ಸಾಧಕರಿಗೆ ಸೂಚನೆ !

‘ಕೆಲವು ಸಾಧಕರು ‘ನಾನು ಊಟ ಮಾಡಿ ಬರುತ್ತೇನೆ’, ಎಂದು ಹೇಳುತ್ತಾರೆ. ಕೆಲವು ಸಾಧಕರು ಇತರ ಸಾಧಕರಿಗೆ ‘ನಿಮ್ಮ ಊಟ ಆಯಿತೇ ?’ ಎಂದು ಕೇಳುತ್ತಾರೆ. ಸಾಧಕರು, ಇದರ ಬದಲು ‘ನಾನು ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಬೇಕು ಅಥವಾ ‘ನೀವು ಮಹಾಪ್ರಸಾದವನ್ನು ಸೇವಿಸಿದ್ದೀರಾ ?’, ಎಂದು ಕೇಳಬೇಕು. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಮತ್ತು ಅವುಗಳೊಂದಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ. ಈ ಅಧ್ಯಾತ್ಮದಲ್ಲಿನ ಸಿದ್ಧಾಂತಕ್ಕನುಸಾರ ನಮ್ಮ ಮನಸ್ಸಿನಲ್ಲಿ ಯಾವ ರೀತಿಯ ಭಾವವಿರುತ್ತದೆಯೋ, ಅದಕ್ಕನುಸಾರ ನಮಗೆ ಅದರ ಲಾಭವಾಗುತ್ತಿರುತ್ತದೆ. ಅನ್ನವು ಪೂರ್ಣಬ್ರಹ್ಮವಾಗಿದೆ. ‘ಮಹಾಪ್ರಸಾದವನ್ನು ಸೇವಿಸಿ ಬರುತ್ತೇನೆ’, ಎಂದು ಹೇಳುವುದರಿಂದ ನಮ್ಮ ಮನಸ್ಸಿನಲ್ಲಿ ಆಹಾರದ ಬಗ್ಗೆ ಭಾವ ಉತ್ಪನ್ನವಾಗಿ ನಮಗೆ ಅದರ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ಇದಕ್ಕಾಗಿ ಸಾಧಕರು ‘ಉಪಾಹಾರ ಅಥವಾ ಊಟ’, ಎಂದು ಹೇಳದೇ ‘ಪ್ರಸಾದ-ಮಹಾಪ್ರಸಾದ’ ಎಂದು ಹೇಳಬೇಕು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !