ಶ್ರೀ ಗಣೇಶಚತುರ್ಥಿಯ ಸಮಯದಲ್ಲಿ ಶ್ರೀ ಗಣಪತಿಯ ಉಪಾಸನೆಯನ್ನು ಯಾವ ಪ್ರಕಾರ ಮಾಡಬೇಕು ?

ಶ್ರೀ ಗಣಪತಿಯ ನಾಮಜಪವನ್ನು ಅಧಿಕಾಧಿಕ ಮಾಡಿ : ಶ್ರೀ ಗಣಪತಿಯ ನಾಮಜಪವನ್ನು ಮಾಡುವುದರಿಂದ ಚತುರ್ಥಿಯ ಸಮಯದಲ್ಲಿ ನಮಗೆ ಗಣೇಶತತ್ವದ ಲಾಭವು ಪ್ರಾಪ್ತವಾಗುತ್ತದೆ. ಜೊತೆಗೆ ಮನಸ್ಸಿನ ಏಕಾಗ್ರತೆಯು ಮತ್ತು ಗ್ರಹಣ ಮಾಡುವ ಕ್ಷಮತೆಯು ವೃದ್ಧಿಯಾಗುತ್ತದೆ. ಮನಸ್ಸಿನಲ್ಲಿರುವ ಭಯದ ವಿಚಾರವು ದೂರವಾಗುತ್ತದೆ.