ರಾಜ್ಯದ ಪೊಲೀಸರ ತುಘಲಕಿ ಕೃತ್ಯ !

ಬೆಂಗಳೂರು – 3 ದಿನಗಳ ಹಿಂದೆ ನಾಗಮಂಗಲದಲ್ಲಿ ಗಣೇಶನ ವಿಸರ್ಜನಾ ಮೆರವಣಿಗೆ ಮೇಲೆ ಮುಸ್ಲಿಮರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದರು. ಈ ಘಟನೆಯನ್ನು ಖಂಡಿಸಿ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಪ್ಟೆಂಬರ್ 13 ರ ಸಂಜೆ, ರಾಜಧಾನಿ ಬೆಂಗಳೂರಿನಲ್ಲಿ ನಾಗಮಂಗಲದ ಘಟನೆಯನ್ನು ವಿರೋಧಿಸಿ ಹಿಂದುತ್ವನಿಷ್ಠರು ಪ್ರತಿಭಟಿಸಿದರು. ಈ ವೇಳೆ ತಮ್ಮೊಂದಿಗೆ ಶ್ರೀ ಗಣೇಶ ಮೂರ್ತಿ ಕೂಡ ಇಟ್ಟುಕೊಂಡಿದ್ದರು. ಪೊಲೀಸರು ಆಂದೋಲನದ ವಿರುದ್ಧ ಕ್ರಮ ಕೈಗೊಂಡು ಹಿಂದುತ್ವನಿಷ್ಠರನ್ನು ಬಂಧಿಸಿದರು. ಈ ವೇಳೆ ಪೊಲೀಸರು ಹಿಂದೂಗಳ ಕೈಯಿಂದ ಗಣೇಶ ಮೂರ್ತಿಯನ್ನೂ ಕಸಿದುಕೊಂಡರು. ಪೊಲೀಸರು ಇಷ್ಟಕ್ಕೆ ನಿಲ್ಲದೇ ಮೂರ್ತಿಯನ್ನು ಪೊಲೀಸ್ ವ್ಯಾನ್ನಲ್ಲಿ ಇಟ್ಟರು. ಇದರಿಂದ ಅಲ್ಲಿದ್ದ ಹಿಂದೂಗಳು ಬೆಚ್ಚಿ ಬೀದ್ದರು. ಈ ಘಟನೆಯ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದ್ದು, ಭಾರತದಾದ್ಯಂತ ಹಿಂದೂಗಳು ಇದನ್ನು ವಿರೋಧಿಸುತ್ತಿದ್ದಾರೆ.
ಕಾಂಗ್ರೆಸ್ ಸರಕಾರ ಪತನದ ಲಕ್ಷಣಗಳು ! – ಹಿಂದೂಗಳ ಪ್ರತಿಕ್ರಿಯೆ
ಇದು ಕಾಂಗ್ರೆಸ್ ಸರಕಾರದ ಪತನದ ಸೂಚನೆ ಎಂದು ನೆರೆದಿದ್ದ ಗಣೇಶ ಭಕ್ತರು ಹೇಳಿದ್ದಾರೆ. ಹಿಂದೂ ದೇವರನ್ನು ಅವಮಾನಿಸುವ ಈ ಸರಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವು
|
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!