ಆರೋಪಿಯಂತೆ ಶ್ರೀ ಗಣೇಶ ಮೂರ್ತಿಯನ್ನು ಪೊಲೀಸ್ ವ್ಯಾನ್‌ನಲ್ಲಿ ಇಟ್ಟ ಪೊಲೀಸರು !

ರಾಜ್ಯದ ಪೊಲೀಸರ ತುಘಲಕಿ ಕೃತ್ಯ !

ಬೆಂಗಳೂರು – 3 ದಿನಗಳ ಹಿಂದೆ ನಾಗಮಂಗಲದಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ಮೇಲೆ ಮುಸ್ಲಿಮರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದರು. ಈ ಘಟನೆಯನ್ನು ಖಂಡಿಸಿ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಪ್ಟೆಂಬರ್ 13 ರ ಸಂಜೆ, ರಾಜಧಾನಿ ಬೆಂಗಳೂರಿನಲ್ಲಿ ನಾಗಮಂಗಲದ ಘಟನೆಯನ್ನು ವಿರೋಧಿಸಿ ಹಿಂದುತ್ವನಿಷ್ಠರು ಪ್ರತಿಭಟಿಸಿದರು. ಈ ವೇಳೆ ತಮ್ಮೊಂದಿಗೆ ಶ್ರೀ ಗಣೇಶ ಮೂರ್ತಿ ಕೂಡ ಇಟ್ಟುಕೊಂಡಿದ್ದರು. ಪೊಲೀಸರು ಆಂದೋಲನದ ವಿರುದ್ಧ ಕ್ರಮ ಕೈಗೊಂಡು ಹಿಂದುತ್ವನಿಷ್ಠರನ್ನು ಬಂಧಿಸಿದರು. ಈ ವೇಳೆ ಪೊಲೀಸರು ಹಿಂದೂಗಳ ಕೈಯಿಂದ ಗಣೇಶ ಮೂರ್ತಿಯನ್ನೂ ಕಸಿದುಕೊಂಡರು. ಪೊಲೀಸರು ಇಷ್ಟಕ್ಕೆ ನಿಲ್ಲದೇ ಮೂರ್ತಿಯನ್ನು ಪೊಲೀಸ್ ವ್ಯಾನ್‌ನಲ್ಲಿ ಇಟ್ಟರು. ಇದರಿಂದ ಅಲ್ಲಿದ್ದ ಹಿಂದೂಗಳು ಬೆಚ್ಚಿ ಬೀದ್ದರು. ಈ ಘಟನೆಯ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದ್ದು, ಭಾರತದಾದ್ಯಂತ ಹಿಂದೂಗಳು ಇದನ್ನು ವಿರೋಧಿಸುತ್ತಿದ್ದಾರೆ.

ಕಾಂಗ್ರೆಸ್ ಸರಕಾರ ಪತನದ ಲಕ್ಷಣಗಳು ! – ಹಿಂದೂಗಳ ಪ್ರತಿಕ್ರಿಯೆ

ಇದು ಕಾಂಗ್ರೆಸ್ ಸರಕಾರದ ಪತನದ ಸೂಚನೆ ಎಂದು ನೆರೆದಿದ್ದ ಗಣೇಶ ಭಕ್ತರು ಹೇಳಿದ್ದಾರೆ. ಹಿಂದೂ ದೇವರನ್ನು ಅವಮಾನಿಸುವ ಈ ಸರಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

  • ಆರೋಪಿಗಳಿಗೆ ಕರೆತರುವ ವಾಹನದಲ್ಲಿ ಶ್ರೀ ಗಣೇಶ ಮೂರ್ತಿ ಇಡುವ ಪೊಲೀಸರು ಭಾರತದವರೋ ಅಥವಾ ಪಾಕಿಸ್ತಾನದವರೋ ?
  • ಪೊಲೀಸರು ಮುಸಲ್ಮಾನರ ಶ್ರದ್ಧಾ ಸ್ಥಳಗಳಿಗೆ ಸಂಬಂಧಿಸಿದಂತೆ ಈ ರೀತಿ ಮಾಡುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ? ಇದು ಹಿಂದೂಗಳಲ್ಲಿರುವ ಅಸಹಿಷ್ಣುತೆಯ ಉತ್ತುಂಗವಾಗಿದೆ. ಈಗ ಹಿಂದೂಗಳು ನ್ಯಾಯೋಚಿತವಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂಬುದನ್ನು ಗಮನಿಸಿ !