ದೈವೀ ಬಾಲಕರನ್ನು ರೂಪಿಸುವ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಮಾರ್ಗದರ್ಶನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಒಮ್ಮೆ ನನಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸತ್ಸಂಗ ಲಭಿಸಿತು. ಆಗ ಅವರು ನೀಡಿದ ಮಾರ್ಗದರ್ಶನವನ್ನು ಮುಂದೆ ನೀಡಲಾಗಿದೆ.

೧. ಮಕ್ಕಳ ಆಧ್ಯಾತ್ಮಿಕ ಮಟ್ಟ ಉತ್ತಮವಾಗಿದ್ದರೂ, ಪೋಷಕರು ಅವರಿಗೆ ವ್ಯಾವಹಾರಿಕ ವಿಷಯಗಳನ್ನು ಕಲಿಸುವುದು ಆವಶ್ಯಕ !

ಸೌ. ಋತುಜಾ ನಾಟೆ : ‘ನನ್ನ ಮಗಳ ಆಧ್ಯಾತ್ಮಿಕ ಮಟ್ಟ ಉತ್ತಮವಾಗಿದೆ; ಆದರೆ ಕೆಲವೊಮ್ಮೆ ಅವಳಲ್ಲಿ ಗಾಂಭೀರ್ಯ ಇರುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮಗಳ ಆಧ್ಯಾತ್ಮಿಕ ಮಟ್ಟ ಎಷ್ಟಿದೆ ?

ಸೌ. ಋತುಜಾ ನಾಟೆ : ಆಧ್ಯಾತ್ಮಿಕ ಮಟ್ಟ ಶೇ. ೬೫ ರಷ್ಟಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮಟ್ಟ ಶೇ. ೬೫ ರಷ್ಟಿದೆ ! ತುಂಬಾ ಒಳ್ಳೆಯದು.

ಸೌ. ಋತುಜಾ ನಾಟೆ

ಸೌ. ಋತುಜಾ ನಾಟೆ : ಮಗಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬರುತ್ತವೆ. ಅದು ಅವಳ ಮೇಲೆ ಪರಿಣಾಮ ಬೀರುವುದಿಲ್ಲ. ಅವಳಿಗೆ ಅಧ್ಯಯನದ ಗಾಂಭೀರ್ಯವಿಲ್ಲ. ಮಗಳ ಆಧ್ಯಾತ್ಮಿಕ ಮಟ್ಟ ಉತ್ತಮವಾಗಿರುವಾಗ, ನಾನು ಅವಳಿಗೆ ಇದನ್ನು ಹೇಗೆ ಹೇಳಲಿ ?, ಎಂದು ನನಗೆ ಅನಿಸುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಒಂದು ವಿಷಯ ಗಮನದಲ್ಲಿಡಿ. ‘ಮಗಳ ಆಧ್ಯಾತ್ಮಿಕ ಮಟ್ಟ ಹೆಚ್ಚಿರುವಾಗ ನಾವು ಅವಳಿಗೆ ಹೇಗೆ ಹೇಳಲಿ ? ಎಂದು ತಂದೆ-ತಾಯಿ ಯೋಚಿಸಬಾರದು. ಪೋಷಕರಿಗೆ ವ್ಯಾವಹಾರಿಕ ವಿಷಯಗಳ ಅನುಭವ ಇರುತ್ತದೆ. ಈ ಚಿಕ್ಕ ಮಕ್ಕಳಿಗೆ ವ್ಯಾವಹಾರಿಕ ಅನುಭವ ಇರುವುದಿಲ್ಲ ? ನೀವು ಮಗಳೊಂದಿಗೆ ಮಾತನಾಡಬೇಕು ಮತ್ತು ಅವಳಿಗೆ ವ್ಯಾವಹಾರಿಕ ವಿಷಯಗಳನ್ನು ಕಲಿಸಬೇಕು. ಉದಾಹರಣೆಗೆ, ಶಾಲಾ ಅಧ್ಯಯನ, ಸಮವಯಸ್ಸಿನ ಸ್ನೇಹಿತ- ಸ್ನೇಹಿತೆಯರೊಂದಿಗೆ ಹೇಗೆ ವರ್ತಿಸಬೇಕು ? ಹೇಗೆ ಆಟವಾಡಬೇಕು ಎಂಬುದನ್ನು ಹೇಳಿಕೊಡಿ.