಪಿಕೊಂಡಿದ್ದನು; ಆದರೆ ಹತ್ಯೆಗೆ ಮುನ್ನ ಯಾವುದೇ ಮುಂಗಡ ಹಣವನ್ನು ನೀಡಿರಲಿಲ್ಲ.

ಸಂಪಾದಕೀಯ ನಿಲುವು

ಇದು ಕಲಿಯುಗದಲ್ಲಿ ಸ್ವಾರ್ಥವು ಪರಮಾವಧಿ ತಲುಪಿರುವದರ ಉದಾಹರಣೆಯಾಗಿದೆ ! ಪೋಷಕರು ಮಕ್ಕಳ ಮೇಲೆ ಆಧ್ಯಾತ್ಮಿಕ ಸಾಧನೆಯ ಸಂಸ್ಕಾರ ಮಾಡದಿರುವುದರಿಂದ ಹಾಗೂ ಆಡಳಿತಗಾರರು ಜನರಿಗೆ ಧರ್ಮ ಮಾರ್ಗವನ್ನು ಕಲಿಸದಿರುವುದರ ಪರಿಣಾಮವೇ ಇದು ಎಂದು ಹೇಳಬಹುದು!