ಕ್ಷಾಮಪೀಡಿತ ಭಾಗದಲ್ಲಿ ಅಥವಾ ಆಪತ್ಕಾಲದ ಪರಿಸ್ಥಿತಿಯಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಇರುವ ಪರ್ಯಾಯಗಳು !

‘ಯಾವುದಾದರೊಂದು ವರ್ಷ ಬೇಕಾದಷ್ಟು ಮಳೆ ಬೀಳದಿದ್ದರೆ ನದಿ, ಹಳ್ಳ, ಕೊಳ ಸಾಕಷ್ಟು ಒಣಗುತ್ತವೆ. ಇದರಿಂದ ಶ್ರೀ ಗಣೇಶಮೂರ್ತಿಯನ್ನು ಧರ್ಮಶಾಸ್ತ್ರಕ್ಕನುಸಾರ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಲು ಅಡಚಣೆಯಾಗುವ ಸಾಧ್ಯತೆಯಿರುತ್ತದೆ. ಬರಗಾಲದ ಪರಿಸ್ಥಿತಿಯಲ್ಲಿಯೂ ಧಾರ್ಮಿಕ ಕೃತಿಗಳನ್ನು ಅಧ್ಯಾತ್ಮದ ತತ್ತ್ವಗಳಿಗನುಸಾರ ಮಾಡಿದರೆ ಅದು ಧರ್ಮಶಾಸ್ತ್ರಕ್ಕೆ ಸಮ್ಮತವಾಗಿರುತ್ತದೆ. ಇದಕ್ಕನುಸಾರ ಬರಗಾಲದ ಸಮಯದಲ್ಲಿ ಶ್ರೀ ಗಣೇಶ ಮೂರ್ತಿಯ  ವಿಸರ್ಜನೆಗೆ ಮುಂದಿನ ಪರ್ಯಾಯಗಳನ್ನು ಉಪಯೋಗಿಸಬಹುದು.

೧. ಚಿಕ್ಕ ಮೂರ್ತಿಯನ್ನು ಪೂಜಿಸುವುದು

ಅ. ಪ್ರತಿವರ್ಷ ದೊಡ್ಡ ಮೂರ್ತಿಯನ್ನು ತರುವ ರೂಢಿಯಿದ್ದರೂ, ಬರಗಾಲದಲ್ಲಿ ವಿಸರ್ಜನೆ ಸುಲಭವಾಗಿ ಆಗುವಂತಹ ಚಿಕ್ಕ (೬-೭ ಇಂಚು ಎತ್ತರದ) ಮೂರ್ತಿಯನ್ನು ಪೂಜಿಸಬೇಕು.

ಆ. ಉತ್ತರಪೂಜೆಯ ನಂತರ ಮೂರ್ತಿಯನ್ನು ಮನೆಯ ಹೊರಗೆ ಒಯ್ಯಬೇಕು. ತುಳಸಿ ವೃಂದಾವನದ ಹತ್ತಿರ ಅಥವಾ ಅಂಗಳದಲ್ಲಿ ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಮೂರ್ತಿಯನ್ನು ಆ ನೀರಿನಲ್ಲಿ ವಿಸರ್ಜನೆ ಮಾಡಬೇಕು. ನಗರಗಳಲ್ಲಿ ಬಡಾವಣೆ ಗಳಲ್ಲಿ (‘ಫ್ಲ್ಯಾಟ್ಗಳಲ್ಲಿ) ಇರುವವರಿಗೆ ತುಳಸಿ ವೃಂದಾವನ / ಅಂಗಳ ಲಭ್ಯವಿಲ್ಲದಿದ್ದರೆ ಅವರು ಮನೆಯಲ್ಲೇ ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ವಿಸರ್ಜನೆ ಮಾಡಬೇಕು.

ಇ. ಮೂರ್ತಿಯು ನೀರಿನಲ್ಲಿ ಪೂರ್ತಿ ಕರಗಿದ ನಂತರ ಆ ನೀರು ಮತ್ತು ಮಣ್ಣನ್ನು ಕಾಲಿನಡಿ ಬರದಂತೆ ಮಂದಾರ, ಆಲದ ಮರ, ಅರಳೀ ಮರ ಮುಂತಾದ ಸಾತ್ತ್ವಿಕ ಮರಗಳ ಬುಡದಲ್ಲಿ ಹಾಕಬೇಕು.

೨. ಚಿಕ್ಕ ಮೂರ್ತಿಯನ್ನು ಇಡಲು ಸಾಧ್ಯವಿಲ್ಲದಿದ್ದರೆ ದೊಡ್ಡ ಮೂರ್ತಿಯನ್ನು ಇಡಬೇಕು ಮತ್ತು ಅದರ ಉತ್ತರ ಪೂಜೆಯಾದ ನಂತರ ಕಾಲಾಂತರದಲ್ಲಿ ಅದನ್ನು ವಿಸರ್ಜಿಸಬೇಕು

ಚಿಕ್ಕ ಮೂರ್ತಿಯನ್ನು ಇಡಲು ಸಾಧ್ಯವಿಲ್ಲದಿದ್ದರೆ ಮತ್ತು ದೊಡ್ಡ ಮೂರ್ತಿಯನ್ನು ಇಟ್ಟರೆ ಅದರ ಉತ್ತರಪೂಜೆಯಾದ ನಂತರ ಅದನ್ನು ಮನೆಯಲ್ಲಿಯೇ ಸಾತ್ತ್ವಿಕ ಸ್ಥಳದಲ್ಲಿ (ಉದಾ. ದೇವರ ಕೋಣೆಯ ಬದಿಯಲ್ಲಿ) ಇಡಬೇಕು. ಈ ಮೂರ್ತಿಯ ಪೂಜೆಯನ್ನು ಮಾಡುವ ಆವಶ್ಯಕತೆ ಇರುವುದಿಲ್ಲ. ಅದರ ಮೇಲೆ ಧೂಳು ಬೀಳದಂತೆ ಯಾವುದಾದರೊಂದು ಪೆಟ್ಟಿಗೆಯಲ್ಲಿ ಅಥವಾ ಹೊದಿಕೆಯಿಂದ ಮುಚ್ಚಿಡಬೇಕು. ಮುಂದೆ ಹರಿಯುವ ನೀರು ಲಭ್ಯವಾದಾಗ ಈ ಮೂರ್ತಿಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು.

ಆಪತ್ಕಾಲದಲ್ಲಿ ಹೀಗೆ ನಿರ್ಮಾಲ್ಯ ವಿಸರ್ಜಿಸಿ !

ಶ್ರೀ ಗಣೇಶಮೂರ್ತಿಯೊಂದಿಗೆ ನಿರ್ಮಲ್ಯವನ್ನು ವಿಸರ್ಜನೆ ಮಾಡಲು ಇರುತ್ತದೆ. ನಿರ್ಮಲ್ಯದಲ್ಲಿನ ಚೈತನ್ಯ ನೀರಿನಲ್ಲಿ ವಿಸರ್ಜನೆಯಾದುದರಿಂದ ನೀರಿನಿಂದ ಆ ಚೈತನ್ಯ ಸಮಷ್ಟಿ ಸ್ತರದಲ್ಲಿ ಲಾಭವಾಗುತ್ತದೆ. ಆದರೆ ಆಪತ್ಕಾಲದಲ್ಲಿ ನಿರ್ಮಾಲ್ಯ ನೀರಿನಲ್ಲಿ ವಿಸರ್ಜಿಸದೆ ನೀರಿನಲ್ಲಿ ಮುಳುಗಿಸಿ ತೆಗೆಯಬೇಕು ಮತ್ತು ಆ ನೀರನ್ನು ಸ್ನಾನಕ್ಕಾಗಿ ಉಪಯೋಗಿಸಬೇಕು. ನಂತರ ನೀರನ್ನು ಹೂವಿನ ಗಿಡಗಳಿಗೆ ಹಾಕಬೇಕು. ನಂತರ ನಿರ್ಮಾಲ್ಯವನ್ನು ಗೊಬ್ಬರ ಮಾಡಲು ಉಪಯೋಗಿಸಬಹುದು. – ಶ್ರೀ. ದಾಮೋದರ ವಿಷ್ಣು ವಝೆ ಗುರೂಜಿ, ಸನಾತನ ಪುರೋಹಿತ ಪಾಠಶಾಲೆಯ ಸಂಚಾಲಕರು, ರಾಮನಾಥಿ, ಗೋವಾ.

(ಕೆಲವೊಮ್ಮೆ ಗಣೇಶಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಸಂಚಾರ ದಟ್ಟಣೆ, ಬಿರುಗಾಳಿ ಯಂತಹ ಆಪತ್ಕಾಲದ ಸ್ಥಿತಿಬರಬಹುದು. ಕೆಲವೊಮ್ಮೆ ವಿಸರ್ಜನೆಯ ಸಮಯದಲ್ಲಿ ಆಕಸ್ಮಿಕವಾಗಿ ಎಲ್ಲ ಜಲಮೂಲಗಳು ಮಲಿನವಾಗುವುದರಿಂದ ಆ ನೀರು ಮೂರ್ತಿ ವಿಸರ್ಜನೆಗೆ ಅಯೋಗ್ಯವಾಗಿರುವ ಸಾಧ್ಯತೆಯೂ ಬರಬಹುದು. ಇಂತಹ ಆಪತ್ಕಾಲದ ಪರಿಸ್ಥಿತಿಯಲ್ಲಿಯೂ ಈ  ಮೇಲೆ ಹೇಳಿದಂತೆ ಮಾಡಬೇಕು.) (ಆಧಾರ : ಸನಾತನ ನಿರ್ಮಿತ ಗ್ರಂಥ ‘ಶ್ರೀ ಗಣಪತಿ)