ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಂದ ಗುರುಪೂರ್ಣಿಮೆಯ ನಿಮಿತ್ತ ಸಾಧಕರಿಗೆ ಸಂದೇಶ

ಶ್ರೀ ಗುರುಗಳ ಮೇಲಿನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿಯನ್ನು ಹೆಚ್ಚಿಸಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವಾಗ ಆಧ್ಯಾತ್ಮಿಕ ಉನ್ನತಿಯೇ ಸಾಧಕರ ಮತ್ತು ಶಿಷ್ಯರ ಧ್ಯೇಯ ಆಗಿರುತ್ತದೆ. ಗುರುಗಳ ಮೇಲಿನ ನಿಷ್ಠೆ ಎಂದರೆ ಶಿಷ್ಯನ ವಿಕಲ್ಪರಹಿತ ಅವಸ್ಥೆ, ಗುರುಗಳ ಮೇಲಿನ ಶ್ರದ್ಧೆ ಎಂದರೆ ‘ಗುರುಗಳಿಂದಾಗಿ ನನ್ನ ಪರಮಕಲ್ಯಾಣವೇ ಆಗಲಿಕ್ಕಿದೆ, ಎಂದು ದೃಢವಾಗಿ ಅನಿಸುವುದು ಮತ್ತು ಗುರುಗಳ ಮೇಲಿನ ಭಕ್ತಿ ಎಂದರೆ ಗುರುಗಳಿಗೆ ಇಷ್ಟವಾದದ್ದನ್ನು, ಭಕ್ತಿಭಾವದಿಂದ ಮಾಡುವುದು. ಗುರುಗಳಿಗೆ ವ್ಯಾಪಕ ಧರ್ಮಕಾರ್ಯ ಇಷ್ಟವಾಗುತ್ತದೆ. ಅದನ್ನು ತಳಮಳದಿಂದ ಮಾಡುವುದು, ಇದು ನಿಜವಾದ ‘ಗುರುಭಕ್ತಿಯಾಗಿದೆ. ಈ ಕಾರ್ಯವನ್ನು ಮಾಡುವಾಗ ಯಾವುದೇ ವಿಕಲ್ಪವನ್ನು ಇಟ್ಟುಕೊಳ್ಳದಿರುವುದು, ಇದು ನಿಜವಾದ ‘ಗುರುನಿಷ್ಠೆಯಾಗಿದೆ ಮತ್ತು ‘ಈ ವ್ಯಾಪಕ ಧರ್ಮಕಾರ್ಯವನ್ನು ಪರಿಪೂರ್ಣ ಮತ್ತು ನೇತೃತ್ವವಹಿಸಿ ಮಾಡುವುದರಿಂದ ನನ್ನ ಆಧ್ಯಾತ್ಮಿಕ ಉನ್ನತಿ ಆಗಲಿಕ್ಕೇ ಇದೆ, ಎಂಬ ಭಾವವಿರುವುದು, ಇದೇ ನಿಜವಾದ ‘ಗುರುಗಳ ಮೇಲಿನ ಶ್ರದ್ಧೆಯಾಗಿದೆ; ಆದುದರಿಂದಲೇ ಆಧ್ಯಾತ್ಮಿಕ ಉನ್ನತಿಯಾಗಲು ಈ ಗುರುಪೂರ್ಣಿಮೆಯಿಂದ ಶ್ರೀ ಗುರುಗಳ ಮೇಲಿನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿಯನ್ನು ಹೆಚ್ಚಿಸಿರಿ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು, ಸನಾತನ ಸಂಸ್ಥೆ (೨೪.೫.೨೦೨೪)

ಗುರುಪೂರ್ಣಿಮೆ ನಿಮಿತ್ತ ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಬೇಕಾಗುವ ಸದ್ಗುಣಗಳ ಗಂಟನ್ನು ಸಂಗ್ರಹಿಸಿ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

ಅಖಿಲ ಮನುಕುಲದ ಕಲ್ಯಾಣವನ್ನು ಮಾಡುವ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾಲವು ಸಮೀಪ ಬಂದಿದೆ; ಆದರೆ ‘ನಮಗೆ ಅದು ಸಹಜವಾಗಿ ಅನುಭವಿಸಲು ಸಿಗುವುದು, ಎಂದೇನಿಲ್ಲ. ಅದಕ್ಕಾಗಿ ಈಶ್ವರನ ಮೇಲಿನ ದೃಢ ಭಕ್ತಿ, ಸತ್‌ಗಾಗಿ ತ್ಯಾಗದ ಸಿದ್ಧತೆ, ಮನಸ್ಸಿನ ಸರ್ವಾಂಗೀಣ ಸಿದ್ಧತೆ ಇಂತಹ ಸದ್ಗುಣಗಳ ಗಂಟು ನಮ್ಮೊಂದಿಗೆ ಇರಬೇಕಾಗುತ್ತದೆ. ಅದನ್ನು ಸಂಗ್ರಹಿಸಲು ಗುರುಪೂರ್ಣಿಮೆಯಂತಹ ಅದ್ವಿತೀಯ ಅವಕಾಶ ಬೇರೆ ಇಲ್ಲ ! ಗುರುಪೂರ್ಣಿಮೆಯ ನಿಮಿತ್ತ ಒಂದು ಸಾವಿರ ಪಟ್ಟು ಕಾರ್ಯನಿರತವಾಗಿರುವ ಗುರುತತ್ತ್ವದ ಲಾಭ ಪಡೆಯಲು ತನು, ಮನ ಮತ್ತು ಧನ ಇವುಗಳ ಪೈಕಿ ಯಾವುದು ಸಾಧ್ಯವಾಗುವುದೋ, ಆ ಮಾರ್ಗದಿಂದ ಈ ಉತ್ಸವದಲ್ಲಿ, ಹಾಗೆಯೇ ಅದರಲ್ಲಿನ ಸೇವೆಗಳಲ್ಲಿ ಭಾಗವಹಿಸಿರಿ ! ಗುರುಗಳ ಬಳಿ ‘ನಮಗೆ ನಿಮ್ಮ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡಿರಿ ! ಎಂದು ತಳಮಳದಿಂದ ಪ್ರಾರ್ಥನೆಯನ್ನು ಮಾಡಿರಿ ! ಹಿಂದೂ ರಾಷ್ಟ್ರ-ಸ್ಥಾಪನೆಯ ಗುರುಕಾರ್ಯದಲ್ಲಿ ನಿತ್ಯ ಭಾಗವಹಿಸಿರಿ ಮತ್ತು ಜೀವನವನ್ನು ಸಾರ್ಥಕ ಮಾಡಿಕೊಳ್ಳಿ !

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು, ಸನಾತನ ಸಂಸ್ಥೆ.