SDPI warns BJP & RSS : ‘ವಕ್ಫ್ ಕಾಯಿದೆಯಲ್ಲಿ ಹಸ್ತಕ್ಷೇಪ ಮಾಡಿದರೆ, ಮುಸ್ಲಿಂ ಸಮುದಾಯವು ನಿಮ್ಮ ಪೀಳಿಗೆಯನ್ನೇ ನಾಶ ಮಾಡುತ್ತದೆ !’ (ಅಂತೆ)

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತ ಇಮ್ರಾನ್ ನಿಂದ ಭಾಜಪ ಮತ್ತು ಆರ್.ಎಸ್.ಎಸ್ ಸಂಘಕ್ಕೆ ಬೆದರಿಕೆ !

ಕೊಪ್ಪಳ – ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌.ಡಿ.ಪಿ.ಐ.) ಕಾರ್ಯಕರ್ತ ಇಮ್ರಾನ್, ‘ಭಾಜಪ ಮತ್ತು ಆರ್.ಎಸ್.ಎಸ್ ಸಂಘಕಕ್ಕೆ, ವಕ್ಫ್ ಕಾಯ್ದೆಗೆ ಅಡ್ಡಿಪಡಿಸಿದರೆ ಮುಸ್ಲಿಂ ಸಮುದಾಯದವರು ನಿಮ್ಮ ಕಥೆ ಮುಗಿಸುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ. ಮುಸ್ಲಿಂ ಸಮಾಜವು ನಿಮ್ಮನ್ನು ಅಥವಾ ನಿಮ್ಮ ಪೀಳಿಗೆಯನ್ನು ಕೊನೆಗೊಳಿಸುತ್ತದೆ. ‘ನಾಗ್ಪುರದಿಂದ ಸಾವರ್ಕರ್‌ಗಳ ತಲೆಮಾರು ಬಂದಿದ್ದರೂ ಮುಸ್ಲಿಮರ ವಕ್ಫ್ ಆಸ್ತಿಯನ್ನು ಮುಟ್ಟಲು ಸಾಧ್ಯವಿಲ್ಲ’, ಎಂದು ಅವರು ಹೇಳಿದರು.

ಇಮ್ರಾನ್‌ ಮಾತು ಮುಂದುವರೆಸಿ, ಪ್ರಸ್ತುತ ಮುಸ್ಲಿಂ ಸಮುದಾಯವು ಸಣ್ಣ ಮತ್ತು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದೆ; ಆದರೆ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತಂದಾಗ, ಮಹಿಳೆಯರು ನಿಮ್ಮನ್ನು ಸರಿಯಾಗಿ ಬೆಂಡೆತ್ತಿದ್ದರು. ಈಗ ಮಕ್ಕಳೂ ಮೈದಾನಕ್ಕೆ ಬಂದರೆ ನೀವು ಯಾವ ದೇಶದಿಂದ ಬಂದಿದ್ದೀರಿ ಎಂಬುದು ನಿಮಗೆ ಗೊತ್ತಾಗಲ್ಲ ಮತ್ತು ಮುಸ್ಲಿಂ ಸಮಾಜವು ಅವರನ್ನು ಕೊನೆಗೊಳಿಸುತ್ತಾರೆ, ಎಂದು ಭಾಜಪ ಮತ್ತು ಸಂಘಕ್ಕೆ ಎಚ್ಚರಿಸಿದ್ದಾರೆ.

ಸಂಪಾದಕೀಯ ನಿಲುವು

ನಿಷೇಧಿತ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಶಾಖೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ನಿಷೇಧಿಸುವುದು ಎಷ್ಟು ಅಗತ್ಯ ? ಎಂಬುದು ಈ ಬೆದರಿಕೆಯಿಂದ ಗಮನಕ್ಕೆ ಬರುತ್ತದೆ ! ಕೇಂದ್ರದ ಭಾಜಪ ಸರಕಾರ ಇದರತ್ತ ಗಮನಹರಿಸಬೇಕು !