ಇನ್ನು ಸರಕಾರವು ಕಾಶ್ಮೀರದ ಹಿಂದೂಗಳ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಕಾನೂನನ್ನು ರೂಪಿಸಬೇಕು ! – ಕಾಶ್ಮೀರಿ ಹಿಂದೂಗಳ ಆಗ್ರಹ
ಜಮ್ಮು ಮತ್ತು ಕಾಶ್ಮೀರದಲ್ಲಿ ಕಲಂ ೩೭೦ ಅನ್ನು ರದ್ದುಪಡಿಸಿದ ನಂತರ, ಸರಕಾರವು ಇನ್ನು ಕಾಶ್ಮೀರದಲ್ಲಿಯ ಹಿಂದೂಗಳ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಕಾನೂನು ರೂಪಿಸಬೇಕು ಎಂದು ಕಾಶ್ಮೀರಿ ಹಿಂದೂಗಳು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಕಾಶ್ಮೀರಿ ಹಿಂದೂಗಳ ವಿವಿಧ ಸಂಘಟನೆಗಳ ಪ್ರತಿನಿಧಿಯ ಇಬ್ಬರು ಸ್ವತಂತ್ರ ನಿಯೋಗಗಳು ಮೇ ೨೧ ರಂದು ರಾಜ್ ಭವನಕ್ಕೆ ಹೋಗಿ ಉಪರಾಜ್ಯಪಾಲರಾದ ಜಿಸಿ ಮುರ್ಮು ಅವರನ್ನು ಭೇಟಿಯಾದರು.