ನಾಮಜಪ ಮತ್ತು ಸ್ವಭಾವದೋಷ ನಿರ್ಮೂಲನೆಗಳಿಂದ ಆನಂದಪ್ರಾಪ್ತಿಯಾಗುತ್ತದೆ !

‘ನಿರಂತರವಾಗಿ ಸರ್ವೋಚ್ಚ (ಯಾವುದನ್ನು ಆನಂದ ಹೇಳುತ್ತೇವೆ) ಸುಖವನ್ನು ಅನುಭವಿಸುವ ಸೆಳೆತವು ಮಾನವನ ಪ್ರತಿಯೊಂದು ಕೃತಿಯ ಹಿಂದಿನ ಪ್ರೇರಣೆಯಾಗಿರುತ್ತದೆ. ಹೀಗಿರುವಾಗಲೂ ಇಡೀ ಮನುಕುಲ ಯಾವುದಕ್ಕಾಗಿ ಹಾತೊರೆಯುತ್ತಿದೆಯೋ, ಆ ‘ಆನಂದಪ್ರಾಪ್ತಿ ವಿಷಯದ ಬಗ್ಗೆ ಇಂದಿನ ವಿದ್ಯಾಲಯಗಳು ಮತ್ತು ಮಹಾವಿದ್ಯಾಲಯಗಳಲ್ಲಿ ಯಾವುದೇ ರೀತಿಯ ಶಿಕ್ಷಣವನ್ನು ನೀಡುವುದಿಲ್ಲ. ನಾಮಜಪ ಮತ್ತು ಸ್ವಭಾವದೋಷ-ಅಹಂ ನಿರ್ಮೂಲನೆ ಈ ಅಂಶಗಳನ್ನು ಅಂಗೀಕರಿಸಿದರೆ, ಸರ್ವೋಚ್ಚ ಮತ್ತು ಶಾಶ್ವತವಾಗಿ ಉಳಿಯಬಲ್ಲ ಸುಖ, ಅಂದರೆ ಆನಂದಪ್ರಾಪ್ತಿಯಾಗುತ್ತದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪೂ. (ಸೌ.) ಭಾವನಾ ಶಿಂದೆ ಇವರು ಪ್ರತಿಪಾದಿಸಿದರು. ಅವರು ‘ಥರ್ಡ ವರ್ಲ್ಡ ಕಾನ್ಫರೆನ್ಸ್ ಆನ್ ಚಿಲ್ಡ್ರನ್ ಆಂಡ್ ಯೂಥ 2021 (CCY 2021) : ದಿ ವರ್ಚ್ಯುವಲ್ ಕಾನ್ಫರೆನ್ಸ್’ ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ ‘ದಿ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಮ್ಯಾನೇಜ್ಮೆಂಟ್ (TIIKM) ಶ್ರೀಲಂಕಾ’ ಇದರ ವತಿಯಿಂದ ಆಯೋಜಿಸಲಾಗಿತ್ತು. ಪೂ. (ಸೌ.) ಭಾವನಾ ಶಿಂದೆ ಇವರು ಈ ಪರಿಷತ್ತಿನಲ್ಲಿ ‘ಒತ್ತಡಯುಕ್ತ ಜಗತ್ತಿನಲ್ಲಿ ಆನಂದ ಪಡೆಯುವ ಉಪಾಯ’ ಈ ಸಂಶೋಧನೆಯ ಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು, ಡಾ. (ಸೌ.) ನಂದಿನಿ ಸಾಮಂತ ಇವರು ಸಹಲೇಖಕಿಯಾಗಿದ್ದಾರೆ.
ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವೈಜ್ಞಾನಿಕ ಪರಷತ್ತುಗಳಲ್ಲಿ ಮಂಡಿಸಿದ 76 ನೇ ಮಂಡಣೆಯಾಗಿದೆ. ಈ ಮೊದಲು ವಿಶ್ವವಿದ್ಯಾಲಯವು ೧೫ ರಾಷ್ಟ್ರೀಯ ಮತ್ತು 60 ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದೆ. ಇವುಗಳಲ್ಲಿ 5 ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ವಿಶ್ವವಿದ್ಯಾಲಯಕ್ಕೆ ‘ಸರ್ವೋತ್ಕೃಷ್ಠ ಶೋಧಪ್ರಬಂಧ’ ಪ್ರಶಸ್ತಿ ಲಭಿಸಿದೆ.
ಪೂ. (ಸೌ.) ಭಾವನಾ ಶಿಂದೆಯವರು ಇವರು ಮಾತು ಮುಂದುವರಿಸುತ್ತಾ, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ನಾವು ದುಃಖವನ್ನು ಅನುಭವಿಸುತ್ತೇವೆ. ನಮ್ಮ ಜೀವನದ ಸಮಸ್ಯೆಗಳಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹೀಗೆ 3 ಮೂಲಭೂತ ಕಾರಣಗಳಿರುತ್ತವೆ; ಜೀವನದಲ್ಲಿ ಎದುರಾಗುವ ಶೇ. 50 ಕ್ಕಿಂತ ಹೆಚ್ಚು ಸಮಸ್ಯೆಗಳಿಗೆ ಆಧ್ಯಾತ್ಮಿಕ ಕಾರಣಗಳಿರುತ್ತದೆ. ಆದರೆ ಅವುಗಳು ಶಾರೀರಿಕ ಅಥವಾ ಮಾನಸಿಕ ಸಮಸ್ಯೆಗಳ ಸ್ವರೂಪದಲ್ಲಿ ಪ್ರಕಟಗೊಳ್ಳಬಹುದು. ಪ್ರಾರಬ್ಧ, ಪೂರ್ವಜರ ಅತೃಪ್ತ ಲಿಂಗದೇಹ ಮತ್ತು ಸೂಕ್ಷ್ಮದಲ್ಲಿರುವ ಕೆಟ್ಟ ಶಕ್ತಿಗಳು, ಈ 3 ಪ್ರಮುಖ ಆಧ್ಯಾತ್ಮಿಕ ಕಾರಣಗಳಿರುತ್ತವೆ. ಯಾವಾಗ ಯಾವುದೇ ಒಂದು ಸಮಸ್ಯೆಯ ಮೂಲಭೂತ ಕಾರಣ ಆಧ್ಯಾತ್ಮಿಕವಾಗಿರುತ್ತದೆಯೋ, ಆಗ ಅದರ ಆಧ್ಯಾತ್ಮಿಕ ಉಪಾಯ ಯೋಜನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಆಧ್ಯಾತ್ಮಿಕ ಉಪಾಯಗಳಿಂದ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಲ್ಲಿಯೂ ಸಹಾಯಕವಾಗುತ್ತದೆ, ವಿಶೇಷವಾಗಿ ಈ ಸಮಸ್ಯೆಗಳ ಮೂಲ ಕಾರಣ ಆಧ್ಯಾತ್ಮಿಕವಿರುತ್ತದೆ’, ಎಂದರು.
ಕೊನೆಯಲ್ಲಿಪೂ. (ಸೌ.) ಭಾವನಾ ಶಿಂದೆಯವರು ಆನಂದಪ್ರಾಪ್ತಿಗಾಗಿ ತಿಳಿಸಿರುವ ಪ್ರಮುಖ ಪ್ರಯತ್ನಗಳು:
೧. ನಾಮಜಪ : ಪ್ರತಿಯೊಬ್ಬ ವ್ಯಕ್ತಿ ತಮ್ಮ ಧರ್ಮಕ್ಕನುಸಾರ ತಿಳಿಸಿರುವ ನಾಮಜಪವನ್ನು ಮಾಡಬಹುದು. ಇಂದಿನ ಕಾಲಕ್ಕನುಸಾರ ‘ಓಂ ನಮೋ ಭಗವತೇ ವಾಸುದೇವಾಯ|, ಇದೊಂದು ಅತ್ಯಂತ ಉಪಯುಕ್ತ ನಾಮಜಪವಾಗಿದೆ.
ಪೂ. (ಸೌ.) ಭಾವನಾ ಶಿಂದೆಯವರು ನಾಮಜಪದ ಸಕಾರಾತ್ಮಕ ಪರಿಣಾಮದ ಅಳತೆಯನ್ನು ಮಾಡಲು ಕೈಕೊಂಡ ಒಂದು ಪ್ರಯೋಗದ ಕುರಿತು ಮಾಹಿತಿಯನ್ನು ನೀಡಿದರು. ‘ಜಿ.ಡಿ.ವಿ. ಬಾಯೊವೆಲ ಈ ವೈಜ್ಞಾನಿಕ ಉಪಕರಣದ ಮಾಧ್ಯಮದಿಂದ ವ್ಯಕ್ತಿಯ ಕುಂಡಲಿನಿ ಚಕ್ರಗಳ ಅಳತೆಯನ್ನು ಮಾಡಲಾಗಿದೆ. ಈ ಪ್ರಯೋಗದಲ್ಲಿ ಒಬ್ಬ ವ್ಯಕ್ತಿಯ ಕುಂಡಲಿನಿ ಚಕ್ರಗಳು ಕೇವಲ 40 ನಿಮಿಷ ‘ಓಂ ನಮೋ ಭಗವತೇ ವಾಸುದೇವಾಯ| ಈ ನಾಮಜಪವನ್ನು ಮಾಡಿದ ಬಳಿಕ ಮಧ್ಯಭಾಗದಲ್ಲಿ ಒಂದು ರೇಖೆಯಲ್ಲಿ ಬಂದಿರುವುದು ಕಂಡು ಬಂದಿತು. ಕುಂಡಲಿನಿ ಚಕ್ರಗಳ ಈ ಸ್ಥಿತಿ ಆ ವ್ಯಕ್ತಿಯ ಒಳ್ಳೆಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ತೋರಿಸುತ್ತದೆ.
೨. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ: ಮನಸ್ಸಿನ ಸ್ವಭಾವದೋಷಗಳ ಸಂಸ್ಕಾರವನ್ನು ನಾಶಗೊಳಿಸಲು ಪರಾತ್ಪರ ಗುರು ಡಾ ಆಠವಲೆಯವರು ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಕೈಕೊಂಡ ಒಂದು ಸಮೀಕ್ಷೆಯಲ್ಲಿ 50 ವ್ಯಕ್ತಿಗಳು ಭಾಗವಹಿಸಿದ್ದರು. ಅದರಲ್ಲಿ ಶೇ. 90 ರಷ್ಟು ಉದ್ಯೋಗಿಗಳಾಗಿದ್ದರು. ಅವರು ಇದರ ಬಗ್ಗೆ ಹೇಳುತ್ತಾ, ಈ ಸ್ವಭಾವದೋಷಗಳನ್ನು ಶೇ. 50 ರಿಂದ 80 ರಷ್ಟು ಕಡಿಮೆ ಮಾಡಲು ತಗುಲಿದ ಸರ್ವೇಸಾಧಾರಣ ಕಾಲಾವಧಿ 2 ವರ್ಷ 5 ತಿಂಗಳು ಆಗಿತ್ತು. ಸಂಬಂಧಗಳು ಮತ್ತು ಕಾರ್ಯಕ್ಷಮತೆಯಲ್ಲಿ ಸುಧಾರಣೆಯಾಗಿರುವುದನ್ನು ಎಲ್ಲರೂ ಅನುಭವಿಸಿದ್ದರೂ, ಸಂಬಂಧದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸುಧಾರಣೆಯಾಯಿತು, ಎಂದು ಶೇ. 73 ರಷ್ಟು ವ್ಯಕ್ತಿಗಳು ತಿಳಿಸಿದರು ಹಾಗೂ ಕಾರ್ಯಕ್ಷಮತೆ ಬಹಳಷ್ಟು ಪ್ರಮಾಣದಲ್ಲಿ ಸುಧಾರಣೆ ಆಯಿತು ಎಂದು ಶೇ. 77 ರಷ್ಟು ವ್ಯಕ್ತಿಗಳು ಹೇಳಿದರು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !