ಚಿರಂತನ ಮತ್ತು ಅವಿನಾಶಿ ಸನಾತನ !

ಕಳೆದ ಕೆಲವು ದಿನಗಳಿಂದ ಕೆಲವು ರಾಜಕಾರಣಿಗಳು ಸನಾತನ ಧರ್ಮ ವನ್ನು ಅತ್ಯಂತ ಹೀನಾಯವಾಗಿ ಟೀಕಿಸುತ್ತಿದ್ದಾರೆ. ತಮಿಳುನಾಡಿನ ‘ದ್ರಮುಕ’ ಪಕ್ಷದ (ದ್ರವಿಡ ಮುನ್ನೇತ್ರ ಕಳಘಮ್ ಅಂದರೆ ದ್ರವಿಡ ಪ್ರಗತಿ ಸಂಘ) ಕ್ರೀಡಾಸಚಿವ ಹಾಗೂ ಮುಖ್ಯಮಂತ್ರಿಯವರ ಪುತ್ರ ಉದಯನಿಧಿ ಸ್ಟಾಲಿನ್ ಇವರು ‘ಸನಾತನ ನಿರ್ಮೂಲನ ಪರಿಷತ್ತಿ’ನಲ್ಲಿ ಮಾತನಾಡುವಾಗ ‘ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾದಂತಿದ್ದು, ಅದರ ಉಚ್ಚಾಟನೆಯಾಗಬೇಕು’ ಎಂದು ಅಣಿಮುತ್ತುಗಳನ್ನು ಉದುರಿಸಿದರು. ತದನಂತರ ತಮಿಳುನಾಡಿನ ದ್ರಮುಕ ಪಕ್ಷದ ಸಂಸದ ಎ.ಕೆ. ರಾಜಾ, ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ, ಚಿತ್ರನಟ ಕಮಲ್ ಹಾಸನ, ಚಿತ್ರನಟ ಪ್ರಕಾಶ ರಾಜ ಮುಂತಾದ ಮಹಾಶಯರ ಗುಂಪು ಉದಯನಿಧಿಯವರ ಹೇಳಿಕೆಗೆ ಜೊತೆ ನೀಡಿದರು. ವಾಸ್ತವದಲ್ಲಿ ಈ ‘ಹೇಟ್ ಸ್ಪೀಚ್ ಮಾಡಿದ್ದಕ್ಕಾಗಿ ಉದಯನಿಧಿ ಮತ್ತು ಅವರಂತಹ ಮಹಾಶಯರ ಗುಂಪನ್ನು ಜೈಲಿಗೆ ಅಟ್ಟಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಅವರ ಮೇಲೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಅರ್ಥಾತ್, ಸನಾತನ ಧರ್ಮದಲ್ಲಿ, ‘ಕರ್ಮಸಿದ್ಧಾಂತ’ ಇದೆ. ಹಾಗಾಗಿ ಮಾಡುವ ಪ್ರತಿಯೊಂದು ಕರ್ಮದ ಫಲವೂ ಎಂದಾದರೂ ಅನುಭವಿಸಲೇಬೇಕಾಗಲಿದೆ !

೧. ಸನಾತನವು ಅವಿನಾಶಿ ತತ್ತ್ವ !

‘ಸನಾತನ’ ಪದದ ಉತ್ಪತ್ತಿಯು ‘ಸನ ಆತನೋತಿ ಇತಿ ಸನಾತನಃ |’ ಎಂದಾಗಿದೆ. ಸನಾ ಎಂದರೆ ಶಾಶ್ವತ ಮತ್ತು ಆತನೋತಿ ಎಂದರೆ ಪ್ರಾಪ್ತಿ ಮಾಡಿಕೊಡುವಂತಹದ್ದು. ‘ಸನಾತನ’ ಎಂದರೆ ಯಾವುದು ಶಾಶ್ವತವನ್ನು ಪ್ರಾಪ್ತಿ ಮಾಡಿಕೊಡುವುದೋ ಅದು, ಎಂದರ್ಥ. ‘ಸನಾತನೊ ನಿತ್ಯ ನೂತನಃ’ ಎಂದರೆ ಯಾವುದು ಶಾಶ್ವತವೋ, ಅನಾದಿಯಾಗಿದ್ದರೂ ನಿತ್ಯನೂತನ ಅಂದರೆ ಎಂದೆಂದಿಗೂ ಅದು ಹಳೆಯದಾಗುವುದಿಲ್ಲವೋ, ಅದನ್ನು ‘ಸನಾತನ’ ಎಂದು ಕರೆಯಲಾಗುತ್ತದೆ. ಸನಾತನವು ಅವಿನಾಶಿ ತತ್ತ್ವವಾಗಿದೆ. ಮಹಾಭಾರತದ ‘ಶಾಂತಿ ಪರ್ವದ ಅಧ್ಯಾಯ ೬೪ ರಲ್ಲಿ ಅನಾದಿ ಕಾಲದಲ್ಲಿ ಈಶ್ವರನು ಸೃಷ್ಟಿಯ ಉತ್ಪತ್ತಿ ಮಾಡಿದಾಗಲೇ ಧರ್ಮವನ್ನೂ ನಿರ್ಮಿಸಿದನು. ಅನಾದಿ ಮತ್ತು ಅನಂತವಾದ ಧರ್ಮವನ್ನು ಕೊನೆಗಾಣಿಸಲು ಎಷ್ಟೇ ಪ್ರಯತ್ನಪಟ್ಟರೂ ಸನಾತನವನ್ನು ಕೊನೆಗಾಣಿಸಲು ಸಾಧ್ಯವಿಲ್ಲ; ಏಕೆಂದರೆ ಉತ್ಪತ್ತಿ, ಸ್ಥಿತಿ ಮತ್ತು ಲಯದ ನಿಯಮವು ಧರ್ಮಕ್ಕೆ ಅನ್ವಯವಾಗುವುದಿಲ್ಲ. ಯುಗಾನುಯುಗಗಳಿಂದಲೂ ಸುರರು ಮತ್ತು ಅಸುರರು ಇವರ ನಡುವೆ ಸಂಗ್ರಾಮ ನಡೆಯುತ್ತಿದೆ ಮತ್ತು ಇದರಲ್ಲಿ ಅಂತಿಮ ವಿಜಯ ಸತ್ಯದ್ದೇ ಅಂದರೆ ಸನಾತನ ಧರ್ಮದ್ದೇ ಆಗುತ್ತದೆ. ಇದಕ್ಕೆ ಇತಿಹಾಸವೇ ಸಾಕ್ಷಿಯಿದೆ. ಇದೇ ಶಾಶ್ವತ ಸತ್ಯವಾಗಿದೆ. ಆದುದರಿಂದ ಮುಂಬರುವ ಕಾಲದಲ್ಲಿ ಸನಾತನ ಧರ್ಮದ ಉಚ್ಛಾಟನೆಯಾಗುವುದೋ ಅಥವಾ ಸನಾತನವಿರೋಧಿ ದ್ರಮುಕ ಪಕ್ಷದ ಉಚ್ಚಾಟನೆಯಾಗುವುದೋ ? ಎನ್ನುವುದರ ಉತ್ತರವನ್ನು ಕಾಲವೇ ನೀಡಲಿದೆ.

೨. ಹಿಂದುತ್ವದ ಸೂರ್ಯ ‘ಉದಯಿ’ಸುತ್ತಿದ್ದಾನೆ !

ಶ್ರೀ. ಚೇತನ ರಾಜಹಂಸ

ಸ್ಟಾಲಿನ್‌ರವರಿಂದ ಹೇಳಿಕೆ ಬಂದ ಕೂಡಲೇ ಧರ್ಮದ್ವೇಷಿ ಬಾಲಂಗೋಚಿಗಳು ಒಬ್ಬರ ಹಿಂದೆ ಒಬ್ಬರು ಹಿಂದೂ ಧರ್ಮದ ವಿರುದ್ಧ ಹೇಳಿಕೆಯನ್ನು ನೀಡಿದರು. ಕೆಲವು ವರ್ಷಗಳ ಹಿಂದೆ, ‘ಧರ್ಮವು ಅಫೀಮಿನ ಗುಳಿಗೆಯಾಗಿದೆ’, ‘ದೇವರನ್ನು ರಿಟೈರ್ಡ್ ಮಾಡಿ’ ಎನ್ನುವಂತಹ ಹೇಳಿಕೆಗಳನ್ನು ನೀಡಲಾಗಿತ್ತು. ಈ ಹೇಳಿಕೆಗಳೆಂದರೆ, ಹಿಂದೂ ಧರ್ಮದ ವಿರುದ್ಧ ನಡೆಯುವ ‘ಡಿಸ್‌ಮೆಟಲಿಂಗ ಗ್ಲೋಬಲ್ ಹಿಂದುತ್ವ (ಹಿಂದುತ್ವದ ಜಾಗತಿಕ ಉಚ್ಛಾಟನೆ) ಈ ಅಂತಾರಾಷ್ಟ್ರೀಯ ಷಡ್ಯಂತ್ರದ್ದೇ ಭಾಗ ವಾಗಿದೆ. ಮೊಗಲ ದಾಳಿಕೋರರು ಬಳಸಿದ ಭಾಷೆಯನ್ನೇ ಇಂದು ಸ್ಟಾಲಿನ್ ಮತ್ತು ಓವೈಸಿಯವರು ಮಾತನಾಡುತ್ತಿದ್ದಾರೆ. ಸನಾತನ ಹಿಂದೂ ಧರ್ಮವನ್ನು ವಿರೋಧಿಸುವ ಪ್ರಯತ್ನವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದರೂ, ಇಂದು ಕೊರೊನಾ ಮಹಾಮಾರಿಯ ಬಳಿಕ ಜಗತ್ತಿನಾದ್ಯಂತ ಹಿಂದೂ ಧರ್ಮದ ವಿಷಯದಲ್ಲಿ ಆಕರ್ಷಣೆ ಹೆಚ್ಚುತ್ತಿದೆ. ಸನಾತನ ಜೀವನಶೈಲಿ ಯನ್ನು ಅಂಗೀಕರಿಸುವ ಪ್ರಮಾಣವೂ ಹೆಚ್ಚುತ್ತಿದೆ. ಯಾವ ರೀತಿ ಸೂರ್ಯೋದಯದ ಸಮಯ ನಿಧಾನವಾಗಿ ಹತ್ತಿರ ಬರುತ್ತಿರುವಾಗ ವಾತಾವರಣದ ಅಂಧಕಾರವೂ ಕಡಿಮೆಯಾಗು ತ್ತದೆ. ಇದೂ ಹಾಗೆಯೇ ಇದೆ. ಉದಯನಿಧಿ ಅಥವಾ ಎ. ರಾಜಾ ಇವರು ಎಷ್ಟೇ ಬಾಯಿ ಬಡಿದುಕೊಂಡರೂ, ಇಂದು ಜಾಗತಿಕ ಮಟ್ಟದಲ್ಲಿ ಹಿಂದುತ್ವದ ‘ಡಿಸಮೆಂಟಲಿಂಗ’ (ಉಚ್ಚಾಟನೆ) ಅಲ್ಲ ಬದಲಾಗಿ ಹಿಂದುತ್ವದ ‘ಸೂರ್ಯೋದಯ’ವಾಗುತ್ತಿದೆ. ಇದೇ ವಾಸ್ತವವಾಗಿದೆ. ಇತ್ತೀಚೆಗಷ್ಟೇ ಭಾರತದಲ್ಲಿ ‘ಜಿ-೨೦’ ಸಮ್ಮೇಳನ ಶೃಂಗಸಭೆ ನಡೆಯಿತು. ಆ ಸಮಯದಲ್ಲಿ ಭಾರತಕ್ಕೆ ಬಂದಿದ್ದ ಬ್ರಿಟನ್ ಪ್ರಧಾನಮಂತ್ರಿ ಋಷಿ ಸುನಕ ಇವರು ಪತ್ನಿಸಮೇತರಾಗಿ ಅಕ್ಷರಧಾಮ ಮಂದಿರಕ್ಕೆ ಭೇಟಿ ನೀಡಿದರು. ‘ನಾನು ಹಿಂದೂ ಮತ್ತು ಭಾರತೀಯ ಮೂಲದವನಾಗಿರುವ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ಈ ಸಮ್ಮೇಳನ
ದಲ್ಲಿ ಆಹ್ವಾನಿತ ಅನೇಕ ವಿದೇಶಿ ಮಹಿಳೆಯರು ಸಾಂಪ್ರದಾಯಿಕ ಹಿಂದೂ ಉಡುಗೆಯಾದ ಸೀರೆಯನ್ನು ಧರಿಸಿದ್ದರು. ಅಮೇರಿಕದಲ್ಲಿ ಮುಂಬರುವ ರಾಷ್ಟ್ರಾಧ್ಯಕ್ಷರ ಹುದ್ದೆಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಭಾರತೀಯ ವಂಶದ ರಾಮಸ್ವಾಮಿಯವರೂ ಹಿಂದೂ ಧರ್ಮದ ವಿಷಯದಲ್ಲಿ ಶ್ರದ್ಧೆ ಯನ್ನು ವ್ಯಕ್ತಪಡಿಸಿದ್ದಾರೆ. ಹಿಂದೂ ಧಾರ್ಮಿಕಮೌಲ್ಯದಂತೆ ಅವರು ತಮ್ಮ ದೈನಂದಿನ ದಿನಚರಿಯನ್ನು ಆಚರಿಸುತ್ತಿರುವುದಾಗಿ ಹೇಳಿದ್ದಾರೆ. ಇದೇ ತಿಂಗಳಿನಲ್ಲಿ ಅಮೇರಿಕಾದ ಲೂಯಿಸ್ವಿಲ್ಲೆ ನಗರದ ಮಹಾಪೌರರು ಸಪ್ಟೆಂಬರ ೩ ಅನ್ನು ‘ಸನಾತನ ಧರ್ಮ ದಿನ’ ಎಂದು ಘೋಷಿಸಿದ್ದಾರೆ. ವಿದೇಶದ ಜನರು ಹಿಂದೂ ಧರ್ಮವನ್ನು ಆಚರಿಸುತ್ತಿದ್ದಾರೆ. ಹಾಗೆಯೇ ಭಾರತ ದಲ್ಲಿ ಆಸ್ತಿಕರೂ ಹೆಚ್ಚುತ್ತಿದ್ದಾರೆ. ೨೦೧೯-೨೦೨೦ ರಲ್ಲಿ ಭಾರತ ದಲ್ಲಿ ನಡೆಸಿದ ಸಂಶೋಧನೆಯ ಆಧಾರದಲ್ಲಿ ‘ಪ್ಯು ರಿಸರ್ಚ ಸೆಂಟರ’ನ ವರದಿ ಪ್ರಕಟವಾಯಿತು. ಅದರಲ್ಲಿ ‘ಶೇ. ೮೦ ರಷ್ಟು ಹಿಂದೂಗಳು ದೇವರನ್ನು ನಂಬುತ್ತಾರೆ. ಶೇ. ೫೫ ರಷ್ಟು ಹಿಂದೂಗಳ ಮನೆಗಳಲ್ಲಿ ನಿತ್ಯವೂ ಪೂಜೆ ಆಗುತ್ತದೆ’ ಎಂದು ಕಂಡು ಬಂದಿದೆ. ಯೋಗ, ಆಯುರ್ವೇದ ಮತ್ತು ಸಂಸ್ಕೃತ ಈ ವಿಷಯದಲ್ಲಿಯೂ ಜಗತ್ತಿನಾದ್ಯಂತ ಆಕರ್ಷಣೆ ಹೆಚ್ಚುತ್ತಿದೆ.

೩. ತಮಿಳುನಾಡಿನ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಿ

ಉದಯನಿಧಿ ತಮ್ಮನ್ನು ಕ್ರೈಸ್ತ ಎಂದು ಹೇಳಿಕೊಳ್ಳುತ್ತಾರೆ ಮತ್ತು ಸನಾತನ ಧರ್ಮಕ್ಕೆ ಹೆಸರಿಡುತ್ತಾರೆ. ಬಹುತೇಕವಾಗಿ ಹಿಂದೂ ಧರ್ಮದ ಪ್ರಭಾವ ಎಲ್ಲೆಡೆ ಹೆಚ್ಚುತ್ತಿರುವುದರಿಂದಲೇ ಉದಯನಿಧಿಯವರ ಅಸ್ವಸ್ಥತೆ ಹೆಚ್ಚುತ್ತಿರಬಹುದು. ಸನಾತನ ಧರ್ಮ ಸಮಾಜದ ಪ್ರತಿನಿಧಿಯಾಗಿ ನಮಗೆ ಉದಯನಿಧಿ ಯವರಿಗೆ ಒಂದು ವಿಷಯ ಹೇಳಬೇಕೆನಿಸುತ್ತದೆ, ಉದಯನಿಧಿ ಯವರನ್ನು ಅಂದರೆ ತಮಿಳುನಾಡಿನಲ್ಲಿ ಆಡಳಿತಾರೂಢ ಪಕ್ಷಕ್ಕೆ ಸನಾತನ ಧರ್ಮ ಒಪ್ಪಿಗೆಯಿಲ್ಲದಿರುವ ಕಾರಣದಿಂದ ಈಗ ಅವರು ಅಲ್ಲಿರುವ ಸನಾತನ ಧರ್ಮದ ಆಧಾರಶಿಲೆಯಾಗಿರುವ ದೇವಸ್ಥಾನಗಳ ಮೇಲಿನ ಹಕ್ಕನ್ನು ಬಿಟ್ಟುಕೊಡಬೇಕು. ಅವರು ತಮಿಳುನಾಡಿನಲ್ಲಿರುವ ಎಲ್ಲ ದೇವಸ್ಥಾನಗಳನ್ನು ಸರಕಾರೀಕರಣ ದಿಂದ ಮುಕ್ತಗೊಳಿಸುವುದಾಗಿ ಘೋಷಣೆ ಮಾಡಬೇಕು.

೪. ‘ಹೇಟ್ ಸ್ಪೀಚ್ ಬಗ್ಗೆ ಯಾರು ಕ್ರಮ ಕೈಗೊಳ್ಳುವರು ?

ನಮ್ಮ ದೇಶದಲ್ಲಿ ದುರ್ದೈವದಿಂದ ಸನಾತನ ಧರ್ಮಕ್ಕೆ ಹೆಸರಿಡಿರಿ ಅಥವಾ ‘ಸನಾತನ ಧರ್ಮದವರನ್ನು ಉಚ್ಛಾಟನೆ ಮಾಡಿರಿ’ ಅಥವಾ ಸನಾತನ ಧರ್ಮದ ಉಚ್ಛಾಟನೆಗಾಗಿ ‘ಸರ ತನ ಸೆ ಜುದಾ’ (ತಲೆಯನ್ನು ದೇಹದಿಂದ ಬೇರ್ಪಡಿಸು ವುದು) ಈ ರೀತಿ ಬಹಿರಂಗವಾಗಿ ಘೋಷಣೆ ನೀಡಿರಿ. ಯಾರ ಮೇಲೆಯೂ ‘ಹೇಟ್ ಸ್ಪೀಚ್ ಸಂದರ್ಭದಲ್ಲಿ ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ ಅಥವಾ ನ್ಯಾಯಾಲಯದ ಸರ್ವೋಚ್ಚ ಸಂಸ್ಥೆ ‘ಸುಮೊಟೊ’ (ತಾವಾಗಿ ಅರ್ಜಿಯನ್ನು ದಾಖಲಿಸುವುದು) ಕ್ರಮಕೈಗೊಳ್ಳುವ ಧೈರ್ಯವನ್ನು ತೋರಿಸುವುದಿಲ್ಲ.

‘ಸೆಕ್ಯುಲರಿಸಂ’ (ಜಾತ್ಯತೀತತೆ) ಉಪದೇಶ ನೀಡುವ ಉದಾರಮತವಾದಿಗಳಿಗೆ ಒಂದೇ ಒಂದು ಪ್ರಶ್ನೆಯಿದೆ, ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದರಿಂದ ಭಾರತದಲ್ಲಿರುವ ‘ಸೆಕ್ಯುಲಿರಸಂ’ ಹೇಗೆ ಅಪಾಯಕ್ಕೀಡಾಗುವುದಿಲ್ಲ ? ‘We the people’…, ಅಂದರೆ ‘ನಾವು ನಾಗರಿಕರು’ ಭಾರತೀಯ ಸಂವಿಧಾನದ ಮೂಲ ಧ್ಯೇಯವಾಗಿರುವಾಗ ಅರ್ಥಾತ್ ಬಹುಸಂಖ್ಯಾತ ಹಿಂದೂ ಸಮಾಜವು ಸನಾತನಿ ಆಗಿರುವಾಗ, ಭಾರತದ ಸಂವಿಧಾನ ಹೇಗೆ ಅಪಾಯಕ್ಕೀಡಾಗಿಲ್ಲ ? ವಾಸ್ತವದಲ್ಲಿ ಉದಯನಿಧಿಯವರ ಹೇಳಿಕೆಯೆಂದರೆ ಒಂದು ರೀತಿಯಲ್ಲಿ ಸನಾತನ ಧರ್ಮದ ಹಿಂದೂಗಳನ್ನು ನಿರ್ನಾಮ ಮಾಡಲು ಪ್ರಚೋದನಕಾರಿ ಹೇಳಿಕೆಯಾಗಿದೆ. ಆದರೆ ‘ಉದಯನಿಧಿಯವರ ಈ ‘ಹೇಟ್ ಸ್ಪೀಚ’ ಮೇಲೆ ಯಾರು ಕ್ರಮ ಕೈಗೊಳ್ಳುವರು ?’ ಇದೇ ಪ್ರಶ್ನೆ ಸನಾತನಿ ಸಮಾಜದವರ ಮನಸ್ಸಿನಲ್ಲಿ ಮೂಡುತ್ತಿದೆ. ಇನ್ನುಳಿದಂತೆ ಸನಾತನ ಧರ್ಮದ ಉಚ್ಛಾಟನೆಯ ಬಗ್ಗೆ ಹೇಳುವುದಾದರೆ, ಸನಾತನ ಧರ್ಮ ಚಿರಂತನವಾಗಿದೆ. ಅವಿನಾಶಿಯಾಗಿದೆ. ‘ಕಾಗೆಯ ಶಾಪದಿಂದ ಹಸು ಸಾಯುವುದಿಲ್ಲ ಹಾಗೆಯೇ ಯಾರದೇ ದ್ವೇಷದ ಹೇಳಿಕೆ ಯಿಂದ ಸನಾತನ ಧರ್ಮ ಕೊನೆಗೊಳ್ಳುವುದಿಲ್ಲ. ಇದು ನಮ್ಮ ಧಾರ್ಮಿಕಶ್ರದ್ಧೆಯಾಗಿದೆ. – ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೧೩.೯.೨೦೨೩)