ಸಂಶೋಧನೆಯ ಮಾಧ್ಯಮದಿಂದ ಇಡೀ ಮನುಕುಲಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನಾ ಕಾರ್ಯಕ್ಕಾಗಿ ಛಾಯಾಚಿತ್ರಕಗಳು (‘ಕ್ಯಾಮೆರಾ’) ಬೇಕಾಗಿವೆ !

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಸುವರ್ಣಾವಕಾಶ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ವೈಜ್ಞಾನಿಕ ಭಾಷೆಯಲ್ಲಿ ಆಧ್ಯಾತ್ಮಿಕ ಸಂಶೋಧನೆ ಮಾಡುವ ಏಕಮೇವಾದ್ವಿತೀಯ ಮತ್ತು ಐತಿಹಾಸಿಕ ಕಾರ್ಯವನ್ನು ಮಾಡುತ್ತಿದೆ. ಈ ವಿಶ್ವವಿದ್ಯಾಲಯದ ಕೆಲವು ಸಾಧಕರು ಸಂತರ ಮಾರ್ಗದರ್ಶನದಲ್ಲಿ ವಿವಿಧ ಕಡೆಗಳಲ್ಲಿ ಪ್ರಯಾಣ ಮಾಡಿ ಭಾರತೀಯ ಸಂಸ್ಕೃತಿಯ ಅಮೂಲ್ಯವಾದ ಕೊಡುಗೆಗಳನ್ನು ಸಂಗ್ರಹಿಸುತ್ತಿದ್ದಾರೆ. ಅದೇ ರೀತಿ ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿನ ವೈಶಿಷ್ಟ್ಯಪೂರ್ಣ ಘಟನೆಗಳನ್ನೂ ಸಹ ಛಾಯಾಚಿತ್ರೀಕರಣ ಮಾಡಲಾಗುತ್ತಿದೆ. ಈ ಛಾಯಾಚಿತ್ರೀಕರಣವನ್ನು ವಿವಿಧ ಉಪಕರಣಗಳ ಸಹಾಯದಿಂದ ಮಾಡಲಾಗುತ್ತಿರುವುದರಿಂದ ಮುಂದಿನ ಅನೇಕ ಪೀಳಿಗೆಗಳಿಗೆ ಈ ಸಂಗ್ರಹವು ಲಭ್ಯವಾಗಲಿದೆ.

ಇದುವರೆಗೆ ಈ ಸಂಶೋಧನೆಯ ಕಾರ್ಯಕ್ಕಾಗಿ ಹಿತಚಿಂತಕರು ಲಭ್ಯ ಮಾಡಿಕೊಟ್ಟ ಉಪಕರಣಗಳನ್ನು ಬಳಸಲಾಯಿತು. ಆದುದರಿಂದ ಭಾರೀ ಮಟ್ಟದಲ್ಲಿ ಸಂಗ್ರಹ ಮಾಡಲು ಸಾಧ್ಯವಾಯಿತು. ಇನ್ನು ಮುಂದೆಯೂ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಣ ಮತ್ತು ಛಾಯಾಚಿತ್ರಗಳನ್ನು ತೆಗೆದರೆ ಅದು ಮುಂದಿನ ಕಾಲಕ್ಕೆ ಹೆಚ್ಚು ಉಪಯುಕ್ತವಾಗಬಲ್ಲದು ! ಆ ದೃಷ್ಟಿಯಿಂದ ಮುಂದಿನ ಹೊಸ ಉಪಕರಣಗಳ ಅವಶ್ಯಕತೆ ಇದೆ.

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಈ ಕೋಷ್ಟಕದಲ್ಲಿ ಕೊಟ್ಟಂತೆ ಉಪಕರಣಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಬಯಸುವರೋ ಅಥವಾ ಅವುಗಳನ್ನು ಖರೀದಿಸಲು ಹಣರೂಪದಲ್ಲಿ ಯಥಾಶಕ್ತಿ ಸಹಾಯ ಮಾಡ ಬಯಸುವರೋ, ಅವರು ಮುಂದಿನ ಸಂಖ್ಯೆಗೆ ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – 7058885610

ವಿ-ಅಂಚೆ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ 24/B, ರಾಮನಾಥಿ, ಬಾಂದೀವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ಇದಕ್ಕಾಗಿ ಡಿಡಿ ಕಳಿಸುವುದಾದರೆ ಅದನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ಈ ಹೆಸರಿನಲ್ಲಿ ತೆಗೆಯಬೇಕು.

– (ಪೂ.) ಶ್ರೀ. ಪೃಥ್ವಿರಾಜ ಹಜಾರೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ. (೩.೮.೨೦೨೧)