ಮನೆಯಿಂದ ಹೊರಗೆ ಹೋಗುವಾಗ ಮತ್ತು ಮನೆಗೆ ವಾಪಸ್ಸು ಬಂದ ಮೇಲೆ ದೇವರಿಗೆ ನಮಸ್ಕಾರ ಮಾಡುವುದರ ಮಹತ್ವ !

ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ದೇವರ ಕೋಣೆಯಲ್ಲಿರುವ ದೇವರಿಗೆ ನಮಸ್ಕಾರ ಮಾಡಿ ಹೋಗಿ. ಮತ್ತೆ ಮನೆಗೆ ಹಿಂದಿರುಗಿದ ಮೇಲೆ ದೇವರ ದರ್ಶನ ಪಡೆಯಿರಿ, ಏಕೆಂದರೆ ಆ ಭಗವಂತ ನೀವು ಮನೆಗೆ ಬರುವ ದಾರಿಯನ್ನೇ ಕಾಯುತ್ತಿರುತ್ತಾನೆ. ನೀವು ಮನೆಯಲ್ಲಿ ಈ ಮುಂದಿನಂತೆ ನಿಯಮವನ್ನು ಹಾಕಿಕೊಳ್ಳಿ, ಯಾವಾಗ ನೀವು ಮನೆಯಿಂದ ಹೊರಗೆ ಹೋಗುತ್ತೀರೋ, ಆಗ ದೇವರ ಮುಂದೆ ಒಂದು ಕ್ಷಣ ನಿಂತು ‘ಹೇ ಪರಮೇಶ್ವರ, ನೀವೂ ನನ್ನ ಜೊತೆಗೆ ಬನ್ನಿ’, ಎಂದು ಹೇಳಿ; ಏಕೆಂದರೆ ನಿಮ್ಮ ಕೈಯಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ಗಡಿಯಾರವು ಇರಬಹುದು, ಆದರೆ ಅದರಲ್ಲಿ ತೋರಿಸುವ ಸಮಯವು ಕೇವಲ ಆ ಭಗವಂತನ ಕೈಯಲ್ಲಿದೆ.

– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು (ಆಧಾರ : ‘ಪ್ರಾ. ಕೆ.ವಿ. ಬೆಲಸರೆ ಆಧ್ಯಾತ್ಮಿಕ ಸಾಹಿತ್ಯ’ ಇವರ ಫೇಸ್‌ಬುಕ್)