‘ಸನಾತನ ಸಂಸ್ಥೆಯ ರಾಷ್ಟ್ರರಕ್ಷಣೆ, ಧರ್ಮ ಜಾಗೃತಿ ಮತ್ತು ಅಧ್ಯಾತ್ಮ ಪ್ರಸಾರ ಕಾರ್ಯವು ಈಗ ದೇಶ-ವಿದೇಶಗಳಲ್ಲಿ ಎಲ್ಲ ಕಡೆಗೆ ದೊಡ್ಡ ಪ್ರಮಾಣದಲ್ಲಿ ವೃದ್ಧಿಯಾಗುತ್ತಿದೆ. ಈಶ್ವರನ ಕೃಪೆಯಿಂದ ಅನೇಕ ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಸಹ ಪೂರ್ಣವೇಳೆ ಸಾಧನೆ ಮತ್ತು ಧರ್ಮ ಕಾರ್ಯ ಮಾಡುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಗೋವಾದ ರಾಮನಾಥಿ ಆಶ್ರಮದಲ್ಲಿನ ಹೆಚ್ಚುತ್ತಿರುವ ಕಾರ್ಯದ ವ್ಯಾಪ್ತಿಯನ್ನು ನೋಡಿದರೆ ವಿವಿಧ ರೀತಿಯ ಸಾಹಿತ್ಯ, ಉದಾ. ಧಾನ್ಯ, ಪೀಠೋಪಕರಣಗಳು, ಕಟ್ಟಡಕಾಮಗಾರಿ ಮತ್ತು ದುರಸ್ತಿಯ ಸಾಮಗ್ರಿಗಳು ಮುಂತಾದವುಗಳನ್ನು ಇಡಲು ಅಲ್ಲಿನ ಸ್ಥಳವು ಸಾಕಾಗುತ್ತಿಲ್ಲ. ಅದಕ್ಕಾಗಿ ಗೋವಾದ ಫೋಂಡಾದಲ್ಲಿನ ಪರಿಸರದಲ್ಲಿ ೫೦ ರಿಂದ ೨೦೦ ಚದರ ಮೀಟರ್ ವಾಸ್ತು, ಉದಾ. ಗೋದಾಮು (ಗೋಡೌನ್), ಅಂಗಡಿಯ ಒಂದು ಕೊಠಡಿ, ನೆಲಮಾಳಿಗೆ, ಚಪ್ಪರ, ಮನೆ, ಮನೆಯ ಪಕ್ಕದಲ್ಲಿರುವ ಪ್ರತ್ಯೇಕ ಕೋಣೆ ಬೇಕಾಗಿದೆ. ಮಳೆ ನೀರು ಹಾಗೂ ತೇವಾಂಶ ಇರುವುದು, ಗೆದ್ದಲು ಬರುವುದು, ಇಲಿಗಳ ಉಪಟಳ ಮುಂತಾದವುಗಳಿಂದ ಈ ವಾಸ್ತು ಸುರಕ್ಷಿತವಿರಬೇಕು.
ಈ ವಿಧದ ವಾಸ್ತುವನ್ನು ಸಂಸ್ಥೆಗೆ ಅರ್ಪಣೆ ಅಥವಾ ಉಚಿತವಾಗಿ ಉಪಯೋಗಿಸಲು ಅಥವಾ ಕಡಿಮೆ ಬಾಡಿಗೆಯ ಸ್ವರೂಪದಲ್ಲಿ ಕೊಡಲು ಸಾಧ್ಯವಿದ್ದಲ್ಲಿ ಮುಂದಿನ ಕ್ರಮಾಂಕಕ್ಕೆ ಸಂಪರ್ಕಿಸಿ.
ಹೆಸರು ಮತ್ತು ಸಂಪರ್ಕ ಕ್ರಮಾಂಕ
ಸೌ. ಭಾಗ್ಯಶ್ರೀ ಸಾವಂತ –7058885610
ವಿ-ಅಂಚೆ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ,C/o ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401 – ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೨೬.೭.೨೦೨೦)
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !