| * ೬೨ ಎಕರೆ ಭೂಮಿಯನ್ನು ತಿರುಮಲ ತಿರುಪತಿ ದೇವಸ್ಥಾನಕ್ಕಾಗಿ ನೀಡಲಾಗಿದೆ !
* ೧೭ ಎಕರೆ ಭೂಮಿಯಲ್ಲಿ ದೇವಾಲಯ, ವೈದಿಕ ಪಾಠಶಾಲೆ, ಯಾತ್ರಾರ್ಥಿಗಳಿಗೆ ಸೌಲಭ್ಯ, ಸಿಬ್ಬಂದಿ ಸಂಕೀರ್ಣ ಇರಲಿದೆ ! * ಸೆಕ್ಷನ್ ೩೭೦ ರದ್ದಾದ ನಂತರ ನಿರ್ಮಿಸಲ್ಪಡುತ್ತಿರುವ ಮೊದಲ ದೇವಾಲಯ ! |
| ಜಮ್ಮು – ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಹಿಂದೂಗಳು ಮತ್ತು ಹಿಂದೂ ಶ್ರದ್ಧಾಸ್ಥಾನಗಳಿಗೆ ಇರುವ ಅಪಾಯ ಇನ್ನೂ ದೂರವಾಗಿಲ್ಲ ಎಂಬುದು ಇಲ್ಲಿ ಪದೇ ಪದೇ ಘಟಿಸುವ ಘಟನೆಗಳಿಂದ ಇನ್ನೂ ಸ್ಪಷ್ಟವಾಗಿದೆ. ಆದ್ದರಿಂದ ಈ ದೇವಾಲಯವನ್ನು ರಕ್ಷಿಸಲು ಖರ್ಚು ಮಾಡುವ ಬದಲು, ಕೇಂದ್ರ ಸರಕಾರವು ಜಮ್ಮು – ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆಯನ್ನು ಹತ್ತಿಕ್ಕಬೇಕು ಮತ್ತು ಹಿಂದೂಗಳಿಗೆ ಮತ್ತು ಅವರ ಪೂಜಾ ಸ್ಥಳಗಳಿಗೆ ಶಾಶ್ವತ ನಿರ್ಭೀತ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬೇಕು ! |

ಶ್ರೀನಗರ – ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಜಮ್ಮು – ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ಭಗವಾನ ವೆಂಕಟೇಶ್ವರ ದೇವಾಲಯದ ಭೂಮಿಪೂಜೆಯ ಸಮಾರಂಭವು ಜೂನ್ ೧೩, ೨೦೨೧ ರಂದು ರಾಜ್ಯಪಾಲ ಮನೋಜ್ ಸಿನ್ಹಾ ಅವರ ಹಸ್ತದಿಂದ ನಡೆಯಲಿದೆ. ಈ ಸಮಯದಲ್ಲಿ ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷ ವೈ.ವಿ. ಸುಬ್ಬರೆಡ್ಡಿ ಜೊತೆಗೆ ಇತರ ಪದಾಧಿಕಾರಿಗಳು ಸಹ ಉಪಸ್ಥಿತರಿರುವರು. ‘ನ್ಯೂಸ್ ಆನ್ ಎಐಆರ್’ ಈ ವಾರ್ತಾಸಂಸ್ಥೆಯು ಜಾಲತಾಣದಲ್ಲಿ ಈ ಕುರಿತಾದ ಸುದ್ದಿಯನ್ನು ಪ್ರಸಾರ ಮಾಡಿದೆ, ಮತ್ತು ಅನೇಕ ಜನರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
J&K LG Manoj Sinha to perform Bhoomi Pujan ceremony for Sri Venkateswara Swamy Temple in Jammu tomorrow https://t.co/pZEGhRZjeV
— All India Radio News (@airnewsalerts) June 12, 2021
ವರದಿಯ ಪ್ರಕಾರ, ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ ನೇ ವಿಧಿಯನ್ನು ಕೇಂದ್ರ ಸರಕಾರ ತೆಗೆದ ನಂತರ, ತಿರುಮಲ ತಿರುಪತಿ ದೇವಸ್ಥಾನವು ಅಲ್ಲಿ ಭಗವಾನ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಲು ನಿರ್ಧರಿಸಿತು. ಇದಕ್ಕಾಗಿ ರಾಜ್ಯಪಾಲ ಸಿನ್ಹಾ ಅವರು ೨೦೨೧ ರ ಏಪ್ರಿಲ್ನಲ್ಲಿ ದೇವಾಲಯಕ್ಕೆ ೬೨ ಎಕರೆ ಭೂಮಿಯನ್ನು ಒದಗಿಸಿ ಕೊಟ್ಟಿದ್ದಾರೆ. ಈ ೬೨ ಎಕರೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ ೧೭ ಎಕರೆ ಜಮೀನಿನಲ್ಲಿ ನಿರ್ಮಾಣಕಾರ್ಯ ನಡೆಯಲಿದೆ. ಅದರಲ್ಲಿ ದೇವಾಲಯ, ವೈದಿಕ ಪಾಠಶಾಲೆ, ಸಿಬ್ಬಂದಿ ಸಂಕೀರ್ಣ, ಯಾತ್ರಿಕರಿಗೆ ಸೌಲಭ್ಯಗಳು ಇತ್ಯಾದಿಗಳು ಸೇರಿವೆ. ಇದಕ್ಕಾಗಿ ೩೩ ಕೋಟಿ ರೂಪಾಯಿ ತಗಲಬಹುದು ಎಂದು ಅಂದಾಜಿಸಲಾಗಿದೆ.
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಸ್ವಿಟ್ಜರ್ಲ್ಯಾಂಡ್ ನ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಂದ ಚಾಕು ಇರಿತದ ಮೂಲಕ ಭಯೋತ್ಪಾದಕ ದಾಳಿ: 3 ಜನರಿಗೆ ಗಾಯ
ಪಾಕಿಸ್ತಾನಿ ನಾಯಕ ಇಸ್ರೇಲ್ ಜೊತೆ ಸಂಬಂಧ ಬೆಳೆಸಲು ಯತ್ನಿಸಿದರೆ, ಕೊಲೆ… !
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple