ಯಾವ ತಾಯಿ-ತಂದೆಯರು ಸಂಸ್ಕಾರರಹಿತ ಮಕ್ಕಳನ್ನು ಸಮಾಜ ಮತ್ತು ದೇಶ ಇವುಗಳ ತಲೆಗೆ ಕಟ್ಟುತ್ತಾರೊ, ಅವರು ಖಂಡಿತ ಬಹುದೊಡ್ಡ ಅಪರಾಧ ಮಾಡುತ್ತಾರೆ !

‘ಸಂಸ್ಕಾರರಹಿತ ವ್ಯಕ್ತಿಗಳು ವಿದ್ಯಾವಂತ ಸಮಾಜದಲ್ಲಿ ಹಂಸದ ಸಮೂಹದಲ್ಲಿ ಬಾತುಕೋಳಿಯಂತೆ ಇರುತ್ತಾರೆ. ಯಾವ ತಾಯಿ-ತಂದೆಯರು ಸಂಸ್ಕಾರರಹಿತ ಮಕ್ಕಳನ್ನು ಸಮಾಜ ಮತ್ತು ದೇಶದ ತಲೆಗೆ ಕಟ್ಟುತ್ತಾರೊ, ಅವರು ಖಂಡಿತವಾಗಿಯೂ ಬಹುದೊಡ್ಡ ಅಪರಾಧ ಮಾಡುತ್ತಾರೆ. ಯಾವ ಸ್ಥಳದಲ್ಲಿ ಜ್ಞಾನ, ಶಿಕ್ಷಣ, ಮನುಷ್ಯತ್ವ ಮತ್ತು ಸಂಪನ್ನತೆ ಇರುತ್ತದೆ, ಆ ಸ್ಥಳದಲ್ಲಿ ಸ್ವರ್ಗ ಇರುತ್ತದೆ. ತದ್ವಿರುದ್ಧ ಎಲ್ಲಿ ಅಜ್ಞಾನ, ರಾಕ್ಷಸಿತನ ಮತ್ತು ಸಂಕಟಗಳು ಇರುತ್ತವೆ ಅಲ್ಲಿ ನರಕ ಇರುತ್ತದೆ. ಸಂಸ್ಕಾರಕ್ಷಮ ವ್ಯಕ್ತಿ ಸ್ವರ್ಗ ಮತ್ತು ಸಂಸ್ಕಾರರಹಿತ ವ್ಯಕ್ತಿಗಳು ನರಕ ನಿರ್ಮಾಣ ಮಾಡುತ್ತಾರೆ.

– ಗೀತಾ ಸ್ವಾಧ್ಯಾಯ (ಜನವರಿ ೨೦೧೧)