ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಬೆಳಗಿನ ಜಾವ ಆರತಿಯ ವೇಳೆ ‘ಶಾರ್ಟ್ ಸರ್ಕ್ಯೂಟ್‌’ನಿಂದ ಬೆಂಕಿ

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಮುಂಜಾನೆ 4.30ಕ್ಕೆ ಮಂಗಳಾರತಿಯ ವೇಳೆ ‘ಶಾರ್ಟ್ ಸರ್ಕ್ಯೂಟ್’ ನಿಂದ ಬೆಂಕಿ ಕಾಣಿಸಿಕೊಂಡಿದೆ. ದೇವಾಲಯದ ಪ್ರದೇಶದಲ್ಲಿ ನಿಯೋಜಿಸಿದ್ದ ಅಗ್ನಿಶಾಮಕ ದಳದ ತಂಡವು ಈ ಬೆಂಕಿಯನ್ನು ಹತೋಟಿಗೆ ತಂದಿದೆ. ಬೆಂಕಿ ಕಾಣಿಸಿಕೊಮಡಿದ್ದರಿಂದ ಭಕ್ತರ ದರ್ಶನ ಸ್ಥಗಿತಗೊಂಡು, ಸುಮಾರು 1 ಗಂಟೆ ಭಕ್ತರಿಗೆ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಈಗ ದೇವಸ್ಥಾನದ ಪರಿಸರದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ‘ಶಾರ್ಟ್ ಸರ್ಕ್ಯೂಟ್’ ಆಗಿದ್ದ ತಂತಿಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ.