ಸ್ಥಳೀಯರು ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು
ಬೆಳಗಾವಿ – ಇಲ್ಲಿನ ಪಾಂಗುಳ ಗಲ್ಲಿಯಲ್ಲಿ ಮಾರ್ಚ್ 19 ರ ರಾತ್ರಿ ಅಶ್ವತ್ಥಾಮ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆದ ಕಾರಣ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾಸೀರ್ ಎಂಬ ಯುವಕ ಮದ್ಯ ಸೇವಿಸಿ ಕಲ್ಲು ತೂರಾಟ ನಡೆಸಿದ್ದಾನೆ. ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಇಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಸ್ಥಳೀಯರು ಯಾಸೀರ್ನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದರು. ಆಗ ಯಾಸೀರ್, “ನನ್ನಿಂದ ತಪ್ಪಾಗಿದೆ, ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾನೆ. ಕಳೆದ ವಾರ ಹೋಳಿ ಹಬ್ಬದ ಸಮಯದಲ್ಲಿ ವ್ಯಕ್ತಿಯೊಬ್ಬರು ಬುರ್ಖಾ ಧರಿಸಿ ಇಲ್ಲಿ ನೃತ್ಯ ಮಾಡಿದ್ದರಿಂದ ನನಗೆ ಕೋಪ ಬಂದಿತ್ತು, ಅದಕ್ಕೆ ಕಲ್ಲು ತೂರಿದೆ” ಎಂದು ಹೇಳಿದ್ದಾನೆ. (ಮುಸ್ಲಿಮರಿಗೆ ತಮ್ಮ ಧರ್ಮದ ಉಡುಪನ್ನು ಅವಮಾನಿಸುವವರ ಮೇಲೆ ಕೋಪ ಬರುತ್ತದೆ, ಆದರೆ ಹಿಂದೂಗಳು ತಮ್ಮ ಧರ್ಮವನ್ನು ತಾವೇ ಅವಮಾನಿಸುತ್ತಾರೆ! – ಸಂಪಾದಕರು)
ಸಂಪಾದಕೀಯ ನಿಲುವುಮಸೀದಿ ಅಥವಾ ದರ್ಗಾದ ಮೇಲೆ ಯಾವುದೇ ಹಿಂದೂ ಕಲ್ಲು ತೂರಾಟ ಮಾಡುತ್ತಾನೆಯೇ? ಆದರೂ ಈ ದೇಶದಲ್ಲಿ ‘ಮುಸ್ಲಿಮರು ಅಸುರಕ್ಷಿತರು’ ಮತ್ತು ‘ಹಿಂದೂಗಳು ಭಯೋತ್ಪಾದಕರು’ ಎಂದು ಕೂಗಾಟ ಮಾಡುತ್ತಾರೆ ! |