ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತ ಇಮ್ರಾನ್ ನಿಂದ ಭಾಜಪ ಮತ್ತು ಆರ್.ಎಸ್.ಎಸ್ ಸಂಘಕ್ಕೆ ಬೆದರಿಕೆ !

ಕೊಪ್ಪಳ – ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಕಾರ್ಯಕರ್ತ ಇಮ್ರಾನ್, ‘ಭಾಜಪ ಮತ್ತು ಆರ್.ಎಸ್.ಎಸ್ ಸಂಘಕಕ್ಕೆ, ವಕ್ಫ್ ಕಾಯ್ದೆಗೆ ಅಡ್ಡಿಪಡಿಸಿದರೆ ಮುಸ್ಲಿಂ ಸಮುದಾಯದವರು ನಿಮ್ಮ ಕಥೆ ಮುಗಿಸುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ. ಮುಸ್ಲಿಂ ಸಮಾಜವು ನಿಮ್ಮನ್ನು ಅಥವಾ ನಿಮ್ಮ ಪೀಳಿಗೆಯನ್ನು ಕೊನೆಗೊಳಿಸುತ್ತದೆ. ‘ನಾಗ್ಪುರದಿಂದ ಸಾವರ್ಕರ್ಗಳ ತಲೆಮಾರು ಬಂದಿದ್ದರೂ ಮುಸ್ಲಿಮರ ವಕ್ಫ್ ಆಸ್ತಿಯನ್ನು ಮುಟ್ಟಲು ಸಾಧ್ಯವಿಲ್ಲ’, ಎಂದು ಅವರು ಹೇಳಿದರು.
ಇಮ್ರಾನ್ ಮಾತು ಮುಂದುವರೆಸಿ, ಪ್ರಸ್ತುತ ಮುಸ್ಲಿಂ ಸಮುದಾಯವು ಸಣ್ಣ ಮತ್ತು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದೆ; ಆದರೆ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತಂದಾಗ, ಮಹಿಳೆಯರು ನಿಮ್ಮನ್ನು ಸರಿಯಾಗಿ ಬೆಂಡೆತ್ತಿದ್ದರು. ಈಗ ಮಕ್ಕಳೂ ಮೈದಾನಕ್ಕೆ ಬಂದರೆ ನೀವು ಯಾವ ದೇಶದಿಂದ ಬಂದಿದ್ದೀರಿ ಎಂಬುದು ನಿಮಗೆ ಗೊತ್ತಾಗಲ್ಲ ಮತ್ತು ಮುಸ್ಲಿಂ ಸಮಾಜವು ಅವರನ್ನು ಕೊನೆಗೊಳಿಸುತ್ತಾರೆ, ಎಂದು ಭಾಜಪ ಮತ್ತು ಸಂಘಕ್ಕೆ ಎಚ್ಚರಿಸಿದ್ದಾರೆ.
ಸಂಪಾದಕೀಯ ನಿಲುವುನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಶಾಖೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ನಿಷೇಧಿಸುವುದು ಎಷ್ಟು ಅಗತ್ಯ ? ಎಂಬುದು ಈ ಬೆದರಿಕೆಯಿಂದ ಗಮನಕ್ಕೆ ಬರುತ್ತದೆ ! ಕೇಂದ್ರದ ಭಾಜಪ ಸರಕಾರ ಇದರತ್ತ ಗಮನಹರಿಸಬೇಕು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !