ಅಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಸನಾತನದ ಗುರುಗಳ ಸಂದೇಶ

ಅಯೋಧ್ಯೆಯಂತೆ ಸಂಪೂರ್ಣ ಭಾರತಕ್ಕೆ ರಾಮರಾಜ್ಯದಂತೆ ಗತವೈಭವ ಸಿಗುವಂತೆ ಮಾಡಬೇಕು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶ್ರೀರಾಮಲಲ್ಲಾನ ಭವ್ಯ ದೇವಸ್ಥಾನದಿಂದಾಗಿ ಅಯೋಧ್ಯೆಗೆ ಗತವೈಭವ ಪ್ರಾಪ್ತವಾಗಿದೆ. ಈಗ ನಾವು ಭಾರತದ ಗತವೈಭವ ವನ್ನು ವಾಪಾಸು ಪಡೆಯಲು ಪ್ರಯತ್ನಿಸಬೇಕಾಗಿದೆ. ಈಗಲೂ ರಾಮರಾಜ್ಯವನ್ನು ಆದರ್ಶ ರಾಜ್ಯವೆಂದು ನೋಡಲಾಗುತ್ತದೆ. ಪ್ರಭು ಶ್ರೀರಾಮನ ಕಾಲದಲ್ಲಿ ಪ್ರಜೆಗಳೆಲ್ಲರೂ ಪೂರ್ಣ ಧರ್ಮಪಾಲಕರು ಮತ್ತು ರಾಮಭಕ್ತರಾಗಿದ್ದರು; ಆದ್ದರಿಂದ ಅವರಿಗೆ ಶ್ರೀರಾಮನಂತೆ ಧರ್ಮಪಾಲಕ ರಾಜ ಹಾಗೂ ರಾಮರಾಜ್ಯ ಸಿಕ್ಕಿತು. ಭಾರತಕ್ಕೂ ಪುನಃ ರಾಮರಾಜ್ಯದಂತೆ ಗತವೈಭವ ಸಿಗಲು ಹಿಂದೂ ಸಮಾಜಕ್ಕೆ ಧರ್ಮಪಾಲನೆ ಮತ್ತು ರಾಮಭಕ್ತಿ ಮಾಡಿ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಬೇಕಾಗಬಹುದು.’

– ಶ್ರೀಸತ್‌ಶಕ್ತಿ ಸೌ. ಬಿಂದಾ ನೀಲೇಶ ಸಿಂಗಬಾಳ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಉತ್ತರಾಧಿಕಾರಿಗಳಲ್ಲಿ ಒಬ್ಬರು)

ಶ್ರೀರಾಮಮಂದಿರದ ನಂತರ ಎಲ್ಲೆಡೆಗೂ ರಾಮರಾಜ್ಯ ಸ್ಥಾಪಿಸುವುದೇ ನಮ್ಮ ಧ್ಯೇಯವಾಗಿರಲಿದೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

‘ಕಳೆದ ೫೦೦ ವರ್ಷಗಳಿಂದ ರಾಮಭಕ್ತರನ್ನು ಅವರ ದೇವರಿಂದ ದೂರ ಇಟ್ಟಿದ್ದ ಇಸ್ಲಾಮೀ ಆಕ್ರಮಣಕಾರರು ಕೊನೆಗೂ ಸೋಲುಂಡರು. ಭಕ್ತಿ, ಜ್ಞಾನ ಮತ್ತು ಕರ್ಮ ಹೀಗೆ ಮೂರು ಹಂತಗಳಲ್ಲಿ ಅಂದರೆ ಎಲ್ಲಾ ರೀತಿಯಲ್ಲೂ ಹಿಂದೂಗಳು ಜಯಶಾಲಿಯಾದರು. ಈ ಸುದೀರ್ಘ ಸಂಘರ್ಷದ ಅವಧಿಯಿಂದ ಹೋರಾಡಿದ ಹಿಂದೂ ಜನಸಮುದಾಯವು ಶ್ರೀರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ಈ ದಿವ್ಯ ಕ್ಷಣದಲ್ಲಿ ಹಿಂದೂ ಧರ್ಮದ ರಕ್ಷಣೆಗಾಗಿ ನಿರಂತರ ಕಾರ್ಯ ಮಾಡುವುದಾಗಿ ನಮ್ಮ ಆರಾಧ್ಯ ಪ್ರಭು ಶ್ರೀರಾಮನಲ್ಲಿ ಪ್ರತಿಜ್ಞೆ ಮಾಡಬೇಕು. ಶ್ರೀರಾಮಮಂದಿರದ ನಂತರ ಎಲ್ಲೆಡೆ ರಾಮರಾಜ್ಯವನ್ನು ಸ್ಥಾಪಿಸುವುದೇ ನಮ್ಮ ಧ್ಯೇಯವಾಗಿರಲಿದೆ !’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಉತ್ತರಾಧಿಕಾರಿಗಳಲ್ಲಿ ಒಬ್ಬರು)