
‘ಒಂದು ಸಲ ಓರ್ವ ಸಾಧಕರಿಗೆ ಓರ್ವ ಸಂತರ ಭೇಟಿಯಾಯಿತು. ಆ ಸಮಯದಲ್ಲಿ ಆ ಸಂತರು ಸಾಧಕರಿಗೆ, ”ಒಬ್ಬರೇ ಭೇಟಿಗೆ ಬಂದಿದ್ದೀರಿ. ನೀವು ನಿಮ್ಮ ಪತ್ನಿ ಮತ್ತು ಇತರ ಕುಟುಂಬದವರನ್ನು ಜೊತೆಗೆ ಕರೆತಂದಿಲ್ಲವಲ್ಲ !”, ಎಂದು ಕೇಳಿದರು. ಆಗ ಸಂಬಂಧಿತ ಸಾಧಕರು, ”ಮನೆಯಲ್ಲಿ ಎರಡು ನಾಯಿಮರಿಗಳಿವೆ. ಅವುಗಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಪತ್ನಿ ಮತ್ತು ಇತರ ಕುಟುಂಬದವರನ್ನು ಭೇಟಿಗಾಗಿ ಕರೆತರಲಿಲ್ಲ”, ಎಂದು ಹೇಳಿದರು.
ಇದರಲ್ಲಿ ‘ಸಂತರ ಮಾರ್ಗದರ್ಶನದಿಂದ ಸಾಧನೆ ಯಲ್ಲಿನ ಅಡಚಣೆಗಳು ದೂರಾಗುತ್ತವೆ ಮತ್ತು ಸಾಧನೆಗೆ ವೇಗ ಬಂದು ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂಬ ದೃಷ್ಟಿಕೋನವನ್ನು ಗಮನದಲ್ಲಿಟ್ಟು ಸಾಧಕರು ಸಂತರ ಸಾಧನೆಯ ಬಗೆಗಿನ ಅಮೂಲ್ಯ ಮಾರ್ಗದರ್ಶನಕ್ಕೆ ಆದ್ಯತೆ ನೀಡಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಇಂತಹ ಪ್ರಸಂಗದಲ್ಲಿ ‘ಸಾಧಕರು ತಾರತಮ್ಯವನ್ನು ಬಳಸಿ ಪ್ರಾಣಿಗಳನ್ನು ನೋಡಿಕೊಳ್ಳಲು ಸಂಬಂಧಿಕರು, ಅಕ್ಕಪಕ್ಕದವರು ಅಥವಾ ಇತರರ ಸಹಾಯ ಪಡೆಯಬೇಕು ಅಥವಾ ‘ಇತರ ಯಾವ ಉಪಾಯಯೋಜನೆಯನ್ನು ಕಂಡು ಹಿಡಿಯಬಹುದು ?’, ಎಂದು ನೋಡಬೇಕು. ಆದರೂ ಅಡಚಣೆಗಳು ಬಂದರೆ ಎಲ್ಲ ಕುಟುಂಬದವರು ಮನೆಯಲ್ಲಿ ನಿಲ್ಲುವ ಬದಲು ಒಬ್ಬರು ನಿಂತು ಉಳಿದ ಸದಸ್ಯರನ್ನು ಮಾರ್ಗದರ್ಶನಕ್ಕಾಗಿ ಕರೆದುಕೊಂಡು ಬರುವ ದೃಷ್ಟಿಯಿಂದ ಸಾಧಕರು ಆಯೋಜನೆ ಮಾಡಬಹುದು.
‘ಸಾಧಕರೇ, ‘ಈ ಆಪತ್ಕಾಲದಲ್ಲಿ ಸಾಧನೆಗಾಗಿ ಸಂತರ ಅಮೂಲ್ಯ ಮಾರ್ಗದರ್ಶನ ನಮಗೆ ಲಭಿಸುತ್ತಿದೆ’, ಈ ಬಗ್ಗೆ ಕೃತಜ್ಞತಾಭಾವವನ್ನಿಟ್ಟುಕೊಂಡು ಅದರ ಲಾಭವನ್ನು ಪಡೆದುಕೊಳ್ಳಿ !’
– ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೬.೧೧.೨೦೨೩)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !