‘ಶರೀರಕ್ಕೆ ತುರಿಕೆ ಬರುವುದು, ಅಂದರೆ ಚರ್ಮಕ್ಕೆ ಬರುವ ಒಂದು ಅಸ್ವಸ್ಥತೆ. ಆದ್ದರಿಂದ ನಮಗೆ ಅಲ್ಲಿ ತುರಿಸಿಕೊಳ್ಳಬೇಕು ಎಂಬ ಇಚ್ಛೆಯಾಗುತ್ತದೆ. ತುರಿಕೆ ವಿವಿಧ ಕಾರಣಗಳಿಂದ ಬರುತ್ತದೆ. ತುರಿಕೆ ಬರುವುದರ ಕಾರಣಗಳು ಮತ್ತು ಅವುಗಳ ಪರಿಹಾರಗಳನ್ನು ಮುಂದೆ ಕೊಡಲಾಗಿದೆ.

೧. ತುರಿಕೆ ಬರುವುದರ ಕಾರಣಗಳು
೧ ಅ. ಪಿತ್ತ : ಬಹಳಷ್ಟು ಸಲ ನಮಗೆ ಪಿತ್ತದಿಂದ ತುರಿಕೆ ಬರುತ್ತದೆ. ಯಾವಾಗ ನಮ್ಮ ರಕ್ತದಲ್ಲಿ ಪಿತ್ತದ ಪ್ರಮಾಣ ಹೆಚ್ಚಾಗುತ್ತದೆಯೋ, ಆಗ ನಮ್ಮ ಶರೀರಕ್ಕೆ ತುರಿಕೆ ಬರುತ್ತದೆ.
೧ ಆ. ಚರ್ಮರೋಗ :
೧. ‘ಎಕ್ಝಿಮಾ (ಚರ್ಮಕ್ಕೆ ತೀವ್ರ ತುರಿಕೆ ಬರುವುದು ಮತ್ತು ಚರ್ಮ ಒಣಗುವುದು)
೨. ‘ಸೋರೈಸಿಸ್’ (‘ಸೊರೈಸಿಸ್’ ಇದು ತೀವ್ರ ದಾಹಕ, ದೀರ್ಘಕಾಲ ಗುಣವಾಗದಿರುವ ಮತ್ತು ಸಾಂಕ್ರಾಮಿಕವಲ್ಲದ ಚರ್ಮರೋಗವಾಗಿದೆ.)
೧ ಇ. ‘ಎಲರ್ಜಿ’ : ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯು ಅತಿಸಂವೇದನಶೀಲವಾಗುವ ಒಂದು ಅವಸ್ಥೆ, ಅಂದರೆ ‘ಎಲರ್ಜಿ’. ಯಾವುದಾದರೊಂದು ಔಷಧಿಯ ‘ಎಲರ್ಜಿ’ಯಿಂದಲೂ ಚರ್ಮವು ತುರಿಸುತ್ತದೆ.
೧ ಈ. ಸೊಳ್ಳೆ ಅಥವಾ ಯಾವುದಾದರೊಂದು ಕೀಟ ಕಚ್ಚುವುದು
೧ ಉ. ಫಂಗಸ್ (ಮುಗ್ಗಲು) ಅಥವಾ ಬೆಕ್ಟೇರಿಯಾ (ಜೀವಾಣುಗಳು)
೧ ಊ. ಮಾನಸಿಕ ಒತ್ತಡ
೧ ಎ. ಚರ್ಮ ಶುಷ್ಕವಾಗಿರುವುದು
೧ ಐ. ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದು

೨. ಉಪಾಯ
೨ ಅ. ಪುನರ್ಪುಳಿಯ (ಕೋಕಮದ) ನೀರನ್ನು ಕುಡಿಯಬೇಕು ಮತ್ತು ಅದನ್ನು ಕೈಗಳಿಗೆ ಮತ್ತು ಕಾಲುಗಳಿಗೆ ಹಚ್ಚಬೇಕು. ಇದರಿಂದ ತುರಿಕೆ ತಕ್ಷಣ ಕಡಿಮೆಯಾಗುತ್ತದೆ.
೨ ಆ. ನೆಲ್ಲಿಕಾಯಿ ಮತ್ತು ಶುಂಠಿಯ ಚೂರ್ಣವನ್ನು ಮಿಶ್ರಣ ಮಾಡಿ ನೀರಿನೊಂದಿಗೆ ಸೇವಿಸುವುದು : ೫೦ ಗ್ರಾಮ್ ನೆಲ್ಲಿಕಾಯಿಯ ಚೂರ್ಣದಲ್ಲಿ (ತಿಂಡಿ ತಿನ್ನುವ ೭ ಚಮಚದಷ್ಟು) ಚಹಾದ ಕಾಲು ಚಮಚ (ಅಥವಾ ೪ ರಿಂದ ೫ ಚಿಟಿಕೆಯಷ್ಟು) ಶುಂಠಿಯ ಚೂರ್ಣವನ್ನು ಹಾಕಿ ಅದನ್ನು ಒಟ್ಟಿಗೆ ಸೇರಿಸಿಡಬೇಕು. ಇದನ್ನು ಚಹಾದ ೧ ಚಮಚದಷ್ಟು (ಸುಮಾರು ೫ ಗ್ರಾಮ್) ಮಿಶ್ರಣ ೧ ಲೋಟ (೨೦೦ ಮಿ.ಲೀ.) ನೀರಿನಲ್ಲಿ ಇಡೀರಾತ್ರಿ ನೆನೆಸಬೇಕು. ಆ ನೀರನ್ನು ಬೆಳಗ್ಗೆ ಚಮಚದಿಂದ ಅಲುಗಾಡಿಸಬೇಕು ಮತ್ತು ಸೋಸಿ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು. ಈ ಉಪಾಯವನ್ನು ೨೧ ದಿನಗಳ ವರೆಗೆ ಮಾಡಬೇಕು.

೨ ಇ. ದೇಹಶುದ್ಧಿ ಮಾಡುವುದು : ಚರ್ಮದ ರೋಗ ವಾಸಿಯಾಗಲು ದೇಹಶುದ್ಧಿ ಮಾಡುವುದು ಆವಶ್ಯಕವಾಗಿರುತ್ತದೆ. ಅದಕ್ಕಾಗಿ ಚಹಾದ ಒಂದು ಚಮಚದಷ್ಟು (ಸುಮಾರು ೫ ಗ್ರಾಮ್) ತ್ರಿಫಲಾ ಚೂರ್ಣ ಮತ್ತು ತಿಂಡಿಯನ್ನು ತಿನ್ನುವ ೧ ಚಮಚ ತುಪ್ಪವನ್ನು ಪ್ರತಿದಿನ ರಾತ್ರಿ ಮಲಗುವಾಗ ಮತ್ತು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಉಗುರುಬೆಚ್ಚನೆ ನೀರಿನೊಂದಿಗೆ ಕುಡಿಯಬೇಕು. ಇದನ್ನು ಪ್ರಾರಂಭಿಸಿದ ನಂತರ ಮರುದಿನದಿಂದ ೨ ದಿನ ಉಪವಾಸ (ಕೇವಲ ದ್ರವಪದಾರ್ಥಗಳನ್ನು ಸೇವಿಸುವುದು) ಮಾಡಬೇಕು. ಇದರಲ್ಲಿ ನಾವು ಮಜ್ಜಿಗೆ, ಹಾಲು, ಹೆಸರುಕಾಳಿನ ನೀರು ಅಥವಾ ಸಾಮಾನ್ಯ ನೀರು ಸಹ ಕುಡಿಯಬಹುದು. ಮುಂದಿನ ೨ ದಿನ ಎರಡೂ ಸಮಯದಲ್ಲಿ, ಅಂದರೆ ಬೆಳಗ್ಗೆ ೧೧ ಗಂಟೆಗೆ ಮತ್ತು ಸಾಯಂಕಾಲ ೭ ಗಂಟೆಗೆ ಹೆಸರುಕಾಳಿನ ಖಿಚಡಿ ಮತ್ತು ನಂತರ ಮುಂದಿನ ೩ ದಿನ ಮೇಲಿನ ಎರಡೂ ಸಮಯದಲ್ಲಿ ಪಲ್ಯ-ರೊಟ್ಟಿ ತಿನ್ನಬಹುದು. ಹೀಗೆ ಒಟ್ಟು ೭ ದಿನಗಳ ವರೆಗೆ ಮಾಡಬೇಕು. ಈ ಪ್ರಕ್ರಿಯೆಯನ್ನು ತಿಂಗಳÀ ಆರಂಭದಲ್ಲಿ ಮಾಡಬೇಕು. ಹೀಗೆ ೩-೪ ತಿಂಗಳು ಮಾಡಬೇಕು. ತ್ರಿಫಲಾ ಚೂರ್ಣದ ಪ್ರಮಾಣವು ಮೊದಲನೇ ತಿಂಗಳಿನಲ್ಲಿ ೧ ಚಮಚ, ಎರಡನೇ ತಿಂಗಳಿನಲ್ಲಿ ಮುಕ್ಕಾಲು ಚಮಚ, ಮೂರನೇ ತಿಂಗಳಿನಲ್ಲಿ ಅರ್ಧ ಚಮಚ ಮತ್ತು ನಾಲ್ಕನೇ ತಿಂಗಳಿನಲ್ಲಿ ಕಾಲು ಚಮಚದಷ್ಟು, ಹೀಗೆ ಕಡಿಮೆ ಮಾಡುತ್ತ ಹೋಗಬೇಕು ಮತ್ತು ನಂತರ ಅದನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು.
೨ ಈ. ಶರೀರಕ್ಕೆ ಅಪಾಯವಾಗುವ ಪದಾರ್ಥಗಳನ್ನು ತಿನ್ನಬಾರದು :
‘ನಮ್ಮ ದೇಹಕ್ಕೆ ಯಾವ ಪದಾರ್ಥಗಳ ಎಲರ್ಜಿ ಇದೆ ?’, ಎಂಬುದನ್ನು ಹುಡುಕಿ ಆ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು ಅಥವಾ ಚರ್ಮಕ್ಕೆ ಕ್ರೀಮ್ ಇತ್ಯಾದಿ ಹಚ್ಚುತ್ತಿದ್ದರೆ ಅದನ್ನು ತಪ್ಪಿಸಬೇಕು. ಔಷಧಿಗಳಲ್ಲಿನ ಘಟಕಗಳ ಎಲರ್ಜಿ ಇದ್ದರೆ ಆಧುನಿಕ ವೈದ್ಯರ ಬಳಿ ಹೋದಾಗ ಅವರಿಗೆ ಆ ಬಗ್ಗೆ ಮೊದಲೇ ಹೇಳಬೇಕು, ಅಂದರೆ ವ್ಯಾಧಿಗಳಿಗೆ ಔಷಧಿಗಳನ್ನು ಕೊಡುವಾಗ ಅವರು ಕಾಳಜಿವಹಿಸುವರು.
೨ ಉ. ಸೊಳ್ಳೆ ಅಥವಾ ಕೀಟಗಳಿಂದ ರಕ್ಷಣೆಯಾಗಲು ಸೊಳ್ಳೆ ಪರದೆಯನ್ನು ಬಳಸಬೇಕು.
೨ ಊ. ಯೋಗ್ಯ ಔಷಧೋಪಚಾರ ಮಾಡುವುದು : ಫಂಗಸ್ (ಮುಗ್ಗಲು) ಅಥವಾ ಬೆಕ್ಟೆರಿಯಾ (ಜೀವಾಣು)ಗಳಿಂದ ಬರುವ ತುರಿಕೆಗೆ ಸರಿಯಾದ ಔಷಧೋಪಚಾರವನ್ನು ಮಾಡಬೇಕು. ಒಂದು ವೇಳೆ ಆ ಜಾಗದಲ್ಲಿ ಮಲಮ್ ಹಚ್ಚಿದರೆ ಆ ಭಾಗವನ್ನು ೧೫-೨೦ ನಿಮಿಷಗಳ ವರೆಗೆ ತೆರೆದಿಟ್ಟು ಫ್ಯಾನ್ ಕೆಳಗೆ ಕುಳಿತುಕೊಳ್ಳಬೇಕು. ಆ ಭಾಗಕ್ಕೆ ಹೆಚ್ಚೆಚ್ಚು ಗಾಳಿ ಸೋಂಕುವಂತೆ ಇಡಬೇಕು. ಇದರಿಂದ ಫಂಗಸ್ದಂತಹ ಚರ್ಮದ ಕಾಯಿಲೆಯು ಬೇಗ ಗುಣವಾಗುತ್ತದೆ.
೨ ಎ. ಮಾನಸಿಕ ಒತ್ತಡವನ್ನು ದೂರಗೊಳಿಸಲು ‘ನಾಮಜಪ, ಧ್ಯಾನ ಮತ್ತು ಪ್ರಾಣಾಯಾಮ’ಗಳಂತಹ ಉಪಾಯಗಳನ್ನು ಮಾಡಬೇಕು ಮತ್ತು ಮನಸ್ಸನ್ನು ಶಾಂತವಾಗಿಡಬೇಕು.
೨ ಐ. ಸಾಬೂನು ಬಳಸದೇ ಸುಗಂಧಿತ ಲೇಪನ ಅಥವಾ ಕಡ್ಲೆಬೇಳೆಯ ಹಿಟ್ಟನ್ನು ಬಳಸುವುದು : ಸ್ನಾನದ ೧೦-೧೫ ನಿಮಿಷಗಳ ಮೊದಲು ಸಂಪೂರ್ಣ ಶರೀರಕ್ಕೆ ಎಳ್ಳಿನ ಅಥವಾ ಕೊಬ್ಬರಿಎಣ್ಣೆಯನ್ನು ಉಜ್ಜಬೇಕು. ಸ್ನಾನವನ್ನು ಮಾಡುವಾಗ ಸಾಧ್ಯವಾದಷ್ಟು ಸಾಬೂನನ್ನು ಬಳಸದೇ ೨ ಚಮಚದಷ್ಟು ಸುಗಂಧಿತ ಲೇಪನ ಅಥವಾ ಕಡ್ಲೆಬೇಳೆಯ ಹಿಟ್ಟನ್ನು ತೆಗೆದುಕೊಂಡು ಅದರಲ್ಲಿ ೪-೫ ಹನಿಗಳಷ್ಟು ಕೊಬ್ಬರಿಎಣ್ಣೆಯನ್ನು ಹಾಕಿ ಅದನ್ನು ಬಳಸಬೇಕು.
೨ ಓ. ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಬೇಕು; ಏಕೆಂದರೆ ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡಿದರೆ ಚರ್ಮದಲ್ಲಿನ ನೈಸರ್ಗಿಕ ಎಣ್ಣೆ ಹೊರಗೆ ಹೋಗುತ್ತದೆ ಮತ್ತು ಚರ್ಮವು ಶುಷ್ಕವಾಗಿ (ಒಣಗಿ) ಶರೀರವು ತುರಿಸುತ್ತದೆ.’
– ಡಾ. ದೀಪಕ ಜೋಶಿ, ನಿಸರ್ಗೋಪಚಾರ ತಜ್ಞ (ಬ್ಯಾಚುಲರ್ ಆಫ್ ನ್ಯಾಚರೋಪಥಿ ಯಾಂಡ್ ಯೋಗಿಕ ಸೈನ್ಸ್), ದೇವದ, ಪನವೇಲ. (೧೮.೨.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು