ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಅನುಷಾ ಕುಂಬಾರ ಈ ಪೀಳಿಗೆಯಲ್ಲಿ ಒಬ್ಬಳು !

ಲಕ್ಷ್ಮೇಶ್ವರದ (ಧಾರವಾಡ ಜಿಲ್ಲೆಯ) ಕು. ಅನುಷಾ ಕುಂಬಾರ ಇವಳ ಬಗ್ಗೆ ಅವಳ ತಾಯಿಗೆ ಅರಿವಾದ ಗುಣವೈಶಿಷ್ಟ್ಯ ಗಳನ್ನು ಇಲ್ಲಿ ಕೊಡಲಾಗಿದೆ.
೧. ಕು. ಅನುಷಾ ಶಾಲೆಗೆ ಹೋಗುವಾಗ ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತಾಳೆ. ೨. ಸತ್ಸೇವೆ ಮತ್ತು ಮನೆಗೆಲಸದಲ್ಲಿ ಸಹಾಯ ಮಾಡುವುದು
ಅವಳು ಎಲ್ಲ ಸತ್ಸೇವೆಗಳಲ್ಲಿ ಪಾಲ್ಗೊಳ್ಳು ತ್ತಾಳೆ, ಹಾಗೆಯೇ ಅವಳು ನನಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾಳೆ. ಅವಳು ತನ್ನ ಶಾಲೆಯ ಶಿಕ್ಷಕರಿಗೆ ಸಾತ್ತ್ವಿಕ ಉತ್ಪಾದನೆಗಳನ್ನು ಕೊಡುತ್ತಾಳೆ. ಅವಳು ತನ್ನ ಶಾಲೆಯ ಶಿಕ್ಷಕರಿಗೆ ಸಾಧನೆ ಹೇಳುತ್ತಾಳೆ. ಇತರರಿಗೆ ‘ಸನಾತನ ಪ್ರಭಾತ’ದ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತಾಳೆ.

೩. ನೇತೃತ್ವ ಗುಣ
ಒಮ್ಮೆ ಲಕ್ಷ್ಮೇಶ್ವರ (ಧಾರವಾಡ)ದಲ್ಲಿ ‘ಹಿಂದೂ ರಾಷ್ಟ್ರ-ಜಾಗೃತಿ’ ಸಭೆಯ ಆಯೋಜನೆ ಇತ್ತು. ಆಗ ಅವಳು ಚಿಕ್ಕ ಮಕ್ಕಳಿಗೆ ಉಡುಪುಗಳನ್ನು ತೊಡಿಸುವ ಅಲಂಕರಿಸುವ ಜವಾಬ್ದಾರಿಯನ್ನು ತೆಗೆದುಕೊಂಡಳು. ಈ ಸೇವೆಯನ್ನು ಅವಳು ಸಂಬಂಧಪಟ್ಟ ಸಾಧಕರಿಗೆ ಕೇಳಿ ಮಾಡುತ್ತಿದ್ದಳು. ಅವಳು ‘ನಾನು ಧರ್ಮಸಭೆಯಲ್ಲಿ ನಿರೂಪಣೆ ಮಾಡುವೆನು’, ಎಂಬ ವಿಚಾರವನ್ನು ವ್ಯಕ್ತಪಡಿಸಿದಳು.
೪. ಗುರುಗಳ ಬಗೆಗಿನ ಭಾವ
‘ಅವಳಿಗೆ ಇಷ್ಟವಾಗುವ ಯಾವುದೇ ವಸ್ತುಗಳು ದೊರಕಿದರೆ ಆ ವಸ್ತುಗಳು ಗುರುದೇವರ ಕೃಪೆಯಿಂದ ಸಿಕ್ಕಿದವು’, ಎಂದು ಅವಳು ಹೇಳುತ್ತಾಳೆ. ಗೋವಾಕ್ಕೆ ಜನ್ಮೋತ್ಸವಕ್ಕೆ ಹೋಗುವವರ ಪಟ್ಟಿಯಲ್ಲಿ ಅವಳ ಹೆಸರಿತ್ತು. ಆಗ ಅವಳಿಗೆ ತುಂಬಾ ಕೃತಜ್ಞತೆ ಎನಿಸಿತು. ‘ನನ್ನ ಮೇಲೆ ಗುರುಗಳ ಕೃಪೆ ಇದೆ. ನಾನು ಪುಣ್ಯಮಾಡಿರಬಹುದು. ನಾನು ಧನ್ಯಳಾದೆನು’, ಎಂದು ಅವಳು ಕೃತಜ್ಞತೆಯನ್ನು ವ್ಯಕ್ತಪಡಿಸಿದಳು.
– ಸೌ. ಮಂಗಲಾ ಕುಂಬಾರ (ತಾಯಿ), ಲಕ್ಷ್ಮೇಶ್ವರ, ಧಾರವಾಡ (೨೭.೫.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !