
‘ಸಹೋದರಬಿದಿಗೆಯ ದಿನದಂದು ಸಹೋದರಿಯು ಸಹೋದರನಿಗೆ ಆರತಿಯನ್ನು ಬೆಳಗುತ್ತಾಳೆ. ಅನಂತರ ಸಹೋದರನು ಸಹೋದರಿಗೆ ಅವಳ ನಿತ್ಯ ಉಪಯೋಗದ ವಸ್ತು, ಗ್ರಂಥ ಇಂತಹ ಉಡುಗೊರೆಯನ್ನು ನೀಡುತ್ತಾನೆ. ಪ್ರತಿವರ್ಷದಂತೆ ಈ ವರ್ಷವೂ ಸಹೋದರನು ಸಹೋದರಿಗೆ ಉಡುಗೊರೆಯನ್ನು ಕೊಡಬಹುದು. ಆ ಸಮಯದಲ್ಲಿ ಸಹೋದರಿ- ಸಹೋದರರು ಅವರ ಉಪಾಸ್ಯದೇವತೆ ಅಥವಾ ಗುರುದೇವರಲ್ಲಿ ‘ಮುಂಬರುವ ಭೀಕರ ಕಾಲದಲ್ಲಿ ನಮ್ಮ ರಕ್ಷಣೆಯಾಗಲಿ. ಈ ಭೀಕರ ಕಾಲವನ್ನು ಎದುರಿಸಲು ಆತ್ಮಬಲ ಮತ್ತು ಮನೋಬಲ ಸಿಗಲಿ. ನಮ್ಮಿಂದ ನಿರಂತರ ಭಗವಂತನ ನಾಮಸ್ಮರಣೆಯಾಗಲಿ’, ಹೀಗೆ ಪ್ರಾರ್ಥನೆಯನ್ನು ಮಾಡಬೇಕು.
ಅನೇಕ ದಾರ್ಶನಿಕ ಸಂತರು ಹೇಳಿದಂತೆ ಮುಂಬರುವ ಕಾಲವು ಅತ್ಯಂತ ಭೀಕರವಾಗಿದೆ. ಆ ಕಾಲದಲ್ಲಿ ಯಾವ ಸಹೋದರನು ಅವನ ಸಹೋದರಿಯ ಅಥವಾ ಯಾವುದೇ ಸಹೋದರಿಯು ಅವಳ ಸಹೋದರನ ರಕ್ಷಣೆಯನ್ನು ಮಾಡಲು ಸಾಧ್ಯವಿಲ್ಲ. ಈ ಕಾಲದಲ್ಲಿ ಕೇವಲ ಭಗವಂತನೇ ನಮ್ಮ ರಕ್ಷಣೆಯನ್ನು ಮಾಡಲು ಸಾಧ್ಯ. ಆದುದರಿಂದ ಸಹೋದರಬಿದಿಗೆಯ ಶುಭದಿನದಂದು ಸಹೋದರ-ಸಹೋದರಿಯರು ಪರಸ್ಪರರ ರಕ್ಷಣೆಗಾಗಿ ಭಗವಂತನಿಗೆ ಈ ಲೇಖನದಲ್ಲಿರುವ ಪ್ರಾರ್ಥನೆಯ ಮಾಧ್ಯಮದಿಂದ ಹರಕೆಯನ್ನು ಹೇಳಬೇಕು.’
– ಶ್ರೀ. ಸಿದ್ಧೇಶ ಕರಂದಿಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೧೧.೨೦೨೦)
|
ಕಾರ್ಯಕ್ರಮವನ್ನು ದೀಪಪ್ರಜ್ವಲನೆಯಿಂದ ಪ್ರಾರಂಭಿಸಬೇಕು. ದೀಪಪ್ರಜ್ವಲನೆಯನ್ನು ತಮೋಗುಣಿ ಮೇಣದಬತ್ತಿಯಿಂದ ಮಾಡದೇ ಎಣ್ಣೆಯ ದೀಪದಿಂದ ಮತ್ತು ಸಾತ್ತ್ವ್ವಿಕ ವ್ಯಕ್ತಿಗಳಿಂದ ಮಾಡಿಸಬೇಕು. ಆಯಾಯ ಕಾರ್ಯಕ್ರಮಗಳಿಗೆ ಹೊಂದುವಂತಹ ಸ್ತೋತ್ರಗಳನ್ನು ಕಾರ್ಯಕ್ರಮದ ಪ್ರಾರಂಭದಲ್ಲಿ, ಮಧ್ಯದಲ್ಲಿ ಮತ್ತು ಕೊನೆಯಲ್ಲಿ ಹೇಳಬೇಕು. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿನ್ನೆಲೆಯ ಶಾಸ್ತ್ರ’) |
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಜಗತ್ತಿನಾದ್ಯಂತದ 100 ಉಷ್ಣ ನಗರಗಳ ಪೈಕಿ 97 ನಗರಗಳು ಭಾರತದಲ್ಲಿ !
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
ಆಪತ್ಕಾಲೀನ ಸ್ಥಿತಿ: ಇಂಧನದ ಸುರಕ್ಷತೆ, ಅತ್ಯಾವಶ್ಯಕ ಪೂರೈಕೆ ಮತ್ತು ಇಂಧನದ ಉಳಿತಾಯ !
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !