ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಅನುಷಾ ಕುಂಬಾರ ಈ ಪೀಳಿಗೆಯಲ್ಲಿ ಒಬ್ಬಳು !

ಲಕ್ಷ್ಮೇಶ್ವರದ (ಧಾರವಾಡ ಜಿಲ್ಲೆಯ) ಕು. ಅನುಷಾ ಕುಂಬಾರ ಇವಳ ಬಗ್ಗೆ ಅವಳ ತಾಯಿಗೆ ಅರಿವಾದ ಗುಣವೈಶಿಷ್ಟ್ಯ ಗಳನ್ನು ಇಲ್ಲಿ ಕೊಡಲಾಗಿದೆ.
೧. ಕು. ಅನುಷಾ ಶಾಲೆಗೆ ಹೋಗುವಾಗ ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತಾಳೆ. ೨. ಸತ್ಸೇವೆ ಮತ್ತು ಮನೆಗೆಲಸದಲ್ಲಿ ಸಹಾಯ ಮಾಡುವುದು
ಅವಳು ಎಲ್ಲ ಸತ್ಸೇವೆಗಳಲ್ಲಿ ಪಾಲ್ಗೊಳ್ಳು ತ್ತಾಳೆ, ಹಾಗೆಯೇ ಅವಳು ನನಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾಳೆ. ಅವಳು ತನ್ನ ಶಾಲೆಯ ಶಿಕ್ಷಕರಿಗೆ ಸಾತ್ತ್ವಿಕ ಉತ್ಪಾದನೆಗಳನ್ನು ಕೊಡುತ್ತಾಳೆ. ಅವಳು ತನ್ನ ಶಾಲೆಯ ಶಿಕ್ಷಕರಿಗೆ ಸಾಧನೆ ಹೇಳುತ್ತಾಳೆ. ಇತರರಿಗೆ ‘ಸನಾತನ ಪ್ರಭಾತ’ದ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತಾಳೆ.

೩. ನೇತೃತ್ವ ಗುಣ
ಒಮ್ಮೆ ಲಕ್ಷ್ಮೇಶ್ವರ (ಧಾರವಾಡ)ದಲ್ಲಿ ‘ಹಿಂದೂ ರಾಷ್ಟ್ರ-ಜಾಗೃತಿ’ ಸಭೆಯ ಆಯೋಜನೆ ಇತ್ತು. ಆಗ ಅವಳು ಚಿಕ್ಕ ಮಕ್ಕಳಿಗೆ ಉಡುಪುಗಳನ್ನು ತೊಡಿಸುವ ಅಲಂಕರಿಸುವ ಜವಾಬ್ದಾರಿಯನ್ನು ತೆಗೆದುಕೊಂಡಳು. ಈ ಸೇವೆಯನ್ನು ಅವಳು ಸಂಬಂಧಪಟ್ಟ ಸಾಧಕರಿಗೆ ಕೇಳಿ ಮಾಡುತ್ತಿದ್ದಳು. ಅವಳು ‘ನಾನು ಧರ್ಮಸಭೆಯಲ್ಲಿ ನಿರೂಪಣೆ ಮಾಡುವೆನು’, ಎಂಬ ವಿಚಾರವನ್ನು ವ್ಯಕ್ತಪಡಿಸಿದಳು.
೪. ಗುರುಗಳ ಬಗೆಗಿನ ಭಾವ
‘ಅವಳಿಗೆ ಇಷ್ಟವಾಗುವ ಯಾವುದೇ ವಸ್ತುಗಳು ದೊರಕಿದರೆ ಆ ವಸ್ತುಗಳು ಗುರುದೇವರ ಕೃಪೆಯಿಂದ ಸಿಕ್ಕಿದವು’, ಎಂದು ಅವಳು ಹೇಳುತ್ತಾಳೆ. ಗೋವಾಕ್ಕೆ ಜನ್ಮೋತ್ಸವಕ್ಕೆ ಹೋಗುವವರ ಪಟ್ಟಿಯಲ್ಲಿ ಅವಳ ಹೆಸರಿತ್ತು. ಆಗ ಅವಳಿಗೆ ತುಂಬಾ ಕೃತಜ್ಞತೆ ಎನಿಸಿತು. ‘ನನ್ನ ಮೇಲೆ ಗುರುಗಳ ಕೃಪೆ ಇದೆ. ನಾನು ಪುಣ್ಯಮಾಡಿರಬಹುದು. ನಾನು ಧನ್ಯಳಾದೆನು’, ಎಂದು ಅವಳು ಕೃತಜ್ಞತೆಯನ್ನು ವ್ಯಕ್ತಪಡಿಸಿದಳು.
– ಸೌ. ಮಂಗಲಾ ಕುಂಬಾರ (ತಾಯಿ), ಲಕ್ಷ್ಮೇಶ್ವರ, ಧಾರವಾಡ (೨೭.೫.೨೦೨೪)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು