ಅಲ್ಪಸಂಖ್ಯಾತ ಯುವಕರಿಗೆ ಕೇಂದ್ರದ ಕೌಶಲ್ಯ ತರಬೇತಿ ಯೋಜನೆ : Minority Skill Development

ನವ ದೆಹಲಿ – ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ‘ಪ್ರಧಾನಮಂತ್ರಿ ವಿಕಾಸ ಯೋಜನೆ’ಯ ಅಡಿಯಲ್ಲಿ ‘ಭಾರತ ಸಂಚಾರ ನಿಗಮ ನಿಯಮಿತ’ (ಬಿ.ಎಸ್.ಎನ್.ಎಲ್.) ಕೌಶಲ್ಯ ಅಭಿವೃದ್ಧಿ ಉಪಕ್ರಮವನ್ನು ಪ್ರಾರಂಭಿಸಿದೆ. ಇದರಲ್ಲಿ ಅಲ್ಪಸಂಖ್ಯಾತ ಸಮಾಜದ ಯುವಕ-ಯುವತಿಯರಿಗೆ ಉಚಿತ ದೂರಸಂಪರ್ಕ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯನ್ನು ೩೦ ವಿದ್ಯಾರ್ಥಿಗಳ ತಂಡದಲ್ಲಿ ನೀಡಲಾಗುವುದು. ಇದರಲ್ಲಿ ಪ್ರತ್ಯಕ್ಷ ಬೋಧನಾ ಅಧಿವೇಶನಗಳ ಜೊತೆಗೆ ಅನುಭವ ಆಧಾರಿತ ಶಿಕ್ಷಣವೂ ಸೇರಿದೆ. ಈ ತರಬೇತಿಯ ಅವಧಿಯು ೬೦೦ ಗಂಟೆಗಳಿಗಿಂತ ಹೆಚ್ಚಾಗಿದ್ದು, ಅದರಲ್ಲಿ ೩ ತಿಂಗಳ ತರಬೇತಿ ಮತ್ತು ೧ ತಿಂಗಳ ಪ್ರತ್ಯಕ್ಷ ಕೆಲಸದ ಅನುಭವವನ್ನು ಒಳಗೊಂಡಿದೆ. ಮುಸಲ್ಮಾನ, ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮಾಜದ ೧೮ ರಿಂದ ೪೫ ವರ್ಷ ವಯಸ್ಸಿನ ಯುವಕರು ಈ ಯೋಜನೆಯಲ್ಲಿ ಅರ್ಹರಾಗಿದ್ದಾರೆ. ಹನ್ನೆರಡನೇ ತರಗತಿ ತೇರ್ಗಡೆಯಾದ ಯುವಕರು, ಹಾಗೂ ಪದವೀಧರರು, ಸ್ನಾತಕೋತ್ತರರು, ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ಕೋರ್ಸ್‌ಗಳ ವಿದ್ಯಾರ್ಥಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು.

ಈ ತರಬೇತಿಯಲ್ಲಿ ಬ್ರಾಡ್‌ ಬ್ಯಾಂಡ್ ನೆಟ್‌ ವರ್ಕ್ ಟೆಕ್ನಿಷಿಯನ್ ಮತ್ತು ವೈರ್‌ ಲೆಸ್ ನೆಟ್‌ ವರ್ಕ್ ಟೆಕ್ನಿಷಿಯನ್ ಕೋರ್ಸ್‌ಗಳ ತರಬೇತಿಯನ್ನು ನೀಡಲಾಗುವುದು. ಅರ್ಹ ತರಬೇತಿದಾರರಿಗೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಇವರಿಗೆ ವಸತಿಗೃಹ ಮತ್ತು ಭೋಜನದ ವ್ಯವಸ್ಥೆಗೆ ಹಣ ಪಾವತಿಸಬೇಕಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ‘ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್’ನ ಪ್ರಮಾಣಪತ್ರವನ್ನು ನೀಡಲಾಗುವುದು.

ಸಂಪಾದಕೀಯ ನಿಲುವು

  • ಭಾರತ ಜಾತ್ಯತೀತ ದೇಶವಾಗಿರುವಾಗ, ಧರ್ಮದ ಆಧಾರದ ಮೇಲೆ ಸರಕಾರವು ಯಾರಿಗೂ ಸ್ವತಂತ್ರ ಉಪಕ್ರಮದ ಅಡಿಯಲ್ಲಿ ಸೌಲಭ್ಯಗಳನ್ನು ನೀಡಬಾರದು, ಎಂದೇ ಹಿಂದೂಗಳಿಗೆ ಅನಿಸುತ್ತದೆ!
  • ದೇಶದ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಅಲ್ಲಿ ಮಾತ್ರ ಅವರಿಗೆ ಅಲ್ಪಸಂಖ್ಯಾತರೆಂದು ಯಾವುದೇ ಸೌಲಭ್ಯ ಸಿಗುತ್ತಿಲ್ಲ, ಇದರ ಬಗ್ಗೆ ಸರಕಾರ ಯಾವಾಗ ಯೋಚಿಸಲಿದೆ?