Riots Bangladeshi Links : ನಾಗಮಂಗಲದ ಗಲಭೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರ ಕೈವಾಡ !

ಭಾಜಪ ಶಾಸಕ ಸುರೇಶ್ ಗೌಡ ಇವರ ಆರೋಪ 

ಮಂಡ್ಯ – ಇಲ್ಲಿನ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರು ಶಾಮೀಲಾಗಿದ್ದಾರೆ ಎಂದು ಭಾಜಪ ಶಾಸಕ ಸುರೇಶ ಗೌಡ ಇವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರೋಪಿಸಿದ್ದಾರೆ. ಅವರು ಮಾತು ಮುಂದುವರೆಸಿ, ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರು ನಾಗಮಂಗಲದಲ್ಲಿ ನೆಲೆಸಿದ್ದಾರೆ. ನಾವು ಯಾರೂ (ಹಿಂದೂಗಳು) ಈ ಗಲಭೆಯಲ್ಲಿ ಇರಲಿಲ್ಲ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌.ಐ.ಎ.) ಹಸ್ತಾಂತರಿಸಲಾಗಿದ್ದು, ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಇದು ನಿಜವೇ ಆಗಿದ್ದರೆ ಭವಿಷ್ಯದಲ್ಲಿ ದೇಶದೆಲ್ಲೆಡೆ ಹಿಂದೂಗಳಿಗೆ ಇದೇ ರೀತಿಯ ಗಲಭೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು !
  • ಕೇಂದ್ರದ ಭಾಜಪ ಸರಕಾರವು ದೇಶಾದ್ಯಂತ ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರನ್ನು ಹೊರಹಾಕಲು ಸಮರೋಪಾದಿಯಲ್ಲಿ ಪ್ರಯತ್ನಗಳನ್ನು ಮಾಡಬೇಕು ಎಂದು ರಾಷ್ಟ್ರಪ್ರೇಮಿ ಹಿಂದೂಗಳಿಗೆ ಅನಿಸುತ್ತದೆ !