|

ರಾಯ್ಪುರ (ಛತ್ತೀಸ್ಗಢ) – ಛತ್ತೀಸ್ಗಢ ವಿಧಾನಸಭೆಯಲ್ಲಿ ‘ಧರ್ಮ ಸ್ವಾತಂತ್ರ್ಯ ವಿಧೇಯಕ, ೨೦೨೬’ ಅಂಗೀಕಾರವಾಗಿದೆ. ಇದರೊಂದಿಗೆ ಕಠಿಣ ನಿಬಂಧನೆಗಳಿರುವ ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದ ಭಾರತದ ೧೦ನೇ ರಾಜ್ಯವಾಗಿ ಛತ್ತೀಸ್ಗಢ ಹೊರಹೊಮ್ಮಿದೆ. ಕಾನೂನುಬಾಹಿರವಾಗಿ ಮತಾಂತರ ಮಾಡುವುದು ಸಾಬೀತಾದಲ್ಲಿ ೭ ರಿಂದ ೧೦ ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ೫ ಲಕ್ಷ ರೂಪಾಯಿ ದಂಡದ ಅವಕಾಶವನ್ನು ಇದರಲ್ಲಿ ಮಾಡಲಾಗಿದೆ. ಗೃಹ ಸಚಿವ ವಿಜಯ್ ಶರ್ಮಾ ಅವರು ಮಂಡಿಸಿದ ಈ ಹೊಸ ವಿಧೇಯಕವು ೧೯೬೮ರ ಹಳೆಯ ಕಾಯ್ದೆಯ ಸ್ಥಾನವನ್ನು ಪಡೆಯಲಿದೆ. ಪ್ರಸ್ತುತ ತಾಂತ್ರಿಕ ಮತ್ತು ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಹಳೆಯ ಕಾಯ್ದೆಯು ಮಿತಿಗಳನ್ನು ಹೊಂದಿತ್ತು ಎಂದು ಸರಕಾರ ಅಭಿಪ್ರಾಯಪಟ್ಟಿದೆ.
🚨 Freedom of Religion Bill passed in the Chhattisgarh Legislative Assembly
⚖️ Strict Provisions Introduced:
➡️ Life imprisonment for fraudulent conversions➡️ Fine up to ₹25 lakh
➡️ Chhattisgarh becomes the 10th state with such stringent laws
👏 Congratulations to the BJP… pic.twitter.com/SBXS5rWfvX
— Sanatan Prabhat (@SanatanPrabhat) March 20, 2026
ಕಠಿಣ ನಿಬಂಧನೆಗಳು ಹೀಗಿವೆ!
೧. ಸಂತ್ರಸ್ತ ವ್ಯಕ್ತಿಯು ಅಪ್ರಾಪ್ತ ವಯಸ್ಕ, ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಇತರ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೆ, ಶಿಕ್ಷೆಯನ್ನು ೧೦ ರಿಂದ ೨೦ ವರ್ಷಗಳವರೆಗೆ ಹೆಚ್ಚಿಸಲಾಗುವುದು. ಅಲ್ಲದೆ ಕನಿಷ್ಠ ೧೦ ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
೨. ಸಾಮೂಹಿಕ ಮತಾಂತರದ ಪ್ರಕರಣಗಳಲ್ಲಿ ೧೦ ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ಅವಕಾಶವಿದ್ದು, ಕನಿಷ್ಠ ೨೫ ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.
ವಿಧೇಯಕದ ಮುಖ್ಯ ಉದ್ದೇಶ!
ಬಲವಂತವಾಗಿ, ಆಮಿಷ ಒಡ್ಡಿ ಅಥವಾ ವಂಚನೆಯಿಂದ ಮಾಡುವ ಮತಾಂತರವನ್ನು ತಡೆಯುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ. ಕಳೆದ ವಾರವಷ್ಟೇ ರಾಜ್ಯ ಸಚಿವ ಸಂಪುಟವು ಈ ವಿಧೇಯಕಕ್ಕೆ ಅನುಮೋದನೆ ನೀಡಿತ್ತು. ಸರಕಾರದ ಪ್ರಕಾರ, ೧೯೬೮ರ ಕಾಯ್ದೆಯನ್ನು ಈಗ ಹೆಚ್ಚು ಬಲಪಡಿಸಲಾಗಿದೆ. ಡಿಜಿಟಲ್ ಮಾಧ್ಯಮಗಳು ಮತ್ತು ಆರ್ಥಿಕ ಆಮಿಷಗಳಂತಹ ಹೊಸ ವಿಧಾನಗಳನ್ನು ಸಹ ಇದರಲ್ಲಿ ಸೇರಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ‘ಛತ್ತೀಸ್ಗಢ ಧರ್ಮ ಸ್ವಾತಂತ್ರ್ಯ ಅಧಿನಿಯಮ, ೧೯೬೮’ ಜಾರಿಯಲ್ಲಿದ್ದು, ಇದನ್ನು ನವೆಂಬರ್ ೨೦೦೦ರಲ್ಲಿ ರಾಜ್ಯ ರಚನೆಯ ನಂತರ ಮಧ್ಯಪ್ರದೇಶದಿಂದ ಸ್ವೀಕರಿಸಲಾಗಿತ್ತು.
ವಿರೋಧ ಪಕ್ಷಗಳ ಆಕ್ಷೇಪ ಮತ್ತು ಸರಕಾರದ ಸ್ಪಷ್ಟನೆ
ಆಕ್ಷೇಪ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಹಾಗೂ ಎಲ್ಲಾ ಪಕ್ಷಗಳ ಶಾಸಕರ ಅಭಿಪ್ರಾಯವನ್ನು ಪಡೆಯಬೇಕಿತ್ತು.
ಸ್ಪಷ್ಟನೆ: ಸಂಪೂರ್ಣ ಸಿದ್ಧತೆಯ ನಂತರವೇ ವಿಧೇಯಕವನ್ನು ತರಲಾಗಿದೆ! – ಉಪಮುಖ್ಯಮಂತ್ರಿ ವಿಜಯ್ ಶರ್ಮಾ.
ಆಕ್ಷೇಪ: ಇಂತಹ ಕಾನೂನುಗಳು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿವೆ ಮತ್ತು ಈ ಕುರಿತಾದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ.
ಸ್ಪಷ್ಟನೆ: ಇಂತಹ ಕಾನೂನುಗಳನ್ನು ಮಾಡಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ತಡೆ ನೀಡಿಲ್ಲ. ಸಂವಿಧಾನದ ಪ್ರಕಾರ ಕಾನೂನು ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿದೆ! – ಉಪಮುಖ್ಯಮಂತ್ರಿ.
ಮತಾಂತರ ವಿರೋಧಿ ಕಠಿಣ ಕಾಯ್ದೆಗಳಿರುವ ರಾಜ್ಯಗಳು!
ರಾಜ್ಯ |
ವರ್ಷ |
ಜಾರ್ಖಂಡ್ |
2017 |
ಉತ್ತರಾಖಂಡ |
2018 |
ಹಿಮಾಚಲ ಪ್ರದೇಶ |
೨೦೧೯ |
ಉತ್ತರ ಪ್ರದೇಶ |
೨೦೨೦ |
ಮಧ್ಯಪ್ರದೇಶ |
೨೦೨೧ |
ಗುಜರಾತ್ |
೨೦೨೧ |
ಕರ್ನಾಟಕ |
೨೦೨೨ |
ಹರಿಯಾಣ |
೨೦೨೨ |
ರಾಜಸ್ಥಾನ |
೨೦೨೫ |
ಛತ್ತೀಸ್ಗಢ |
೨೦೨೬ |
ಮಹಾರಾಷ್ಟ್ರ |
೨೦೨೬ (ರಾಜ್ಯ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ಕಾನೂನು ಜಾರಿಯಾಗುವ ಹಂತದಲ್ಲಿದೆ) |
(ಮೇಲಿನ ಎಲ್ಲಾ ರಾಜ್ಯಗಳಲ್ಲಿ ಭಾಜಪ ಅಧಿಕಾರದಲ್ಲಿದ್ದಾಗಲೇ ಈ ಕಾಯ್ದೆಗಳು ಅಂಗೀಕಾರವಾಗಿವೆ.)
(ಒಡಿಶಾ (೧೯೬೭) ಮತ್ತು ಅರುಣಾಚಲ ಪ್ರದೇಶ (೧೯೭೮) ರಾಜ್ಯಗಳಲ್ಲಿಯೂ ಈ ಕಾಯ್ದೆ ಅಸ್ತಿತ್ವದಲ್ಲಿದೆ, ಆದರೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.)
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ