ಪಿತೃಪಕ್ಷದ ನಿಮಿತ್ತ…

ಶ್ರಾದ್ಧಾದಿ ಕರ್ಮಗಳನ್ನು ವಿರೋಧಿಸುವುದು, ಅದರ ಹಿಂದಿನ ನಿಲುವನ್ನು ದುರ್ಲಕ್ಷಿಸುವುದು ಮತ್ತು ಬೇರೆ-ಬೇರೆ ಸ್ಮರಣದಿನಗಳನ್ನು, ಜಯಂತಿಗಳನ್ನು ಆಚರಿಸುವಲ್ಲಿ ಉತ್ಸಾಹದಿಂದ ಭಾಗವಹಿಸುವುದು, ಇದ್ಯಾವ ಬುದ್ಧಿವಾದ ? ವಿವಿಧ ಸನ್ಮಾನ ಸಮಾರಂಭಗಳು, ಪದವಿ ಪ್ರಶಸ್ತಿಗಳ ವಿತರಣೆ, ರಜತ ಮಹೋತ್ಸವ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವ, ಅಮೃತ ಮಹೋತ್ಸವ, ಕ್ರಾಂತಿದಿನ ಇವುಗಳ ನಿಮಿತ್ತ ನಡೆಯುವ ವಿವಿಧ ಕಾರ್ಯಕ್ರಮಗಳು, ಶೋಭಾಯಾತ್ರೆಗಳು, ಚರ್ಚಾಗೋಷ್ಠಿಗಳು, ವ್ಯಾಖ್ಯಾನಸರಣಿಗಳು, ಇವೆಲ್ಲ ವಿಭಿನ್ನ ರೀತಿಯ ಕರ್ಮಕಾಂಡಗಳು, ಶ್ರಾದ್ಧ ಮತ್ತು ತರ್ಪಣಗಳಲ್ಲವೇ ?

ತದ್ವಿರುದ್ಧ ಇವೆಲ್ಲಾ ಕಾರ್ಯಗಳು ಹೆಚ್ಚು ದುಬಾರಿ, ಸಮಯ ಮತ್ತು ಸ್ಥಳದ ವ್ಯರ್ಥ, ಭ್ರಷ್ಟಾಚಾರದಿಂದ ಕೂಡಿದ ಮತ್ತು ಪರಸ್ಪರ ದ್ವೇಷವನ್ನು ಹೆಚ್ಚಿಸುವಂತಹವು, ಹೀಗೆ ಇವೆಲ್ಲ ಕೆಲಸಗಳಿವೆ. ಈ ಎಲ್ಲ ಸಮಾರಂಭಗಳ ಸಂದರ್ಭದಲ್ಲಿ ಗುಂಡಾಗಿರಿ (ಗಲಭೆ) ನಡೆಯುತ್ತದೆ ಅದು ಮತ್ತೊಂದು ವಿಷಯ.ಮನೆಮನೆಗಳಲ್ಲಿ ನಡೆಯುತ್ತಿದ್ದ, ನಡೆಯುತ್ತಿರುವ ಶ್ರಾದ್ಧಾದಿ ಕರ್ಮಕಾಂಡಗಳು ಆಧುನಿಕ ಸಮಾರಂಭದ ಶ್ರಾದ್ಧಗಳಿಗಿಂತ ಎಷ್ಟೋ ಪಟ್ಟು ಸರಳ ಮತ್ತು ಸಾತ್ತ್ವಿಕವಾಗಿದ್ದವು. ಅವು ಕೃತಜ್ಞತೆಯಂತಹ ಉನ್ನತ ಭಾವನೆಯನ್ನು ಪೋಷಿಸುತ್ತಿದ್ದವು. ಕೌಟುಂಬಿಕ ಸದ್ಭಾವನೆಯನ್ನು ಕಾಪಾಡುತ್ತಿದ್ದವು ಮತ್ತು ಹೆಚ್ಚಿಸುತ್ತಿದ್ದವು ಮತ್ತು ಪ್ರತಿಯೊಂದು ಮನೆಯಲ್ಲಿ ಇಂತಹ ಕಾರ್ಯಗಳು ನಡೆಯುತ್ತಿದ್ದುದರಿಂದ ‘ನಾವೆಲ್ಲರೂ ಒಂದೇ, ಸಂಪ್ರದಾಯದ ಭಾಗವಾಗಿದ್ದೇವೆ, ಪರಸ್ಪರರ ಸಮಾಜ ಬಂಧುಗಳಾಗಿದ್ದೇವೆ’, ಎಂಬ ಭಾವನಿಕ ಐಕ್ಯತೆ ತಿಳಿದೋ ಅಥವಾ ತಿಳಿಯದೆಯೋ ಪ್ರತಿಯೊಬ್ಬರ ಹೃದಯದಲ್ಲಿ ಜಾಗೃತವಾಗುತ್ತದೆ. ಸಂಪ್ರದಾಯಗಳನ್ನು ಯಥಾವತ್ತಾಗಿ ಕಾಪಾಡಿಕೊಳ್ಳುವ ಮಹತ್ವ ಇದಾಗಿದೆ.
– ಪ.ಪೂ. ಸ್ವಾಮಿ ವರದಾನಂದ ಭಾರತಿ (ಆಧಾರ : ‘ವರದವಾಣಿ’)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು