|

ನವದೆಹಲಿ – ಕೇಂದ್ರ ಸಂಸ್ಕೃತಿ ಸಚಿವಾಲಯವು ದೆಹಲಿಯ ಭಾರತ ಮಂಟಪದಲ್ಲಿ ಡಿಸೆಂಬರ್ 2025 ರಲ್ಲಿ ಆಯೋಜಿಸಿದ್ದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಕಾರ್ಯಕ್ರಮಕ್ಕಾಗಿ ಆಯೋಜಕ ಸನಾತನ ಸಂಸ್ಥೆಗೆ 63 ಲಕ್ಷ ರೂಪಾಯಿ ನೀಡಿದೆ ಎಂಬ ಮಾಹಿತಿ ‘ಮಾಹಿತಿ ಹಕ್ಕು ಕಾಯ್ದೆ’ ಅಡಿಯಲ್ಲಿ ‘ದ ಕ್ವಿಂಟ್’ ಎಂಬ ಹಿಂದೂ ವಿರೋಧಿ ಜಾಲತಾಣಕ್ಕೆ ಲಭ್ಯವಾಗಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್ ಅವರು ಈ ಸುದ್ದಿಯ ಯಾವುದೇ ಸತ್ಯಾಸತ್ಯತೆ ಪರಿಶೀಲಿಸದೆ ಸರಕಾರ ಮತ್ತು ಸನಾತನ ಸಂಸ್ಥೆಯ ಮೇಲೆ ಬೇಜವಾಬ್ದಾರಿ ಆರೋಪಗಳನ್ನು ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಯಕ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಂಜಯ ಸೇಠ್, ಹಾಗೆಯೇ ದೆಹಲಿ ಸರಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಕಪಿಲ ಮಿಶ್ರಾ ಸೇರಿದಂತೆ ಹಲವು ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಂವಿಧಾನವನ್ನು ಬದಿಗಿಟ್ಟು ‘ಹಿಂದೂ ರಾಷ್ಟ್ರ’ ನಿರ್ಮಾಣ ಮಾಡಲು ಕರೆ ನೀಡುವ ಭಾಷಣಗಳಿದ್ದವು, ಹಾಗೂ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ಮತ್ತು ಬಲವಂತದ ಮತಾಂತರಕ್ಕೆ ಪ್ರಚೋದನೆ ನೀಡುವ ಭಾಷಣಗಳಿದ್ದವು ಎಂದು ಆರೋಪಿಸಿದರು.
(Delhi Sanatan Rashtra Shankhnad Mahotsav)
₹63 Lakhs for ‘Sanatan Rashtra Shankhnaad Mahotsav’ – Why Is Congress So Unsettled?
Congress & Communists are agitated over the Central Govt grant to the Sanatan Rashtra Shankhnaad Mahotsav, by @SanatanSanstha branding BJP “anti-Constitutional” and alleging anti-minority… pic.twitter.com/wMHpSeUdjD
— Sanatan Prabhat (@SanatanPrabhat) February 20, 2026
"Congress stoops to a new low to oppose the supreme honor given to 'Vande Mataram' by PM Narendra Modi" – @SanatanSanstha
"Government funding provided for the presentation and honoring of 'Vande Mataram' at the Sanatan Rashtra Shankhnaad Mahotsav in Delhi"@AbhayVartak… pic.twitter.com/qMiZpfwsFK
— Sanatan Prabhat (@SanatanPrabhat) February 20, 2026
ನಾಯಕ್ ಅವರಿಂದ ‘ಸನಾತನ’ ಸಂಸ್ಥೆಯ ಮೇಲೆ ವಿಷ ಕಾರುವಿಕೆ!
1. ಸನಾತನ ಸಂಸ್ಥೆಯಂತಹ ಸಂಘಟನೆಗಳು ‘ಸನಾತನ’ ಎಂಬ ಶಬ್ದದ ದುರುಪಯೋಗ ಮತ್ತು ಅಪಮಾನ ಮಾಡುತ್ತಾ ಬಂದಿವೆ. ನಿಜವಾದ ಸನಾತನ ಧರ್ಮವು ಇತರರಿಗೆ ಸಹಾಯ ಮಾಡುವುದಕ್ಕಾಗಿದೆಯೇ ಹೊರತು ನೋವು ನೀಡಲು ಅಲ್ಲ ಎಂದು ಸ್ಪಷ್ಟಪಡಿಸಲು ನಾಯಕ್ ಅವರು ಸಂತ ತುಳಸೀದಾಸರ ‘ರಾಮಚರಿತಮಾನಸ’ದ ಶ್ಲೋಕವನ್ನು ಉಲ್ಲೇಖಿಸಿದರು. (ಕಾಂಗ್ರೆಸ್ ಒಂದೆಡೆ ಸಂತ ತುಳಸೀದಾಸರ ‘ರಾಮಚರಿತಮಾನಸ’ವನ್ನು ಹಿಂದೂ ಸಂಘಟನೆಗಳ ಮೇಲೆ ಕೆಸರೆರಚಲು ಬಳಸುತ್ತದೆ, ಇನ್ನೊಂದೆಡೆ ಇದೇ ಕಾಂಗ್ರೆಸ್ನ ಹಿರಿಯ ನಾಯಕರಾದ ರಶೀದ್ ಅಲ್ವಿ, ದಿಗ್ವಿಜಯ್ ಸಿಂಗ್ ರಾಮಚರಿತಮಾನಸದ ಬಗ್ಗೆ ಟೀಕೆ ಮಾಡುವಾಗ ಸುಮ್ಮನಿರುತ್ತದೆ. ಕಾಂಗ್ರೆಸ್ನ ಈ ದ್ವಂದ್ವ ನೀತಿಯನ್ನು ಗಮನಿಸಿ! – ಸಂಪಾದಕರು)
समाज में धार्मिक वैमनस्य फैलाने वाले,
संविधान को ताक पर रख ‘हिन्दू राष्ट्र’ की मांग करने वाले
‘अल्पसंख्यकों’ को भारत की सीमा से बाहर फेंकने की धमकी देने वाले…
‘साम्प्रदायिक संगठन’ की Funding करना क्या ‘मोदी सरकार’ का नया प्रयोग है ???
आज दिल्ली में मेरी ‘प्रेस वार्ता’ 🙏 https://t.co/KyDl2q0EE0
— Dr. Ragini Nayak (@NayakRagini) February 18, 2026
2. ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಜಾತ್ಯತೀತ ರಚನೆ, ಭಾತೃತ್ವ ಮತ್ತು ಸಂವಿಧಾನವನ್ನು ನಾಶ ಮಾಡುವ ಉದ್ದೇಶದಿಂದ ‘ವಿಷಕಾರಿ ಸಿದ್ಧಾಂತ’ವನ್ನು ಹರಡುತ್ತಿದೆ.
3. ಪ್ರಧಾನಿ ಮೋದಿ ದ್ವೇಷಪೂರಿತ ಭಾಷಣಗಳ ಬಗ್ಗೆ ಮೌನ ವಹಿಸುತ್ತಾರೆ. (ಒಂದು ವೇಳೆ ‘ಪ್ರಧಾನಿ ಮೌನ ವಹಿಸುತ್ತಾರೆ’ ಎಂಬ ಸುಳ್ಳು ಆರೋಪವನ್ನು ಒಪ್ಪಿಕೊಂಡರೂ, ಈ ದೇಶವು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಡೆಯುತ್ತದೆಯೇ ಹೊರತು ಒಬ್ಬ ರಾಜಕೀಯ ಪಕ್ಷದ ನಾಯಕನ ಮೇಲಲ್ಲ! ರಾಗಿಣಿ ನಾಯಕ್ ಮತ್ತು ಅವರ ಕಾಂಗ್ರೆಸ್ಗೆ ದ್ವೇಷಪೂರಿತ ಭಾಷಣಗಳ ಬಗ್ಗೆ ಅಷ್ಟು ಕಳಕಳಿ ಇದ್ದರೆ, ಅಂತಹ ಹೇಳಿಕೆ ನೀಡುವವರ ವಿರುದ್ಧ ದೂರು ಏಕೆ ದಾಖಲಿಸುತ್ತಿಲ್ಲ? – ಸಂಪಾದಕರು)
4. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಮುಸ್ಲಿಂ ಸಮುದಾಯದ ಬಗ್ಗೆ ಮಾಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿದರು. ಈ ಸಮಯದಲ್ಲಿ ನಾಯಕ್ ಅವರು, ಇಂತಹ ಶಬ್ದಗಳ ದಾಳಿ ಅಲ್ಪಸಂಖ್ಯಾತರ ಮೇಲಲ್ಲ, ಬದಲಾಗಿ ಈ ದೇಶದ ಸಂವಿಧಾನದ ಮೇಲೆ ಮಾಡಲಾಗುತ್ತಿದೆ ಎಂಬುದನ್ನು ನಾವು ನೆನಪಿಡಬೇಕು ಎಂದರು. ಈ ವೇಳೆ ನಾಯಕ್ ಅವರು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದಿದ್ದರು. (ಸಂವಿಧಾನದಲ್ಲಿ ಹಲವು ಬಾರಿ ತಿದ್ದುಪಡಿ ಮಾಡಿ ಕಾಂಗ್ರೆಸ್ ಸಂವಿಧಾನದ ಹತ್ಯೆ ಮಾಡಿದೆ. ಅದರ ರಕ್ತಸಿಕ್ತ ಕೈಗಳು ಮತ್ತೆ ಸಂವಿಧಾನದ ಪ್ರತಿಯನ್ನು ಮುಟ್ಟುತ್ತಿರುವುದು ಸಂವಿಧಾನದ ಮೇಲಿನ ದಾಳಿಯಲ್ಲವೇ? – ಸಂಪಾದಕರು)
5. ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ನಾಯಕ್ ಅವರು, ಬೆಲೆ ಏರಿಕೆ, ನಿರುದ್ಯೋಗ ಮತ್ತು ಆರ್ಥಿಕತೆಯ ಸ್ಥಿತಿಯಂತಹ ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ದ್ವೇಷಪೂರಿತ ಭಾಷಣಗಳನ್ನು ಬಳಸಲಾಗುತ್ತದೆ ಎಂದರು.
ಏನಿದು ಪ್ರಕರಣ?
‘ದ ಕ್ವಿಂಟ್’ ಜಾಲತಾಣವು ‘ಮುಸಲ್ಮಾನರನ್ನು ದೇಶದಿಂದ ಹೊರಹಾಕಿ’ ಎಂದು ಕರೆ ನೀಡಿದ ಕಾರ್ಯಕ್ರಮಕ್ಕೆ ಮೋದಿ ಸರಕಾರ ನೀಡಿತು 63 ಲಕ್ಷ ರೂಪಾಯಿ!’ ಎಂಬ ತಲೆಬರಹದಡಿ ಸುದ್ದಿಯೊಂದನ್ನು ಪ್ರಕಟಿಸಿದೆ. ಇದರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿ ಅದರಿಂದ ದೊರೆತ ಉತ್ತರದ ಒಂದು ಪ್ಯಾರಾವನ್ನು ಪ್ರಕಟಿಸಿದೆ. ಅದರಲ್ಲಿ, ‘ಭಾರತ ಸರಕಾರದ ಸಂಸ್ಕೃತಿ ಸಚಿವಾಲಯವು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150 ನೇ ವರ್ಷಾಚರಣೆಯ ಅಂಗವಾಗಿ 13 ರಿಂದ 15 ಡಿಸೆಂಬರ್ 2025 ರ ಅವಧಿಯಲ್ಲಿ ನವದೆಹಲಿಯ ಭಾರತ ಮಂಟಪದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಕಾರ್ಯಕ್ರಮ ಆಯೋಜಿಸಲು ಸನಾತನ ಸಂಸ್ಥೆ, ಸನಾತನ ಆಶ್ರಮ, 24/ಬಿ, ರಾಮನಾಥಿ ಗ್ರಾಮ, ಬಾಂದೊಡಾ, ಫೋಂಡಾ, ಗೋವಾ – 403401ಗೆ 63 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಮಾಡಿದೆ. ವೆಚ್ಚದ ವಿವರಗಳು ಸಂಸ್ಕೃತಿ ಸಚಿವಾಲಯದ ಬಳಿ ಲಭ್ಯವಿಲ್ಲ!’’ (ಸಚಿವಾಲಯವು ‘ವಂದೇ ಮಾತರಂ’ ಪ್ರಚಾರಕ್ಕಾಗಿ ಈ ಹಣ ನೀಡಿದೆ ಎಂದು ಪ್ಯಾರಾದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ವಾಸ್ತವದಲ್ಲಿ ‘ವಂದೇ ಮಾತರಂ’ ಆಧಾರಿತ ಅತ್ಯಂತ ಸುಂದರ ಪ್ರದರ್ಶನವನ್ನು ಮಹೋತ್ಸವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೀಗಿದ್ದರೂ ‘ದ ಕ್ವಿಂಟ್’ ಈ ಅಂಶವನ್ನು ಸಂಪೂರ್ಣವಾಗಿ ಮರೆಮಾಚಿದೆ. ಇದರಿಂದ ಈ ಜಾಲತಾಣದ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಮೂಡುತ್ತದೆ! – ಸಂಪಾದಕರು) ‘ಸುದರ್ಶನ್ ಟಿವಿ’ಯ ಪ್ರಧಾನ ಸಂಪಾದಕ ಸುರೇಶ ಚವ್ಹಾಣ್ಕೆ, ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಉಪಾಧ್ಯಾಯ, ‘ಹಿಂದೂ ಫಂಡ್’ನ ರಾಹುಲ ದಿವಾಣ್ ಅವರ ಹೇಳಿಕೆಗಳನ್ನು ಸಂದರ್ಭಕ್ಕೆ ವ್ಯತಿರಿಕ್ತವಾಗಿ ಈ ಸುದ್ದಿಯಲ್ಲಿ ಸೇರಿಸಲಾಗಿದೆ. ಇದರ ಮೂಲಕ ಈ ಕಾರ್ಯಕ್ರಮವು ಸಂಪೂರ್ಣ ಮುಸ್ಲಿಂ ವಿರೋಧಿಯಾಗಿದೆ ಎಂದು ಬಿಂಬಿಸುವ ಹತಾಶ ಮತ್ತು ಪೊಳ್ಳು ಪ್ರಯತ್ನವನ್ನು ‘ದ ಕ್ವಿಂಟ್’ ಮಾಡಿದೆ. |
ಸನಾತನ ಧರ್ಮದ ರಕ್ಷಣೆಗಾಗಿ ‘ಮಿಂಚಿನ’ ವೇಗದಲ್ಲಿ ಕಾರ್ಯನಿರ್ವಹಿಸುವ ವಕೀಲ ವಿಷ್ಣು ಜೈನ್!
‘ಸನಾತನ ಪ್ರಭಾತ’ವು ಮಹೋತ್ಸವದ ಒಬ್ಬ ಭಾಷಣಕಾರರಾಗಿ ವಕೀಲ ವಿಷ್ಣು ಜೈನ್ ಅವರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ವಿನಂತಿಸಿದಾಗ ಅವರು ತಕ್ಷಣವೇ ಅದನ್ನು ಕಳುಹಿಸಿದರು. ಇದಕ್ಕೆ ‘ನೀವು ಮಿಂಚಿನ ವೇಗದಲ್ಲಿ ಪ್ರತಿಕ್ರಿಯೆ ಕಳುಹಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಸನಾತನ ಪ್ರಭಾತ ತಿಳಿಸಿದಾಗ, ‘ಸನಾತನ’ದ ಕಾರ್ಯವು ಮಿಂಚಿನ ವೇಗದಲ್ಲಿಯೇ ನಡೆಯಬೇಕು ಎಂದು ಜೈನ್ ಉತ್ತರಿಸಿದರು. |
ಸರಕಾರದ ಯಾವುದೇ ಸಂವಿಧಾನಾತ್ಮಕ ಅಥವಾ ಕಾನೂನುಬದ್ಧ ತಪ್ಪಿಲ್ಲ! – ವಕೀಲ ವಿಷ್ಣು ಶಂಕರ್ ಜೈನ್

ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರೊಂದಿಗೆ ‘ಸನಾತನ ಪ್ರಭಾತ’ ಸಂವಾದ ನಡೆಸಿತು. ಈ ವೇಳೆ ಅವರು, ಸರಕಾರವು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ 63 ಲಕ್ಷ ರೂಪಾಯಿ ನೀಡಿದೆ ಎಂಬುದು ಕೇವಲ ಆರೋಪವಾಗಿದೆ. ಇದಕ್ಕೆ ಸಾಕ್ಷ್ಯವೇನು ಎಂಬುದು ಚರ್ಚೆಯ ವಿಷಯವಾಗಬಹುದು. ಮುಖ್ಯವಾಗಿ ಈ ಆರೋಪವನ್ನು ಒಪ್ಪಿಕೊಂಡರೂ ಸಹ, ಸರಕಾರ ಇಂತಹ ಕಾರ್ಯಕ್ರಮಕ್ಕೆ ಧನಸಹಾಯ ನೀಡುವುದರಲ್ಲಿ ಯಾವುದೇ ಸಂವಿಧಾನಾತ್ಮಕ ಅಥವಾ ಕಾನೂನುಬದ್ಧ ತಪ್ಪಿಲ್ಲ.

ರಾಷ್ಟ್ರದ ಅಸ್ಮಿತೆ ಕಾಪಾಡಲು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸರಕಾರ ಯಾವಾಗಲೂ ಹಣ ನೀಡಬಹುದು. ಇದರ ಮೇಲೆ ಸಂವಿಧಾನದ 27 ನೇ ವಿಧಿಯ ನಿರ್ಬಂಧವಿದೆಯೇ ಹೊರತು ಅದು ಇಲ್ಲಿ ಅನ್ವಯಿಸುವುದಿಲ್ಲ. ಆದ್ದರಿಂದ ‘ಕ್ವಿಂಟ್’ ಮತ್ತು ‘ಕಾಂಗ್ರೆಸ್’ ವಾದದಂತೆ ‘ಸರಕಾರ 63 ಲಕ್ಷ ರೂಪಾಯಿ ನೀಡಿದೆ’ ಎಂದುಕೊಂಡರೂ ಅದರಲ್ಲಿ ಯಾವುದೇ ಸಂವಿಧಾನಾತ್ಮಕ ಲೋಪವಿಲ್ಲ!
ಪ್ರಧಾನಿ ನರೇಂದ್ರ ಮೋದಿ ಅವರು ‘ವಂದೇ ಮಾತರಂ’ಗೆ ನೀಡಿದ ಸರ್ವೋಚ್ಚ ಗೌರವವನ್ನು ವಿರೋಧಿಸಲು ಕಾಂಗ್ರೆಸ್ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ!
ದೆಹಲಿಯ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ “ವಂದೇ ಮಾತರಂ” ಗೀತೆಯ ಪ್ರದರ್ಶನ ಮತ್ತು ಗೌರವಕ್ಕಾಗಿ ಸರಕಾರಿ ಅನುದಾನ!

ನವದೆಹಲಿ – ಸನಾತನ ಸಂಸ್ಥೆಯು ತನ್ನ ಬೆಳ್ಳಿ ಹಬ್ಬದ ಅಂಗವಾಗಿ ಡಿಸೆಂಬರ್ 13 ರಿಂದ 15 ರವರೆಗೆ ದೆಹಲಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಆಯೋಜಿಸಿತ್ತು. ಈ ನಿಮಿತ್ತ ದೇಶಾದ್ಯಂತ ವಿವಿಧ ಸಂಸ್ಥೆಗಳು ಮತ್ತು ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇಶಾದ್ಯಂತ ಸಾವಿರಾರು ಹಿಂದುತ್ವವಾದಿಗಳು ಬರುವುದರಿಂದ ಅವರ ಮುಂದೆ ‘ಗೌ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ವಂದೇ ಮಾತರಂಗೆ ಗೌರವ ಸಲ್ಲಲಿ’ ಎಂಬ ಉದ್ದೇಶದಿಂದ ಸನಾತನ ಸಂಸ್ಥೆಯು ‘ವಂದೇ ಮಾತರಂ’ ಗೀತೆಯ ಭವ್ಯ ಪ್ರದರ್ಶನವನ್ನು ಭಾರತ ಮಂಟಪದ ಪಕ್ಕದ ಹಾಲ್ ನಂ. 12 ರಲ್ಲಿ 3 ದಿನಗಳ ಕಾಲ ಆಯೋಜಿಸಿತ್ತು. ಅಲ್ಲದೆ ಮುಖ್ಯ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಸಾಮೂಹಿಕ ಗಾಯನವನ್ನು ಹಮ್ಮಿಕೊಳ್ಳಲಾಗಿತ್ತು.
Delhi Resonates with the sound of Vande Mataram! 🔊
Bharat Mandapam witnessed a collective chorus of the song that ignited the flame of patriotism in the heart of millions.
Be part of the roar!🚩
Watch Live : https://t.co/iQNDe1XlCO #Rise_For_SanatanRashtra #VandeMataram150 pic.twitter.com/8pFeoKAs8A— Sanatan Rashtra Shankhnad Mahotsav 🙏🏻☀️🚩 (@SRSmahotsav) December 13, 2025
ವಂದೇ ಮಾತರಂ ಪ್ರದರ್ಶನದ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ಶಸ್ತ್ರಾಸ್ತ್ರಗಳ ಪ್ರದರ್ಶನವೂ ಇತ್ತು. ಈ ಪ್ರದರ್ಶನದ ಉದ್ಘಾಟನೆಯನ್ನು ಸಚಿವರ ಹಸ್ತದಿಂದ ಮಾಡಲು ನಿರ್ಧರಿಸಲಾಗಿತ್ತು ಮತ್ತು ಅದಕ್ಕಾಗಿ ನಿಯಮಿತವಾಗಿ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಎಲ್ಲಾ ಆಡಳಿತಾತ್ಮಕ ಅನುಮತಿಗಳನ್ನು ಪಡೆದು ಸರಕಾರವು ಅದಕ್ಕೆ ಸಮ್ಮತಿ ನೀಡಿತ್ತು. ಇದನ್ನು ಹೊರತುಪಡಿಸಿ ಉಳಿದ ಕಾರ್ಯಕ್ರಮವು ಸನಾತನ ಸಂಸ್ಥೆಯ ಬೆಳ್ಳಿ ಹಬ್ಬದ ಕಾರ್ಯಕ್ರಮವಾಗಿತ್ತು ಮತ್ತು ಅದರ ಹೆಸರು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಎಂದಾಗಿತ್ತು. ಆದ್ದರಿಂದ ಇದನ್ನು ಹಿಂದೂ ರಾಷ್ಟ್ರದ ಮಹೋತ್ಸವ ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಸನಾತನ ಸಂಸ್ಥೆಯ ವಕ್ತಾರ ಅಭಯ ವರ್ತಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
A Congress spokesperson stooped to claiming, “There was neither ‘Va’ nor ‘Ma’ of Vande Mataram at the Sanatan Rashtra Shankhnad Mahotsav.”
Here’s the truth. Sanatan Sanstha organized a 3-day grand exhibition on Vande Mataram at the Mahotsav, marking 150 years of the anthem that… pic.twitter.com/H3k3inmEOY
— Sanatan Sanstha (@SanatanSanstha) February 20, 2026
ಶ್ರೀ. ವರ್ತಕ ಅವರು ಮಾತು ಮುಂದುವರೆಸುತ್ತಾ,
ಈ ಕಾರ್ಯಕ್ರಮದಲ್ಲಿ ಯಾವುದೇ ಸಂವಿಧಾನ ವಿರೋಧಿ ಭಾಷಣ ನಡೆದಿಲ್ಲ. ಎಲ್ಲಾ ಭಾಷಣಕಾರರು ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಚರ್ಚಿಸಿದರು ಮತ್ತು ಅದಕ್ಕೆ ಪರಿಹಾರಗಳನ್ನು ತಿಳಿಸಿದರು. ವಾಸ್ತವದಲ್ಲಿ ತೆಲಂಗಾಣದ ಕಾಂಗ್ರೆಸ್ ಮುಖ್ಯಮಂತ್ರಿ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದುಕೊಂಡು “ಕಾಂಗ್ರೆಸ್ ಎಂದರೆ ಮುಸ್ಲಿಂ ಮತ್ತು ಮುಸ್ಲಿಂ ಎಂದರೆ ಕಾಂಗ್ರೆಸ್” ಎಂಬ ಸಂವಿಧಾನ ವಿರೋಧಿ ಘೋಷಣೆ ಕೂಗುತ್ತಾರೆ. ಕಾಂಗ್ರೆಸ್ನ ಅಂದಿನ ಪ್ರಧಾನಿ “ಈ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸಲ್ಮಾನರದ್ದು” ಎನ್ನುತ್ತಾರೆ. ಸುಪ್ರೀಂ ಕೋರ್ಟ್ ಹಲವು ಬಾರಿ ತಿರಸ್ಕರಿಸಿದರೂ ಧರ್ಮದ ಆಧಾರದ ಮೇಲೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಘೋಷಿಸುತ್ತಾರೆ. ಕೇರಳದಲ್ಲಿ ಕಾಂಗ್ರೆಸ್ ನಾಯಕರು ‘ಬೀಫ್ ಬ್ಯಾನ್’ ವಿರೋಧಿಸಲು ರಸ್ತೆಯಲ್ಲಿ ಗೋಹತ್ಯೆ ಮಾಡುತ್ತಾರೆ. ಇವೆಲ್ಲವೂ ಸಂವಿಧಾನ ವಿರೋಧಿ ಅಲ್ಲವೇ? ಆದ್ದರಿಂದ ಕಾಂಗ್ರೆಸ್ ಮೊದಲು ತನ್ನ ಪಾಪಗಳನ್ನು ನೋಡಿಕೊಳ್ಳಲಿ ಎಂದು ವರ್ತಕ ಹೇಳಿದರು.
ಕಾಂಗ್ರೆಸ್ ಮಾಡಿದ ಸಿಖ್ಖರ ಹತ್ಯಾಕಾಂಡವನ್ನು ಜನರು ಇಂದಿಗೂ ಮರೆತಿಲ್ಲ. ಬಾಟ್ಲಾ ಹೌಸ್ ಭಯೋತ್ಪಾದಕರಿಗಾಗಿ ಕಣ್ಣೀರು ಹಾಕುವುದು, ಮುಂಬಯಿಯ 26/11 ಭಯೋತ್ಪಾದಕ ದಾಳಿಯಲ್ಲಿ ಅಜ್ಮಲ್ ಕಸಬ್ ಸೇರಿದಂತೆ ಪಾಕಿಸ್ತಾನಿ ಭಯೋತ್ಪಾದಕರು ಭಾಗಿಯಾಗಿರುವ ಪುರಾವೆಗಳಿದ್ದರೂ ಕಾಂಗ್ರೆಸ್ ನಾಯಕರು “26/11 ರ ದಾಳಿ ಆರ್.ಎಸ್.ಎಸ್. ಸಂಚು!” ಎಂದು ಆರ್.ಎಸ್.ಎಸ್. ಅನ್ನು ದೂಷಿಸುವ ಪುಸ್ತಕದ ಬಿಡುಗಡೆಗೆ ಹಾಜರಾಗುತ್ತಾರೆ.
१. शासकीय निधि केवल 'वंदे मातरम्' व छ शिवाजी महाराज के शस्त्रप्रदर्शन हेतु थी।
२. कोई संविधानविरोधी भाषण नहीं हुआ; हमने केवल हिंदू अधिकारोंपर बात की।
३. किसी न्यायालयने @SanatanSanstha को कभी दोषी नहीं ठहराया है।
४. हमें सांप्रदायिक कहनेवालों पर हम मानहानि का मुकदमा दर्ज करेंगे। https://t.co/BQbX7T5rbd— Chetan Rajhans (@1chetanrajhans) February 20, 2026
ಅಂದಿನ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರು, ನಾನು ‘ಹಿಂದೂ ಭಯೋತ್ಪಾದನೆ’ ಎಂಬ ಶಬ್ದ ಬಳಸಬಾರದಿತ್ತು ಆದರೆ ಪಕ್ಷ ಹೇಳಿದ್ದರಿಂದ ಬಳಸಿದೆ ಎಂದು ಈಗ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸುವ ‘ಥಿಯರಿ’ ಅವರಿಗೆ ಯಾರು ಹೇಳಿಕೊಟ್ಟಿದ್ದರು ಎಂಬುದನ್ನು ಕಾಂಗ್ರೆಸ್ ಏಕೆ ಬಹಿರಂಗಪಡಿಸುತ್ತಿಲ್ಲ? ಇದೇ ಸಿದ್ಧಾಂತದ ಆಧಾರದ ಮೇಲೆ ಸನಾತನ ಸಂಸ್ಥೆಯನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿತ್ತು. ನಮಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ಯಾವುದೇ ಪ್ರಕರಣದಲ್ಲಿ ನ್ಯಾಯಾಲಯವು ಸನಾತನ ಸಂಸ್ಥೆಯನ್ನು ದೋಷಿ ಎಂದು ಘೋಷಿಸದಿದ್ದರೂ, ನಮ್ಮನ್ನು ಭಯೋತ್ಪಾದಕರೆಂದು ಕರೆಯುವ ಕಾಂಗ್ರೆಸ್ ನಾಯಕರ ಮೇಲೆ ಮತ್ತು ಸಂಬಂಧಿತ ಪೋರ್ಟಲ್ಗಳ ಮೇಲೆ ಮಾನಹಾನಿ ಮೊಕದ್ದಮೆ ದಾಖಲಿಸಲಾಗುವುದು ಎಂದು ವರ್ತಕ ತಿಳಿಸಿದರು.
ಸಂಪಾದಕೀಯ ನಿಲುವು
|


‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !
ದೇಶದ ಅಭಿವೃದ್ಧಿಗೆ ಮೌಲ್ಯಾಧಾರಿತ ಪತ್ರಿಕೋದ್ಯಮ ಅತ್ಯಂತ ಪ್ರಮುಖವಾದುದು! – ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್
‘ನಿಮಗಿಂತ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹೆಚ್ಚು ಶಕ್ತಿಶಾಲಿಯೇ ?’ ಎಂಬ ಪ್ರಶ್ನೆಗೆ ಪಾಕ್ ರಕ್ಷಣಾ ಸಚಿವರು ತಬ್ಬಿಬ್ಬು !