
‘ಹಣವು ಅಶಾಶ್ವತವಾಗಿದೆ. ಸಂತರು ನೀಡಿದ ಆಶೀರ್ವಾದವು ಶಾಶ್ವತವಾಗಿದೆ, ಅಂದರೆ ಅದು ಶಾಶ್ವತವಾಗಿ ಉಳಿಯುವುದಾಗಿದೆ. ಶಾಶ್ವತವೆಂದರೆ ಎಲ್ಲಿಯವರೆಗೆ ಚಂದ್ರ ಮತ್ತು ಸೂರ್ಯ ಇರುವರೋ, ಅಲ್ಲಿಯವರೆಗೆ ಉಳಿ ಯುವುದಾಗಿದೆ. ಅದು ಎಂದಿಗೂ ಭಂಗವಾಗುವುದಿಲ್ಲ ಮತ್ತು ಲೋಪವೂ ಆಗುವುದಿಲ್ಲ. ಸಮರ್ಥ ರಾಮದಾಸ ಸ್ವಾಮಿಯವರ ಆಶೀರ್ವಾದದಿಂದ ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯದ ಸ್ಥಾಪನೆಯನ್ನು ಮಾಡಿದರು. ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿನ ಪರಿಷತ್ತಿನಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಸಿದ್ಧ ಮಾಡಿದರು. ಇದು ಅವರ ಸದ್ಗುರುಗಳ ಆಶೀರ್ವಾದದಿಂದಾಗಿಯೇ ಆಯಿತು. ಸನಾತನದ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದಲೇ ಪರಾತ್ಪರ ಗುರು ಡಾ. ಆಠವಲೆಯವರು ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪವನ್ನು ಮಾಡಿದ್ದಾರೆ. ಸದ್ಗುರುಗಳ ಆಶೀರ್ವಾದದಿಂದಲೇ ಧರ್ಮದ ಕಾರ್ಯವಾಗುತ್ತದೆ; ಆದುದರಿಂದ ಸದ್ಗುರುಗಳ ಆಶೀರ್ವಾದಕ್ಕೆ ಮಹತ್ವವಿದೆ.’
– ಪ.ಪೂ. ದಾಸ ಮಹಾರಾಜ (೨೮.೧೧.೨೦೨೦)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !