ಬಹುಸಂಖ್ಯಾತ ಹಿಂದೂಗಳಿಗೆ ಲಜ್ಜಾಸ್ಪದ ಘಟನೆ !

೧. ಬಹುಸಂಖ್ಯಾತ ಹಿಂದೂಗಳಿಗೆ ಲಜ್ಜಾಸ್ಪದ ಘಟನೆ !

ಕದಮತಾಲಾದಲ್ಲಿ (ತ್ರಿಪುರಾ) ಸಾರ್ವಜನಿಕ ದುರ್ಗಾ ಪೂಜೆಯ ಆಯೋಜಕರು ನವರಾತ್ರಿಯ ಸಂದರ್ಭದಲ್ಲಿ ಮುಸಲ್ಮಾನನಿಂದ ದೇಣಿಗೆ ಕೇಳಿದ್ದರಿಂದ ಮುಸಲ್ಮಾನರು ಹಿಂದೂಗಳ ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದರು. ಈ ಘಟನೆಯಲ್ಲಿ ಒಬ್ಬನು ಸಾವನ್ನಪ್ಪಿದ್ದು, ೧೭ ಜನರು ಗಾಯಗೊಂಡಿದ್ದಾರೆ.

೨. ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿಯನ್ನು ತಿಳಿಯಿರಿ !

ಬಾಂಗ್ಲಾದೇಶದ ಚಿತ್ತಗಾವನಲ್ಲಿರುವ ದುರ್ಗಾಪೂಜಾ ಮಂಟಪದಲ್ಲಿ ದೇಶಭಕ್ತಿಯ ಗೀತೆಗಳನ್ನು ಹಾಡುವ ನೆಪದಲ್ಲಿ ಇಸ್ಲಾಮಿಕ್‌ ಮೂಲಭೂತಗಳು ‘ಇಸ್ಲಾಮಿಕ್‌ ಕ್ರಾಂತಿ’ಗೆ ಕರೆ ನೀಡುವ ಹಾಡನ್ನು ಹಾಡಿದ್ದಾರೆ. ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅರ್ಪಿಸಿದ ಜೇಶೋರೇಶ್ವರಿ ದೇವಸ್ಥಾನದಲ್ಲಿನ ಕಾಳಿ ಮಾತೆಯ ಕಿರೀಟವನ್ನು ಕಳವು ಮಾಡಲಾಗಿದೆ.

೪. ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು !

ಬಿಹಾರದ ಕಾದರಾಬಾದ್‌ನ ಶಾಲೆಯೊಂದರಲ್ಲಿ ಶಿಕ್ಷಕ ಜಿಯಾವುದ್ದೀನ್‌ ಇವನು ತನ್ನ ತರಗತಿಯ ಮಕ್ಕಳಿಗೆ ಪಾಠ ಮಾಡುವಾಗ ಭಗವಾನ ಶ್ರೀರಾಮ ಮತ್ತು ಶ್ರೀ ಹನುಮಂತ ಇವರನ್ನು ‘ಮುಸಲ್ಮಾನ’ ಎಂದು ಕರೆದನು. ‘ಅವರು ನಮಾಜ್‌ ಮಾಡುತ್ತಿದ್ದರು’ ಎಂದೂ ಹೇಳಿದ್ದಾನೆ. ಗ್ರಾಮಸ್ಥರು ಇದನ್ನು ವಿರೋಧಿಸಿದ ನಂತರ ಶಿಕ್ಷಕನು ಕ್ಷಮೆ ಕೇಳಿದನು.

೫. ಇದು ಜಗತ್ತಿನಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದ !

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸಾಹಿವಾಲ್‌ ಜಿಲ್ಲೆಯ ದೇವಸ್ಥಾನವನ್ನು ಮಸೀದಿಯಾಗಿ ರೂಪಾಂತರಿಸಿ ಅದನ್ನು ‘ಬಾಬ್ರಿ ಮಸೀದಿ’ ಎಂದು ಹೆಸರಿಸಲಾಗಿದೆ. ಪಾಕಿಸ್ತಾನದ ಯೂಟ್ಯೂಬರ್‌ ಮಾಖನ್‌ ರಾಮ್‌ ಜೈಪಾಲ್‌ ಇವರು ಇದರ ವಿಡಿಯೋ ಮಾಡಿದ್ದಾರೆ.

೫. ಬಂಗಾಲದ ಸಕ್ರಿಯ ಹಿಂದೂಗಳನ್ನು ತಿಳಿಯಿರಿ !

ಬಾಂಗ್ಲಾದೇಶದ ಹಿಂದೂಗಳ ಮೇಲೆ ಇಸ್ಲಾಮಿಕ್‌ ಮೂಲಭೂತವಾದಿಗಳು ನಡೆಸಿದ ದೌರ್ಜನ್ಯದ ವಿರುದ್ಧ ಬಂಗಾಲದ ಹಿಂದೂಗಳು ಬಾಂಗ್ಲಾದೇಶದ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಾರೆ.  ಅವರು #BoycottBangladesh ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.