ಕೊರೊನಾ, ಶ್ರಾದ್ಧಕರ್ಮಗಳು ಮತ್ತು ಅವಕಾಶವಾದಿ ನಾಸ್ತಿಕರು !
ಸನಾತನ ಧರ್ಮದಲ್ಲಿ ಪುನರ್ಜನ್ಮದ ಸಿದ್ಧಾಂತವನ್ನು ಹೇಳಲಾಗಿದೆ. ‘ವ್ಯಕ್ತಿಯ ಕರ್ಮಾನುಸಾರ ಅವನಿಗೆ ಮೃತ್ಯುವಿನ ನಂತರದ ಗತಿ ದೊರಕುತ್ತದೆ, ಎಂದು ಶಾಸ್ತ್ರವು ಹೇಳುತ್ತದೆ. ಜೀವನವಿಡೀ ಸತ್ಕರ್ಮಗಳನ್ನು ಮಾಡಿದ್ದರೆ, ಜೀವಕ್ಕೆ ಮೃತ್ಯುವಿನ ಬಳಿಕ ಸದ್ಗತಿ ಸಿಗುತ್ತದೆ; ಆದರೆ ಜೀವನದಲ್ಲಿ ಪಾಪ, ಪರಪೀಡೆ, ಅನೈತಿಕತೆ ಇತ್ಯಾದಿ ಕೃತ್ಯಗಳನ್ನು ಮಾಡಿದ್ದರೆ, ಕರ್ಮದ ಫಲಗಳು ಪರಲೋಕದಲ್ಲಿ ಅಧೋಗತಿಯತ್ತ ಕರೆದುಕೊಂಡು ಹೋಗುತ್ತವೆ.