ಬೈಕ್ ನಲ್ಲಿ ಕೂರುವಾಗ ಮಹಿಳೆಯರು ಜಾಗೃತರಾಗಿರಬೇಕೆಂದು ಸೂಚಿಸುವ ಘಟನೆ !

ಝಾನ್ಸಿ (ಉತ್ತರಪ್ರದೇಶ) – ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಕೂರುವಾಗ ಎಷ್ಟು ಜಾಗೃತರಾಗಿರಬೇಕು ಎಂಬುದನ್ನು ಸೂಚಿಸುವ ದುರಂತದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ತನ್ನ ಆರು ತಿಂಗಳ ಮಗುವನ್ನು ಹಿಡಿದುಕೊಂಡು ಓರ್ವ ಸಂಬಂಧಿಕರ ಬೈಕ್ ನ ಹಿಂದೆ ಕುಳಿತಿದ್ದರು. ಮಹಿಳೆಯ ವೇಲು ಬೈಕ್ ‘ಚೈನ್’ ನಲ್ಲಿ ಸಿಲುಕಿ ದೊಡ್ಡ ಅನರ್ಥ ನಡೆದಿದೆ. ಮಹಿಳೆಯು ತನ್ನ ವೇಲನ್ನು ಕೈಗೆ ಸುತ್ತಿಕೊಂಡಿದ್ದರಿಂದ ಆಕೆಯ ಎಡಗೈ ಚೈನಿನಲ್ಲಿ ಸಿಲುಕಿತು ಮತ್ತು ಮೊಳಕೆವರೆಗೆ ಕೈ ಮುರಿದಿರುವ ಭಯಾನಕ ಘಟನೆ ವರದಿಯಾಗಿದೆ. ಈ ಅಪಘಾತ ಝಾನ್ಸಿ ಯ ಹಂಸಾರಿ -ರಾಜಗಡ ಮಾರ್ಗದಲ್ಲಿ ನಡೆದಿದೆ. ಮಹಿಳೆಯು ಆಕೆಯ ಕೈಯನ್ನು ಕಳೆದುಕೊಂಡಿದ್ದು ಒಂದು ಖಾಸಗಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ವರ್ಷ ರಾಯಗಡನ ನಿವಾಸಿ ಜಯರಾಮ ಅಹಿರವಾರ್ ಮತ್ತು ರಕ್ಷಾ ಎಂಬ ಯುವತಿಯ ವಿವಾಹವಾಗಿತ್ತು. ರಕ್ಷಾ ತನ್ನ ೬ ತಿಂಗಳ ಮಗುವಿನ ಜೊತೆಗೆ ಭಾವು ಬೀಜ್ ಹಬ್ಬದ ಪ್ರಯುಕ್ತ ತವರು ಮನೆಗೆ ಬಂದಿದ್ದಳು. ಆಗ ಈ ಅಪಘಾತ ನಡೆದಿದೆ.
ಟ್ರಾಫಿಕ್ ಪೊಲೀಸರಿಂದ ಮಹಿಳೆಯರಿಗೆ ಕರೆ !
ದ್ವಿಚಕ್ರ ವಾಹನ ಸ್ಟಾರ್ಟ್ ಮಾಡುವ ಮೊದಲು ನಿಮ್ಮ ಬಟ್ಟೆ ಚಕ್ರದಲ್ಲಿ ಸಿಲುಕದಂತೆ ಕಾಳಜಿ ವಹಿಸಿ. ಸೀರೆ ಅಥವಾ ವೇಲು ಗಟ್ಟಿಯಾಗಿ ದೇಹದ ಸುತ್ತಲು ಕಟ್ಟಿಕೊಳ್ಳಿ, ಹಾಗೂ ಸೀರೆಯ ಸೆರಗು ಗಾಳಿಯಲ್ಲಿ ಹಾರಾಡಲು ಬಿಡಬೇಡಿ, ಎಂದು ಟ್ರಾಫಿಕ್ ಪೊಲೀಸರು ಕರೆ ನೀಡಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !