ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಸದ್ಯ ಕೊರೊನಾ ರೂಪದಲ್ಲಿ ಆಪತ್ಕಾಲದ ತುಣುಕನ್ನು ಅನುಭವಿಸುತ್ತಿದ್ದೇವೆ. ‘ಚಿಕಿತ್ಸಾಲಯಕ್ಕೆ ಹೋಗಬೇಕೆಂದರೆ ಬಹಳ ಜನದಟ್ಟಣೆ ಇರುತ್ತದೆ. ಔಷಧಾಲಯದಲ್ಲಿ ಔಷಧಿಗಳು ಲಭ್ಯವಿರುವುದಿಲ್ಲ, ಆನ್‌ಲೈನ್ ಔಷಧಿಗಳನ್ನು ತರಿಸಿದರೂ, ಸಂಚಾರ ನಿರ್ಬಂಧದ ಕಾರಣದಿಂದ ಸರಿಯಾದ ಸಮಯಕ್ಕೆ ಅವು ತಲುಪುವುದಿಲ್ಲ, ಔಷಧಿಗಳ ಕೊರತೆಯಿರುವುದರಿಂದ ಅವುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತವೆ, ಇತ್ಯಾದಿ ಅನೇಕ ಕೆಟ್ಟ ಅನುಭವಗಳನ್ನು ಅನೇಕ ಜನರು ಪಡೆದಿದ್ದಾರೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ. ಈ ಔಷಧಿಗಳು ಬೇಗನೆ ಉಪಲಬ್ಧವಾಗಲಿದೆ. ಈ ಔಷಧಗಳ ಕುರಿತು ಮಾಹಿತಿಯನ್ನು ನಾವು ಒಂದೊಂದಾಗಿ ತಿಳಿದುಕೊಳ್ಳುವವರಿದ್ದೇವೆ.

ಸನಾತನದ ಆಯುರ್ವೇದಿಕ ಔಷಧಿಗಳು (ಪ್ರಾತಿನಿಧಿಕ ಛಾಯಾಚಿತ್ರ)

೧೫. ಸನಾತನ ಲಘುಮಾಲಿನಿ ವಸಂತ (ಮಾತ್ರೆಗಳು)

೧೫ ಅ. ಗುಣಧರ್ಮ ಮತ್ತು ಸಂಭಾವ್ಯ ಉಪಯೋಗ : ಈ ಔಷಧವು ಶರೀರದ ಅಗ್ನಿಯನ್ನು ಪ್ರಜ್ವಲಿಸಿ ಹಳೆಯ ಜ್ವರ ಇತ್ಯಾದಿ ರೋಗಗಳನ್ನು ದೂರಗೊಳಿಸುತ್ತದೆ. ರೋಗಗಳಲ್ಲಿಳಿಗೆ ಸಂಭಾವ್ಯ ಉಪಯೋಗವನ್ನು ಮುಂದೆ ವಿವರಿಸಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರೊಂದಿಗೆ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ವೈದ್ಯರ ಸಲಹೆಗನುಸಾರ ಔಷಧವನ್ನು ತೆಗೆದುಕೊಳ್ಳಬೇಕು.

೧೫ ಆ. ಸೂಚನೆ : ಬಾಯಿ ಹುಣ್ಣು ಮತ್ತು ಮೈ ಉರಿ ಈ ಲಕ್ಷಣಗಳಿರುವಾಗ ಈ ಔಷಧವನ್ನು ಸೇವಿಸಬಾರದು

೧೬. ಸನಾತನ ತ್ರಿಭುವನಕೀರ್ತಿ ರಸ (ಮಾತ್ರೆ)

೧೬ ಅ. ಸಂಭಾವ್ಯ ಉಪಯೋಗ : ಇದು ಜ್ವರದ ಔಷಧವೆಂದು ಪ್ರಸಿದ್ಧವಿದೆ. ರೋಗಗಳಲ್ಲಿ ಇದರ ಸಂಭಾವ್ಯ ಉಪಯೋಗದ ಬಗ್ಗೆ ಮುಂದೆ ವಿವರಿಸಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರೊಂದಿಗೆ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ವೈದ್ಯರ ಸಲಹೆಗನುಸಾರ ಔಷಧವನ್ನು ತೆಗೆದುಕೊಳ್ಳಬೇಕು.

೧೭. ಸನಾತನ ಸಂಶಮನಿ ವಟಿ (ಮಾತ್ರೆಗಳು)

೧೭ ಅ. ಸಂಭಾವ್ಯ ಉಪಯೋಗ : ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಸಿದ್ಧ ಔಷಧವಾಗಿದೆ. ರೋಗಗಳಲ್ಲಿ ಇದರ ಉಪಯೋಗದ ಬಗ್ಗೆ ಮುಂದೆ ವಿವರಿಸಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರೊಂದಿಗೆ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ವೈದ್ಯರ ಸಲಹೆಗನುಸಾರ ಔಷಧವನ್ನು ತೆಗೆದುಕೊಳ್ಳಬೇಕು.

೧೮. ಸನಾತನದ ಸೂತಶೇಖರ ರಸ (ಮಾತ್ರೆಗಳು)

೧೮ ಅ. ಸಂಭಾವ್ಯ ಉಪಯೋಗ : ಈ ಔಷಧ ಪಿತ್ತದ ಔಷಧವೆಂದು ಪ್ರಸಿದ್ಧವಿದೆ. ರೋಗದಲ್ಲಿ ಇದರ  ಸಂಭಾವ್ಯ ಉಪಯೋಗದ ಬಗ್ಗೆ ಮುಂದೆ ವಿವರಿಸಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರೊಂದಿಗೆ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ವೈದ್ಯರ ಸಲಹೆಗನುಸಾರ ಔಷಧವನ್ನು ತೆಗೆದುಕೊಳ್ಳಬೇಕು.

೧೭ ಆ. ಸೂಚನೆ : ಮೈ ಮತ್ತು ಕೈಕಾಲುಗಳ ಉರಿ, ಮೈಯಲ್ಲಿ ಉಗಿ ಬಂದಹಾಗೆ ಅನಿಸುವುದು, ಕಣ್ಣುಗಳು ಬಿಸಿಯಾಗುವುದು ಇತ್ಯಾದಿ ತೀವ್ರ ಉಷ್ಣತೆಯ ಲಕ್ಷಣಗಳು ಕಾಣಿಸಿದರೆ ಔಷಧವನ್ನು ಸೇವಿಸಬಾರದು.

ಎಲ್ಲ ಔಷಧಗಳಿಗೆ ಸಾಮಾನ್ಯ ಸೂಚನೆ

೧. ಮಾತ್ರೆ ಜಗಿದು ಅಥವಾ ಪುಡಿ ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುತ್ತದೆ.

೨. ಔಷಧ ಕ್ರ. ೧೬ ರಿಂದ ೧೮ ಕ್ಕಾಗಿ ಸೂಚನೆ : ೩ ರಿಂದ ೭ ವರ್ಷಗಳ ಮಕ್ಕಳಿಗೆ ಕಾಲು ಭಾಗ ಮತ್ತು ೮ ರಿಂದ ೧೪ ವರ್ಷಗಳ ಮಕ್ಕಳಿಗೆ ಅರ್ಧ ಭಾಗ ಔಷಧವನ್ನು ಕೊಡಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ್, ಸನಾತನ ಆಶ್ರಮ, ರಾಮನಾಥಿ ಗೋವಾ. (೧೧.೬.೨೦೨೧)

(ಮುಂದುವರಿಯುವುದು)

ಮುಂಬರುವ ಆಪತ್ಕಾಲಕ್ಕಾಗಿ ಉಪಯುಕ್ತವಾಗುವ ಆಯುರ್ವೇದದ ಔಷಧಗಳ ಮಾಹಿತಿಯನ್ನು ನೀಡುವ ಈ ಲೇಖನ ಮಾಲೆಯನ್ನು ಸಾಧಕರು ಮತ್ತು ವಾಚಕರು ಸಂಗ್ರಹಿಸಿಡಬೇಕು