
‘ವಟಸಾವಿತ್ರಿವ್ರತದ ನಿಮಿತ್ತ ವಟವೃಕ್ಷದ ಬಗ್ಗೆ ಸಾಕಷ್ಟು ಮಾಹಿತಿ ಓದಲು ಸಿಗುತ್ತಿತ್ತು. ಅದರಲ್ಲಿ ಆಲದ ಮರದ ಬಗ್ಗೆ ಒಂದು ಅದ್ಭುತ ವಿಧ ತಿಳಿದು ಬಂತು. ‘ಕೃಷ್ಣಆಲ’ ! ಎಂದು ಮೊದಲ ಬಾರಿ ಓದಿದಾಗ, ಯಾವ ರೀತಿ ಕಪ್ಪು ತುಳಸಿಗೆ ‘ಕೃಷ್ಣ ತುಳಸಿ’ ಅನ್ನುತ್ತಾರೆ, ಅದೇ ರೀತಿ ಈ ಆಲದ ಮರದ ಎಲೆಗಳು ಕಪ್ಪಾಗಿರಬಹುದು, ಆದ್ದರಿಂದ ಇದಕ್ಕೆ ‘ಕೃಷ್ಣಆಲ’ ಎನ್ನುತ್ತಿರಬಹುದು’ ಹೀಗೆ ಅನಿಸಿತು. ತದನಂತರ ಈ ವೃಕ್ಷದ ಎಲೆಗಳು ತೊಟ್ಟಿನ ಕಡೆಯ ಭಾಗದಿಂದ ಒಳಗೆ ತಿರುಗಿ ದೊನ್ನೆಯ ಆಕಾರದಂತೆ ಇರುತ್ತವೆ, ಎಲೆಗಳು ಹೀಗಿರುವುದರ ಹಿಂದೆ ಶ್ರೀಕೃಷ್ಣನ ಕುರಿತಾದ ಒಂದು ಪೌರಾಣಿಕ ಕಥೆ ಇದೆ’ ಎಂದು ತಿಳಿಯಿತು. ಆದ್ದರಿಂದ ಈ ಮರಕ್ಕೆ ‘ಕೃಷ್ಣಆಲ’ ಎಂಬ ಹೆಸರು ಬಂತು. ‘ಭಾರತೀಯ ಸಂಸ್ಕೃತಿ ಕೋಶ’ದಲ್ಲಿ ಮುಂದಿನ ಕಥೆ ಓದಲು ಸಿಕ್ಕಿತು.
ಒಮ್ಮೆ ಗೋಪಾಲಕೃಷ್ಣನು ಹಸುಗಳನ್ನು ಮೇಯಿಸಲು ಕಾಡಿಗೆ ಹೋದಾಗ ಕೆಲವು ಗೋಪಿಯರು ಬೆಣ್ಣೆ ತೆಗೆದುಕೊಂಡು ಅಲ್ಲಿಗೆ ಹೋದರು. ಅವರು ಕೃಷ್ಣನಿಗೆ ಆ ಬೆಣ್ಣೆಯನ್ನು ಕೊಟ್ಟರು. ಕೃಷ್ಣನು ಎಲ್ಲಾ ಗೋಪಗೋಪಿಯರಿಗೆ ಆ ಬೆಣ್ಣೆಯನ್ನು ಹಂಚಿದನು. ಬೆಣ್ಣೆ ಹಂಚುವುದಕ್ಕಾಗಿ ಅವನು ಹತ್ತಿರ ಇರುವ ಆಲದ ಮರದ ಎಲೆಗಳನ್ನು ಹರಿದು ಸ್ವಲ್ಪ ಮಡಚಿ ಅವುಗಳಿಗೆ ದೊನ್ನೆಯ ಆಕಾರ ಕೊಟ್ಟನು. ಅಂದಿನಿಂದ ಆಲದ ಮರದ ಎಲೆಗಳು ದೊನ್ನೆಯ ಆಕಾರ ಪಡೆದವು. ಮುಂದೆ ಆ ಮರದ ಬೀಜದಿಂದ ಹುಟ್ಟಿದ ಆಲದ ಮರಕ್ಕೆ ಅದೇ ರೀತಿಯ ಎಲೆಗಳು ಬರತೊಡಗಿದವು, ಆದ್ದರಿಂದ ಆ ಆಲದ ಮರಕ್ಕೆ ‘ಕೃಷ್ಣಆಲ’ ಎನ್ನುತ್ತಾರೆ.
ಕೆಲವು ವನಸ್ಪತಿ-ಅಭ್ಯಾಸಕರಿಂದ ಮತ್ತು ಜಾಲತಾಣದ ಮೂಲಕ, ಮುಂಬೈಯ ಜೀಜಾಮಾತಾ ಉದ್ಯಾನದಲ್ಲಿ ಮತ್ತು ಪುಣೆಯ ‘ಎಂಪ್ರೆಸ್ ಗಾರ್ಡನಲ್ಲಿ’ ಈ ತರಹದ ಮರ ಇದೆ ಎಂಬ ಮಾಹಿತಿ ದೊರಕಿತು. ವಿಶೇಷವಾಗಿ ಬಂಗಾಲ ಪ್ರಾಂತದಲ್ಲಿ ಈ ಮರ ಕಂಡುಬರುತ್ತದೆ. ಈ ಮರದ ಶಾಸ್ತ್ರೀಯ ಹೆಸರು ‘Ficus Krishnae’, ಎಂದು ಇದೆ. ಈ ಹಿಂದೆ ಇದು ಆಲದ ಮರದ್ದೇ (Ficus Benghalensis) ಒಂದು ಉಪತಳಿ ಎಂದು ಪರಿಗಣಿಸಲಾಗುತ್ತಿತ್ತು. ಈ ಮರದ ಎಲೆಗಳಷ್ಟೇ ಅಲ್ಲ ಮರದ ಬೆಳವಣಿಗೆ, ಬೇರುಗಳ ರಚನೆ, ಕೊಂಬೆರೆಂಬೆಗಳು ಎಲ್ಲದರಲ್ಲೂ ಅಲ್ಪ, ಸ್ವಲ್ಪ ವ್ಯತ್ಯಾಸ ಇರುವುದರಿಂದ ಇತ್ತೀಚಿಗೆ ಇದನ್ನು ಒಂದು ಸ್ವತಂತ್ರ ತಳಿ ಎಂದು ಪರಿಗಣಿಸಲಾಗುತ್ತಿದೆ. ಈ ಮರಕ್ಕೆ ‘ಬೆಣ್ಣೆಬಟ್ಟಲು’ ಎಂಬ ಸುಂದರ ಹೆಸರು ಸಹ ಇದೆ.
(ಸೌಜನ್ಯ : ಜಾಲತಾಣ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು