Ban ‘Halal Certificates’ : ಮಹಾರಾಷ್ಟ್ರದಲ್ಲಿ ‘ಹಲಾಲ ಪ್ರಮಾಣಪತ್ರ’ಗಳ ನಿಷೇಧಕ್ಕೆ ಆಗ್ರಹ !

  • ಹಿಂದೂ ಜನಜಾಗೃತಿ ಸಮಿತಿಯ ನಿಯೋಗದಿಂದ ಉಪಮುಖ್ಯಮಂತ್ರಿಗಳ ಭೇಟಿ

  • ಉಪಮುಖ್ಯಮಂತ್ರಿಗಳಿಂದ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ !

ಮುಂಬಯಿ – ಹೇಗೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಕ್ರಮ ‘ಹಲಾಲ ಪ್ರಮಾಣಪತ್ರ’ಗಳನ್ನು ನಿಷೇಧಿಸಿರುವಂತೆ, ಮಹಾರಾಷ್ಟ್ರದಲ್ಲಿಯೂ ಹಲಾಲ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಸಮಿತಿಯ ವತಿಯಿಂದ ಇತ್ತೀಚೆಗೆ ಉಪಮುಖ್ಯಮಂತ್ರಿ ಶ್ರೀ. ಏಕನಾಥ ಶಿಂದೆ ಅವರನ್ನು ಭೇಟಿಯಾಗಿ ಹಲಾಲ ಉತ್ಪನ್ನಗಳ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ, ಸಮಿತಿಯ ಮುಂಬಯಿಯ ಶ್ರೀ. ಸತೀಶ ಸೋನಾರ, ಶ್ರೀ. ರವಿ ನಲಾವಡೆ ಮತ್ತು ನಾಂದೇಡ್‌ನ ಶಿವಸೇನೆಯ ಶಾಸಕ ಶ್ರೀ. ಆನಂದ ತಿಡಕೆ (ಬೊಂಡಾರಕರ) ಉಪಸ್ಥಿತರಿದ್ದರು. ಉಪಮುಖ್ಯಮಂತ್ರಿ ಶ್ರೀ. ಏಕನಾಥ ಶಿಂದೆ ಇತ್ತೀಚೆಗೆ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಕಾರ್ಯದರ್ಶಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆದೇಶಿಸಿದರು. ‘ಜಾತ್ಯತೀತ’ ವ್ಯವಸ್ಥೆಯಲ್ಲಿರುವಾಗ ಧಾರ್ಮಿಕ ಆಧಾರದ ಮೇಲೆ ಉತ್ಪನ್ನಗಳ ಪ್ರಮಾಣೀಕರಣವು ಅಸಂವಿಧಾನಿಕವಾಗಿದೆ ಮತ್ತು ಮಹಾರಾಷ್ಟ್ರದಲ್ಲಿ ಹಲಾಲ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸಿದರೆ, ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ, ಎಂದು ಸಮಿತಿ ಹೇಳಿದೆ.

1. ಖಾದ್ಯ ಪದಾರ್ಥಗಳಿಗೆ ಸಂಬಂಧಿಸಿದಂತೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಆಹಾರ ಉತ್ಪನ್ನಗಳನ್ನು ಮಾನದಂಡಗಳನ್ನು ನಿಗದಿಪಡಿಸಲು ಮತ್ತು ಪ್ರಮಾಣೀಕರಿಸಲು ಕಾನೂನಿನಿಂದ ಅಧಿಕಾರ ಹೊಂದಿರುವ ಸರಕಾರಿ ಸಂಸ್ಥೆಯಾಗಿದೆ; ಆದಾಗ್ಯೂ, ‘ಹಲಾಲ ಪ್ರಮಾಣೀಕರಣ’ ಎಂಬ ಸಮಾನಾಂತರ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ, ಇದು ಆಹಾರದ ಗುಣಮಟ್ಟದ ಬಗ್ಗೆ ಗೊಂದಲವನ್ನು ಸೃಷ್ಟಿಸುವ ಮೂಲಕ ಸರಕಾರಿ ನಿಯಮಗಳನ್ನು ಉಲ್ಲಂಘಿಸುತ್ತದೆ.

2. ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ‘ಹಲಾಲ ಇಂಡಿಯಾ’, ‘ಹಲಾಲ ಸರ್ಟಿಫಿಕೇಶನ್ ಸರ್ವೀಸ್‌ಸ್ ಇಂಡಿಯಾ’, ‘ಜಮಿಯತ ಉಲೇಮಾ-ಎ-ಹಿಂದ’, ‘ಜಮಿಯತ್ ಉಲೇಮಾ-ಎ-ಮಹಾರಾಷ್ಟ್ರ’ ಮುಂತಾದ ಹಲವು ಸಂಸ್ಥೆಗಳು ಹಲಾಲ ಪ್ರಮಾಣಪತ್ರಗಳನ್ನು ಅಕ್ರಮವಾಗಿ ವಿತರಿಸುವ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಲಾಗುತ್ತಿದೆ. ಆದ್ದರಿಂದ, ಉತ್ತರ ಪ್ರದೇಶದಲ್ಲಿ ಇದನ್ನು ನಿಷೇಧಿಸಲಾಯಿತು.

3. ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಅವರೇ ‘ಖಾಸಗಿ ಸಂಸ್ಥೆಗಳು ಪ್ರಮಾಣಪತ್ರಗಳನ್ನು ವಿತರಿಸುವ ಮೂಲಕ ಹಣ ಸಂಗ್ರಹಿಸುವ ಹಕ್ಕನ್ನು ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಈ ಹಣ ಲಷ್ಕರ್-ಎ-ತೊಯ್ಬಾ, ಇಂಡಿಯನ್ ಮುಜಾಹಿದ್ದೀನ್, ಇಸ್ಲಾಮಿಕ್ ಸ್ಟೇಟ್ ಮುಂತಾದ ಭಯೋತ್ಪಾದಕ ಸಂಘಟನೆಗಳ ಸುಮಾರು 700 ಆರೋಪಿಗಳಿಗೆ ಕಾನೂನು ನೆರವು ನೀಡಲು ಈ ಹಣವನ್ನು ಬಳಸಲಾಗುತ್ತಿದೆ ಎಂಬುದು ತುಂಬಾ ಆಘಾತಕಾರಿಯಾಗಿದೆ. ಆದ್ದರಿಂದ, ಈ ಕುರಿತು ಮನವಿಯೊಂದಿಗೆ ಕೆಲವು ದಾಖಲೆಗಳನ್ನು ಕೂಡ ಉಪಮುಖ್ಯಮಂತ್ರಿ ಶ್ರೀ. ಶಿಂದೆ ಅವರಿಗೆ ಸಲ್ಲಿಸಲಾಗಿತ್ತು.

4. ಈ ಸಂದರ್ಭದಲ್ಲಿ, ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಹಲಾಲ ಪ್ರಮಾಣಪತ್ರಗಳನ್ನು ನೀಡುವ ಖಾಸಗಿ ಸಂಸ್ಥೆಗಳ ವಿರುದ್ಧ ತಕ್ಷಣವೇ ಪ್ರಕರಣಗಳನ್ನು ದಾಖಲಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು; ಹಿಂದೂಗಳ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವ ಹಲಾಲ ಪ್ರಮಾಣೀಕರಣವನ್ನು ತಕ್ಷಣ ನಿಷೇಧಿಸುವುದು, ಖಾಸಗಿ ಸಂಸ್ಥೆಗಳು ಹಲಾಲ ಹೆಸರಿನಲ್ಲಿ ಸಂಗ್ರಹಿಸಿದ ನಿಧಿಯ ಬಗ್ಗೆ ತನಿಖೆ ನಡೆಸುವುದು, ಹಲಾಲ ಪ್ರಮಾಣಪತ್ರಗಳ ಮೂಲಕ ಬಡ್ಡಿಯೊಂದಿಗೆ ಸಂಗ್ರಹಿಸಿದ ಅಕ್ರಮ ಸಂಪತ್ತನ್ನು ವಸೂಲಿ ಮಾಡುವುದು ಮತ್ತು ಈ ಹಣವನ್ನು ಎಲ್ಲಿ ಬಳಸಲಾಗಿದೆ ಮತ್ತು ಅದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು, ಇಂತಹ ಬೇಡಿಕೆಗಳನ್ನು ಮನವಿಯಲ್ಲಿ ಸಲ್ಲಿಸಲಾಗಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಉಪಮುಖ್ಯಮಂತ್ರಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.