
‘ಸನಾತನ ಸಂಸ್ಥೆಯು ಕಲಿಸುತ್ತಿರುವ ‘ಗುರುಕೃಪಾಯೋಗಾ’ನುಸಾರ ಸಾಧನೆಯಿಂದಾಗಿ ಈವರೆಗೆ ೧೩೫ ಸಾಧಕರು ಸಂತಪದವಿಗೆ ತಲುಪಿದ್ದಾರೆ. ಅವರು ಸಂತಪದವಿಗೆ ತಲುಪಿದ್ದಾರೆ ಎಂದರೆ, ಸಮಾಜದಲ್ಲಿ ಇಂದು ಸಾಮಾನ್ಯವಾಗಿ ಕಂಡುಬರುವ ಸಂತರಂತೆ ಅವರ ಮಾನಸನ್ಮಾನಗಳು ಹೆಚ್ಚಾದವು ಎಂದರ್ಥವಲ್ಲ; ಬದಲಿಗೆ ಅವರ ಆಧ್ಯಾತ್ಮಿಕ ಸ್ತರದ ಕಾರ್ಯದ ವ್ಯಾಪ್ತಿಯು ಈಗ ವಿಸ್ತಾರಗೊಂಡಿದೆ ಎಂದರ್ಥ. ಸನಾತನದ ವ್ಯಷ್ಟಿ ಪ್ರಕೃತಿಯ ಸಂತರು ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಎದುರಾಗುವ ಸೂಕ್ಷ್ಮ ಸ್ತರದ ಅಡೆತಡೆಗಳನ್ನು ದೂರ ಗೊಳಿಸಲು ಹಾಗೂ ಸಾಧಕರು ಮತ್ತು ಹಿಂದುತ್ವನಿಷ್ಠರನ್ನು ಕೆಟ್ಟ ಶಕ್ತಿಗಳ ಆಕ್ರಮಣದಿಂದ ರಕ್ಷಿಸಲು ಹಗಲಿರುಳು ನಾಮಜಪ ಮಾಡಿ ಸೂಕ್ಷ್ಮ ಸ್ತರದ ಯುದ್ಧವನ್ನು ಮಾಡುತ್ತಿದ್ದಾರೆ. ಸಮಷ್ಟಿ ಪ್ರಕೃತಿಯ ಸಂತರು ಸಾಧಕರಿಗೆ ಮತ್ತು ಹಿಂದುತ್ವನಿಷ್ಠರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾ ಸಮಾಜದಲ್ಲಿ ಸಾತ್ತ್ವಿಕತೆಯನ್ನು ಹೆಚ್ಚಿಸುತ್ತಿದ್ದಾರೆ. ಈ ರೀತಿಯಾಗಿ ಸನಾತನದ ಸಂತರು ಮಾನಸನ್ಮಾನ ಮತ್ತು ಜನಪ್ರಿಯತೆಯಲ್ಲಿ ಸಿಲುಕಿಕೊಳ್ಳದೆ ಬ್ರಾಹ್ಮತೇಜದ ಸ್ತರದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಆಧ್ಯಾತ್ಮಿಕ ಸಾಧನೆಯನ್ನು ಮಾಡಲು ಯೋಗ್ಯ ಕಾಲಕ್ಕಾಗಿ ಕಾಯದೆ, ತಕ್ಷಣವೇ ಆರಂಭಿಸಿ !
‘ಕೆಲವರು ‘ಯೋಗ್ಯ ಕಾಲ ಬಂದಾಗ ಸಾಧನೆಯನ್ನು ಮಾಡುತ್ತೇವೆ’ ಎನ್ನುತ್ತಾರೆ; ಆದರೆ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಬಾಲ್ಯವು ಶಿಕ್ಷಣದಲ್ಲಿ, ಯೌವ್ವನವು ಸಂಸಾರದಲ್ಲಿ ಮತ್ತು ವೃದ್ಧಾಪ್ಯವು ಅನಾರೋಗ್ಯದಲ್ಲಿ ಕಳೆಯುತ್ತದೆ. ಆದುದರಿಂದ ಸಾಧನೆಗೆ ಪ್ರತ್ಯೇಕವಾದ ಸಮಯವೇ ಉಳಿಯುವುದಿಲ್ಲ. ಆದ್ದರಿಂದ, ಸಾಧನೆಗಾಗಿ ಯೋಗ್ಯ ಕಾಲಕ್ಕಾಗಿ ಕಾಯದೆ, ತಕ್ಷಣವೇ ಆರಂಭಿಸಬೇಕು !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !