ಇಂತಹವರ ವಿರುದ್ಧ ಅಪರಾಧ ದಾಖಲಿಸಿ ಜೈಲಿಗಟ್ಟಿ !

ದಿನೇಶ ಗುಂಡೂರಾವ್‌

೧. ಭಾರತ ಇಸ್ಲಾಮಿಕ್‌ರಾಷ್ಟ್ರವಾಗುವ ಮುನ್ನ ಎಚ್ಚರಗೊಳ್ಳಿ

ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತಿದೆ. ಈಗ ನಾವು (ಸಮಾಜವಾದಿ ಪಕ್ಷ) ಅಧಿಕಾರಕ್ಕೆ ಬರಲಿದ್ದೇವೆ, ನಿಮ್ಮ (ಭಾಜಪ) ಸರಕಾರವು ೨೦೨೭ ರ ಮೊದಲೇ ಹೋಗುತ್ತದೆ, ಎಂದು ಅಮ್ರೋಹಾ (ಉತ್ತರಪ್ರದೇಶ)ದ ಸಮಾಜವಾದಿ ಪಕ್ಷದ ಶಾಸಕ ಮೆಹಬೂಬ್‌ ಅಲಿ ಹೇಳಿದ್ದಾರೆ.

೨. ಲವ್‌ ಜಿಹಾದ್‌ ತಡೆಗಟ್ಟುವ ಪರಿಹಾರವನ್ನು ತಿಳಿಯಿರಿ !

ಭಾಜಪದ ಇಂದೋರ್‌ (ಮಧ್ಯಪ್ರದೇಶ) ಜಿಲ್ಲಾಧ್ಯಕ್ಷ ಚಿಂಟು ವರ್ಮಾ ಅವರು ಗರಬಾ ಮಂಟಪಕ್ಕೆ ಬರುವವರು ಹಿಂದೂಗಳೇ ಇರುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಗರಬಾ ಸಂಯೋಜಕರು ಮಂಟಪವನ್ನು ಪ್ರವೇಶಿಸುವವರಿಗೆ ಗೋಮೂತ್ರ ಕುಡಿಯಲು ನೀಡಬೇಕು ಎಂದು ಸಲಹೆ ನೀಡಿದ್ದಾರೆ.

೩. ‘ಲವ್‌ ಜಿಹಾದ್‌’ನ ಗಾಂಭೀರ್ಯವನ್ನರಿತುಕೊಳ್ಳಿ !

ಜನಸಂಖ್ಯೆಯಲ್ಲಿ ಬದಲಾವಣೆ ಮತ್ತು ಅಂತಾರಾಷ್ಟ್ರೀಯ ಕಳವಳವನ್ನು ಹಬ್ಬಿಸುವುದು ‘ಲವ್‌ ಜಿಹಾದ್‌’ನ ಮುಖ್ಯ ಉದ್ದೇಶವಾಗಿದೆ. ‘ಲವ್‌ ಜಿಹಾದ್’ ಘಟನೆಗಳು ‘ವಿದೇಶಿ ಧನ ಸಹಾಯದಿಂದ ನಡೆಯುತ್ತಿವೆ’ ಎಂದು ಬರೇಲಿಯ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್‌ ಅವರು ಪ್ರಕರಣವೊಂದರ ವಿಚಾರಣೆ ಸಮಯದಲ್ಲಿ ಹೇಳಿದರು.

೪. ಇಂತಹವರ ವಿರುದ್ಧ ಅಪರಾಧ ದಾಖಲಿಸಿ ಜೈಲಿಗಟ್ಟಿ !

‘ಸ್ವಾತಂತ್ರ್ಯವೀರ ಸಾವರಕರರು ಚಿತ್ಪಾವನ ಬ್ರಾಹ್ಮಣರಾಗಿದ್ದರೂ ಅವರು ಸಾರ್ವಜನಿಕವಾಗಿ ಗೋಮಾಂಸ ತಿಂದು ಅದರ ಪ್ರಸಾರ ಮಾಡುತ್ತಿದ್ದರು. ಸಾವರಕರರು ಗೋಹತ್ಯೆಯನ್ನು ಎಂದಿಗೂ ವಿರೋಧಿಸಿಲ್ಲ,’’ ಎಂದು ರಾಜ್ಯದ ಕಾಂಗ್ರೆಸ್‌ ಸರಕಾರದಲ್ಲಿ ಸಚಿವರಾಗಿರುವ ದಿನೇಶ ಗುಂಡೂರಾವ್‌ ಹೇಳಿದ್ದಾರೆ.

೫. ಹಿಂದೂದ್ವೇಷಿ ಅಮೇರಿಕಾವನ್ನು ಕಠೋರವಾಗಿ ವಿಚಾರಿಸಿ !

ಭಾರತದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂದು ‘ಯುನೈಟೆಡ್‌ ಸ್ಟೇಟ್ಸ್ ಕಮಿಷನ್‌ ಆನ್‌ ಇಂಟರ್‌ನ್ಯಾಶನಲ್‌ ರಿಲಿಜಿಯಸ್‌ ಫ್ರೀಡಂ’ ಎಂದರೆ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗವು ‘ಇಂಡಿಯಾ ಕಂಟ್ರಿ ಅಪ್‌ಡೇಟ್’ ಎಂಬ ವರದಿಯಲ್ಲಿ ಹೇಳಿದೆ.