ಸಂತರ ಬಗ್ಗೆ ಭಾವವಿರುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಚಿ. ರೂಪಶ್ರೀ ಶಶಿಧರ ಗೌಡ (ವಯಸ್ಸು ೩ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಚಿ. ರೂಪಶ್ರೀ ಶಶಿಧರ ಗೌಡ ಈ ಪೀಳಿಗೆಯಲ್ಲಿ ಒಬ್ಬಳು !

ಚಿ. ರೂಪಶ್ರೀ ಗೌಡ

ಚಿ. ರೂಪಶ್ರೀ ಗೌಡ ಇವಳ ಬಗ್ಗೆ ಅವಳ ತಾಯಿಗೆ ಅರಿವಾದ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.

೧. ಜನ್ಮದಿಂದ ಒಂದು ವರ್ಷ

೧ ಅ. ‘ಚಿ. ರೂಪಶ್ರೀ ಜನಿಸಿದಾಗಿನಿಂದ ತುಂಬಾ ಶಾಂತಸ್ವಭಾವದವಳಾಗಿದ್ದಾಳೆ.

೧ ಆ. ಸಾತ್ತ್ವ್ವಿಕತೆಯ ಸೆಳೆತ

೧. ನಾವು ಕುಟುಂಬದಲ್ಲಿನ ಯಾವುದಾದರೊಂದು ಕಾರ್ಯಕ್ರಮಕ್ಕೆ ಸಂಬಂಧಿಕರ ಮನೆಗೆ ಹೋದಾಗ ಅವಳು ತುಂಬಾ ಅಳುತ್ತಿದ್ದಳು; ಆದರೆ ಗುರುಪೂರ್ಣಿಮೆಯ ಸಮಯದಲ್ಲಿ ಅವಳು ಬೆಳಗ್ಗಿನಿಂದ ಸಾಯಂಕಾಲದ \ವರೆಗೆ ಸಭಾಗೃಹದಲ್ಲಿ ಅಳದೇ ಶಾಂತವಾಗಿರುತ್ತಾಳೆ. ಸಾಧಕರು ನಮ್ಮ ಮನೆಗೆ ಬಂದರೆ ಅವಳು ಸಾಧಕರನ್ನು ಗುರುತಿಸುತ್ತಾಳೆ ಮತ್ತು ತಕ್ಷಣ ಅವರ ಬಳಿ ಹೋಗುತ್ತಾಳೆ. ಅವಳಿಗೆ ಸಾಧಕರ ಸಹವಾಸ ಇಷ್ಟವಾಗುತ್ತದೆ. ಅವಳಿಗೆ ಇತರ ಸ್ಥಳಗಳಿಗೆ ಹೋಗಿ ಬಂದರೆ ತೊಂದರೆಯಾಗುತ್ತದೆ, ಆಗ ಅವಳು ಅಳುತ್ತಾಳೆ.

೨. ಅವಳು ೪ ತಿಂಗಳದವಳಿದ್ದಾಗ ಅವಳಿಗೆ ‘ಹೇಗೆ ನಮಸ್ಕಾರ ಮಾಡಬೇಕು ?’, ಎಂಬುದನ್ನು ಕಲಿಸಿದೆವು, ಆವಾಗಿನಿಂದ ಅವಳು ಅಜ್ಜಿ-ಅಜ್ಜನವರಿಗೆ ನಮಸ್ಕಾರ ಮಾಡುತ್ತಾಳೆ.

 ೧ ಇ. ದೇವರ ಬಗ್ಗೆ ಆಸಕ್ತಿ : ಅವಳು ನಮ್ಮ ಮನೆಯಲ್ಲಿನ ಶ್ರೀಕೃಷ್ಣನ ಚಿತ್ರವನ್ನು ನೋಡಿ ನಮಸ್ಕಾರ ಮಾಡುತ್ತಾಳೆ. ಅವಳಿಗೆ ದೇವಸ್ಥಾನಕ್ಕೆ ಹೋಗುವುದು, ಭಜನೆ ಮತ್ತು ಆರತಿ ಮಾಡಲು ತುಂಬಾ ಇಷ್ಟವಾಗುತ್ತದೆ.

೧ ಈ. ಸತ್ಸಂಗವನ್ನು ಆಸಕ್ತಿಯಿಂದ ಕೇಳುವುದು : ಜ್ಞಾನಶಕ್ತಿ ಪ್ರಸಾರ ಅಭಿಯಾನ ನಡೆದಿರುವಾಗ ಪೂ. ರಮಾನಂದಣ್ಣ (ಪೂ. ರಮಾನಂದ ಗೌಡ, ಸನಾತನದ ೭೫ ನೇ (ಸಮಷ್ಟಿ) ಸಂತರು, ವಯಸ್ಸು ೪೮ ವರ್ಷ) ಇವರು ಪ್ರತಿದಿನ ಬೆಳಗ್ಗೆ ಸಾಧಕರಿಗಾಗಿ ‘ಆನ್‌ಲೈನ್’ ಸತ್ಸಂಗವನ್ನು ತೆಗೆದುಕೊಳ್ಳು ತ್ತಿದ್ದರು. ಆ ಸಮಯದಲ್ಲಿ ರೂಪಶ್ರೀಯು ತನ್ನ ಅಜ್ಜಿಯ ಹತ್ತಿರ ಕುಳಿತು ಶಾಂತವಾಗಿ ಸತ್ಸಂಗವನ್ನು ಕೇಳುತ್ತಿದ್ದಳು. ಅವಳು ವಾರಕ್ಕೊಮ್ಮೆ ನಡೆಯುವ ಕನ್ನಡ ಭಾಷೆಯಲ್ಲಿನ ಭಕ್ತಿಸತ್ಸಂಗವನ್ನು ಕೇಳುತ್ತಾಳೆ. ಅವಳು ಭಕ್ತಿಸತ್ಸಂಗದಲ್ಲಿನ ಭಜನೆಯನ್ನು ಕೇಳುವಾಗ ಕುಣಿದು ಆನಂದವನ್ನು ವ್ಯಕ್ತಪಡಿಸುತ್ತಾಳೆ. ಅವಳಿಗೆ ಭಕ್ತಿಸತ್ಸಂಗ ದಲ್ಲಿ ಹೇಳುತ್ತಿರುವುದು ತಿಳಿಯುವುದಿಲ್ಲ, ಆದರೂ ಅವಳು ಆನಂದದಿಂದ ಸತ್ಸಂಗವನ್ನು ಕೇಳುತ್ತಾಳೆ.

ಸೌ. ಲಿಖಿತಾ ಶಶಿಧರ ಗೌಡ

೧ ಉ. ಪೂ. ರಮಾನಂದ ಗೌಡರ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಬಗೆಗಿನ ಭಾವ

೧. ಪೂ. ರಮಾನಂದಣ್ಣನವರು ನಮ್ಮ ಹತ್ತಿರದ ಸಂಬಂಧಿಕರಾಗಿದ್ದಾರೆ.

(ಪೂ. ರಮಾನಂದಣ್ಣನವರ ಪತ್ನಿ ಸೌ. ಮಂಜುಳಕ್ಕನವರು ರೂಪಶ್ರೀಯ ಸೋದರತ್ತೆಯಾಗಿದ್ದಾರೆ.) ರೂಪಶ್ರೀಯು ನಡೆಯಲು ಕಲಿಯುತ್ತಿರುವಾಗ ಒಮ್ಮೆ ಪೂ. ಅಣ್ಣನವರು ಮನೆಗೆ ಬಂದಿದ್ದರು. ಆಗ ರೂಪಶ್ರೀಯು ಮೊದಲು ಪೂ. ಅಣ್ಣನವರ ಬಳಿಗೆ ಹೋದಳು.

೨. ಒಮ್ಮೆ ಪೂ. ಅಣ್ಣನವರು ನಮ್ಮ ಮನೆಗೆ ಉಳಿಯಲು ಬರಲಿದ್ದರು. ಆ ರಾತ್ರಿ ಪೂ. ಅಣ್ಣವರಿಗೆ ನಮ್ಮ ಮನೆಗೆ ಬರಲು ತಡವಾಯಿತು. ಆಗ ರೂಪಶ್ರೀಯು ಎಚ್ಚರದಿಂದಿದ್ದು ಅವರ ದಾರಿಯನ್ನು ಕಾಯುತ್ತಿದ್ದಳು. ಪೂ. ಅಣ್ಣನವರು ಮನೆಗೆ ಬಂದ ನಂತರವೂ ಅವಳು ತುಂಬಾ ಹೊತ್ತು ಎಚ್ಚರವಿದ್ದಳು.

೩. ಪೂ. ಅಣ್ಣನವರು ನಮ್ಮ ಮನೆಗೆ ಬಂದಾಗ ಅವಳಿಗೆ ತುಂಬಾ ಆನಂದವಾಗುತ್ತದೆ. ಅವಳು ಅವರಿಗೆ ಹೊಸ ವಸ್ತುಗಳನ್ನು ತೋರಿಸುತ್ತಾಳೆ ಮತ್ತು ಅವರು ನಮ್ಮ ಮನೆಯಿಂದ ಹೊರಡು ವಾಗ  ನಮಸ್ಕರಿಸುತ್ತಾಳೆ. ಅವಳು ತನ್ನ ಶಬ್ದಗಳಲ್ಲಿ ಏನಾದರೂ ಶ್ಲೋಕವನ್ನು ಹೇಳುತ್ತಾಳೆ.

೪. ಅವಳು ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥಮಾಲಿಕೆಯಲ್ಲಿನ ಗ್ರಂಥವನ್ನು ನೋಡುತ್ತಾಳೆ ಮತ್ತು ಗ್ರಂಥಕ್ಕೆ ಭಾವಪೂರ್ಣ ನಮಸ್ಕಾರ ಮಾಡುತ್ತಾಳೆ.

೨. ವಯಸ್ಸು ೧ ರಿಂದ ೨ ವರ್ಷ

೨ ಅ. ಪ್ರಗಲ್ಭ : ಅವಳ ಮಾತುಗಳಲ್ಲಿ ಮತ್ತು ವಿಚಾರಗಳಲ್ಲಿ ಪ್ರಗಲ್ಭತೆಯ ಅರಿವಾಗುತ್ತದೆ. ಅವಳಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಅವಳಿಗೆ ಎಲ್ಲ ಶಬ್ದಗಳು ಅರ್ಥವಾಗುವುದಿಲ್ಲ, ಆದರೂ ಅವಳು ತನಗೆ ತಿಳಿಯುವ ಕೆಲವು ಶಬ್ದಗಳಲ್ಲಿ ಮಾತನಾಡುತ್ತಾಳೆ.

೨ ಆ. ಸಾಧಕರು ಸತ್ಸಂಗದಲ್ಲಿ ಹೇಳಿದ ಅಂಶಗಳನ್ನು ಬರೆದು ಕೊಳ್ಳುತ್ತಿರುವಾಗ ರೂಪಶ್ರೀಯೂ ವಹಿ ಮತ್ತು ಪೆನ್ನು ತೆಗೆದುಕೊಂಡು ಕುಳಿತುಕೊಳ್ಳುತ್ತಾಳೆ.’

– ಸೌ. ಲಿಖಿತಾ ಶಶಿಧರ ಗೌಡ (ಚಿ. ರೂಪಶ್ರೀಯ ತಾಯಿ), ಪೆರಿಯಡ್ಕ, ದಕ್ಷಿಣ ಕನ್ನಡ ಜಿಲ್ಲೆ