ಧನಬಾದ (ಜಾರ್ಖಂಡ) – ‘ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್’ ಸಂಸ್ಥೆಯ ಉದ್ಯೋಗಿಯಾಗಿದ್ದ ತಂದೆಯ ಹತ್ಯೆ ಮಾಡಿ, ಅವರ ಜಾಗದಲ್ಲಿ ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಯತ್ನಿಸಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಮಗನು ತಂದೆಯ ಹತ್ಯೆಗಾಗಿ ಇಬ್ಬರಿಗೆ ಸುಪಾರಿ (ಹಣದ ಆಮಿಷ) ನೀಡಿದ್ದನು. ಪೊಲೀಸರು ಅವರನ್ನೂ ಸಹ ಬಂಧಿಸಿದ್ದಾರೆ.
ಧನಬಾದ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮಹಮ್ಮದ ಯಾಕೂಬ ರವರು ಮಾಹಿತಿ ನೀಡಿ, ಮೃತ ತುಲೇಶ್ವರ್ ನೋನಿಯಾರವರ ಮಗ ವಿಜಯ ಚೌಹಾಣ ಸೇರಿದಂತೆ ಅಮಿತ ಸಿಂಗ ಮತ್ತು ಅಖಿಲೇಶ ಮಲ್ಲಾಹ ಎಂಬ ಇಬ್ಬರು ಬಾಡಿಗೆ ಕೊಲೆಗಡುಕರನ್ನು ಈ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನೋನಿಯಾರವರು ಬರೋರಾದ ಕಲ್ಲಿದ್ದಲು ಗಣಿಯಲ್ಲಿ ಕಾರ್ಮಿಕರಾಗಿದ್ದರು. ಅವರ ನಿವೃತ್ತಿಗೆ ಕೇವಲ ೨ ವರ್ಷಗಳು ಉಳಿದಿದ್ದವು. ಅವರ ಮಗ ವಿಜಯ್ ಚೌಹಾಣ್ಗೆ ತಂದೆಯ ಮರಣದ ನಂತರ ಅನುಕಂಪದ ಆಧಾರದಲ್ಲಿ ಗಣಿಯಲ್ಲಿ ಖಾಯಂ ಕೆಲಸ ಪಡೆಯುವ ಆಸೆಯಿತ್ತು. ಇದಕ್ಕಾಗಿ ಅವನು ತಂದೆಯನ್ನು ಮುಗಿಸಲು ಸಂಚು ರೂಪಿಸಿದ್ದನು ಎಂದು ಪೋಲಿಸರು ತಿಳಿಸಿದ್ದಾರೆ. ಚೌಹಾಣನು ತಂದೆಯ ಹತ್ಯೆಗಾಗಿ ತನ್ನ ಸಹಚರರಿಗೆ ೧೦ ಲಕ್ಷ ರೂಪಾಯಿ ಕೊಡುವುದಾಗಿ ಒಪ್ಪಿಕೊಂಡಿದ್ದನು; ಆದರೆ ಹತ್ಯೆಗೆ ಮುನ್ನ ಯಾವುದೇ ಮುಂಗಡ ಹಣವನ್ನು ನೀಡಿರಲಿಲ್ಲ.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!