ರಾಯಸೇನ (ಮಧ್ಯಪ್ರದೇಶ)ಇಲ್ಲಿ ಮತಾಂಧರು ಕ್ಷುಲ್ಲಕ ಕಾರಣದಿಂದ ಹಿಂದೂಗಳ ಮೇಲೆ ಮಾಡಿದ ದಾಳಿಯಲ್ಲಿ ಒಬ್ಬ ಹಿಂದೂ ಸಾವನ್ನಪ್ಪಿದರೇ, 38 ಜನರು ಗಾಯ

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರವಿದ್ದಾಗ ಹಿಂದೂಗಳ ಮೇಲೆ ದಾಳಿಯಾಗಿ ಹತ್ಯೆ ಆಗುತ್ತದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !- ಸಂಪಾದಕರು 

ಈ ಮತಾಂಧರಿಗೆ ಗಲ್ಲು ಶಿಕ್ಷೆ ಆಗುವುದಕ್ಕೆ ಸರಕಾರ ಪ್ರಯತ್ನಿಸಬೇಕು ! -ಸಂಪಾದಕರು 

ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಗ ಚೌಹಾಣ ಅವರು ಆಸ್ಪತ್ರೆಯಲ್ಲಿ ಗಾಯಾಳುಗಳ ವಿಚಾರಣೆ ಮಾಡುವಾಗ

ಭೋಪಾಲ್ (ಮಧ್ಯಪ್ರದೇಶ) – ರಾಯಸೇನ ಜಿಲ್ಲೆಯಲ್ಲಿಯ ಖಮರಿಯಾ ಪೌಡಿ ಈ ಗ್ರಾಮದಲ್ಲಿ ಮತಾಂದರು ಮಾಡಿದ ಆಕ್ರಮಣದಲ್ಲಿ ಒಬ್ಬ ಆದಿವಾಸಿ ಹಿಂದೂವಿನ ಮೃತ್ಯುವಾಗಿದೆ, ಅಲ್ಲದೇ 38 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 6 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಗ ಚೌಹಾಣ ಅವರು ಆಸ್ಪತ್ರೆಗೆ ಹೋಗಿ ಗಾಯಾಳುಗಳ ವಿಚಾರಣೆ ಮಾಡಿದರು. ಅವರು ಮೃತನಾದ ರಾಜು ಆದಿವಾಸಿಯ ಕುಟುಂಬದವರಿಗೆ 5 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಾದ ಪ್ರತಿಯೊಬ್ಬರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಗುಂಡು ಹಾರಿಸುವುದು, ಸಾಮಾನ್ಯ ಅಪರಾಧವಲ್ಲ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಘಟನೆ ಮಕ್ಕಳಿಬ್ಬರ ಜಗಳದಿಂದ ನಡೆದಿದೆ. ಒಬ್ಬ ಮತಾಂಧ ಹುಡುಗನು ಆದಿವಾಸಿ ಹುಡುಗನಿಗೆ ಹೊಡೆದಿದ್ದರಿಂದ ಎರಡು ಸಮುದಾಯಗಳಲ್ಲಿ ವಾಗ್ವಾದ ಉಂಟಾಗಿ ಅದರ ರೂಪಾಂತರವು ಜಗಳವಾಯಿತು. ಆ ಸಮಯದಲ್ಲಿ ದೊಣ್ಣೆ, ಕೊಡಲಿ ಇವುಗಳನ್ನು ಉಪಯೋಗಿಸಲಾಯಿತು, ಅಲ್ಲದೆ ಕೆಲವರು ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲಿಯ ಅಂಗಡಿಗಳು, ವಾಹನಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಈ ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಿರುವ ಪೊಲೀಸರು ಎರಡು ರೈಫಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ನಂತರ ಆ ಪ್ರದೇಶದಲ್ಲಿ ಕಫ್ರ್ಯೂ ವಿಧಿಸಲಾಯಿತು.