ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!

ನಲಬಾಡಿ (ಅಸ್ಸಾಂ)ಯಲ್ಲಿ ಮುಸಲ್ಮಾನರು ಮಧುರಜ್ಯಾ ಬರ್ಮನ್ ಎಂಬ ಹಿಂದೂ ಯುವಕನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದಾರೆ. ಆತನ ೧೭ ವರ್ಷದ ಚಿಕ್ಕಪ್ಪನ ಮಗಳು ರೋಜ್ ಅಲಿ ಎಂಬಾತನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಈ ಕೊಲೆ ಮಾಡಲಾಗಿದೆ.

೨. ಭಾರತದಲ್ಲಿನ ಕಾನೂನಿನ ಪರಿಸ್ಥಿತಿಯನ್ನು ತಿಳಿಯಿರಿ !

ಭಾರತದಲ್ಲಿ ಕಾನೂನಿನ ಹರಿತ ಕೊನೆಯಾಗಲು ಕಾರಣವೆಂದರೆ ನಾವು ಅಪರಾಧಿಗಳೊಂದಿಗೆ ಕಠಿಣವಾಗಿ ನಡೆದುಕೊಳ್ಳುತ್ತಿಲ್ಲ. ನೀವು ಯಾರದ್ದಾದರೂ ಕೈ ಅಥವಾ ಕಾಲುಗಳನ್ನು ಕತ್ತರಿಸಿದರೆ, ಬಹುಶಃ ಜನರು ಕಾನೂನನ್ನು ಪಾಲಿಸುವುದನ್ನು ಕಲಿಯಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಹೇಳಿಕೆ ನೀಡಿದೆ.

೩. ‘ಕಾರ್ಪೊರೇಟ್ ಜಿಹಾದ್’ ಅನ್ನು ತಡೆಯಿರಿ !

ಟಿ.ಸಿ.ಎಸ್.’ ಮತ್ತು ‘ಸ್ಟೇಟ್ ಬ್ಯಾಂಕ್’ ಸಂಸ್ಥೆಗಳಲ್ಲಿ ನಡೆದ ‘ಕಾರ್ಪೊರೇಟ್ ಜಿಹಾದ್’ ಘಟನೆಗಳಂತೆಯೇ ಈಗ ಪುಣೆಯ ‘ವಿಪ್ರೋ ಟೆಕ್ನಾಲಜೀಸ್’ನಲ್ಲೂ ಘಟನೆಯೊಂದು ನಡೆದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂತ್ರಸ್ತ ಹಿಂದೂ ಮಹಿಳೆಯು ಪತ್ರಿಕಾಗೋಷ್ಠಿಯ ಮೂಲಕ ಇದನ್ನು ಬಹಿರಂಗಪಡಿಸಿದ್ದಾರೆ.

೪. ಮುಸಲ್ಮಾನಪ್ರೇಮಿ ಕಾಂಗ್ರೆಸ್‌ಗೆ ಮುಸಲ್ಮಾನರಿಂದಲೇ ಎಚ್ಚರಿಕೆ !

‘ಒಂದು ವೇಳೆ ಸಚಿವ ಸಂಪುಟದಲ್ಲಿ ೫ ಮುಸಲ್ಮಾನ ಸಚಿವರನ್ನು ಸೇರಿಸಿಕೊಳ್ಳದಿದ್ದರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಡಬೇಕಾಗುತ್ತದೆ’, ಎಂದು ಕರ್ನಾಟಕದ ಮುಸಲ್ಮಾನರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

೫. ಭಾರತದಲ್ಲಿ ಹಿಂದೂ ಪೊಲೀಸರೂ ಅಸುರಕ್ಷಿತರು !

ಬದಾಯೂ (ಉತ್ತರಪ್ರದೇಶ) ಇಲ್ಲಿ ಪೊಲೀಸ್ ನಿರೀಕ್ಷಕ ಮೇಘಶ್ಯಾಮ್ ಗೌತಮ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಪೊಲೀಸ್ ನಿರೀಕ್ಷಕ ಶಾಹಿದ್ ಅಲಿ ಅವರು ಮೇಘಶ್ಯಾಮ್ ಇವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’, ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ.

೬. ಬಾಂಗ್ಲಾದೇಶಿ ನುಸುಳುಕೋರರಿಗೆ ಆಶ್ರಯ ನೀಡುವ ಪ್ರತಿಯೊಬ್ಬರನ್ನು ಪತ್ತೆ ಹಚ್ಚಿ ಅವರಿಗೂ ಜೈಲು ಶಿಕ್ಷೆ ವಿಧಿಸಬೇಕು !

ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳವು ಇತ್ತೀಚೆಗಷ್ಟೇ ೩೦ ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರ ಪಟ್ಟಿಯನ್ನು ಮಹಾರಾಷ್ಟ್ರ ಸರಕಾರಕ್ಕೆ ಸಲ್ಲಿಸಿದೆ. ‘ಸನಾತನ ಪ್ರಭಾತ’ಕ್ಕೆ ಈ ಪಟ್ಟಿ ಲಭ್ಯವಾಗಿದ್ದು ಇದರಲ್ಲಿ ಮುಂಬೈನಲ್ಲೇ ೧೬-೧೭ ಸಾವಿರಕ್ಕೂ ಹೆಚ್ಚು ನುಸುಳುಕೋರರು ಪತ್ತೆಯಾಗಿದ್ದಾರೆ.

೭. ಇಂತಹವರನ್ನು ದೇಶದ್ರೋಹದ ಆರೋಪದಡಿ ಗಲ್ಲಿಗೇರಿಸಬೇಕು !

ವಿದೇಶಿ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಹಲವಾರು ಉಗ್ರಗಾಮಿ ಕೃತ್ಯಗಳನ್ನು ಯೋಜಿಸುತ್ತಿದ್ದ ತುಮಕೂರಿನ ಶ್ರೀರಾಮನಗರದ ನಿವಾಸಿ ಅಲ್ಲಾ ಬಕ್ಷ್ ಎಂಬಾತನನ್ನು ಪೊಲೀಸರು ಇತ್ತೀಚೆಗ ಬಂಧಿಸಿದ್ದಾರೆ.