ಉತ್ತರಪ್ರದೇಶದ ಕಾನಪುರ, ಕ್ರೈಸ್ತ ಮಿಷನರಿಗಳ ಮತಾಂತರ ಕೇಂದ್ರ

ಕಳೆದ ಕೆಲವು ವರ್ಷಗಳಿಂದ ನೂರಾರು ಹಿಂದೂ ಕುಟುಂಬಗಳ ಮತಾಂತರ !

  • ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಈ ರೀತಿ ಹಿಂದೂಗಳನ್ನು ಹಾಡುಹಗಲೇ ಮತಾಂತರ ಮಾಡುತ್ತಾರೆಂದರೆ ಈ ಕ್ರೈಸ್ತ ಮಿಷನರಿಗಳಿಗೆ ಕಾನೂನಿನ ಭಯ ಉಳಿದಿಲ್ಲ, ಎಂಬುದು ಸ್ಪಷ್ಟವಾಗುತ್ತದೆ. ಈ ಸ್ಥಿತಿಯು ಉತ್ತರಪ್ರದೇಶದ ಸರಕಾರಕ್ಕೆ ಲಜ್ಜಾಸ್ಪದ !
  • ಕಾನಪುರದಂತಹ ಆರ್ಥಿಕ ಸಮೃದ್ಧ ನಗರದಲ್ಲಿ ಕ್ರೈಸ್ತ ಮಿಷನರಿಗಳಿಂದ ಹೆಚ್ಚುತ್ತಿರುವ ಚಟುವಟಿಕೆ ಹಾಗೂ ಗ್ರಾಮೀಣ ಭಾರತದಲ್ಲಿ ಅವರ ಕಾರ್ಯ ಯಾವ ಹಂತಕ್ಕೆ ತಲುಪಿದೆ ಎಂಬ ಯೋಚನೆ ಮಾಡದಿರುವುದೇ ಒಳಿತು ! ಈಗ ಇದಕ್ಕೆ ಹಿಂದೂ ರಾಷ್ಟ್ರವೇ ಏಕೈಕ ಪರ್ಯಾಯವಾಗಿದೆ, ಇದನ್ನು ತಿಳಿದುಕೊಳ್ಳಿ !
  • ಕಾನಪುರ ಇದು ಉತ್ತರಪ್ರದೇಶದಲ್ಲಿನ ಸಮೃದ್ಧ ನಗರಗಳಲ್ಲಿ ಒಂದು ಮಹತ್ವದ ನಗರವಾಗಿದೆ. ಇಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳು ಮತ್ತು ವಿಶ್ವ ಪ್ರಸಿದ್ಧ ‘ಐಐಟಿ ಕಾನಪುರ’ ಇದ್ದರೂ ಕ್ರೈಸ್ತ ಮಿಷನರಿಗಳು ಹಿಂದೂಗಳ ಅಸಹಾಯಕತೆಯನ್ನು ದುರುಪಯೋಗಿಸಿಕೊಳ್ಳುತ್ತಾರೆ. ಇದರಿಂದ ಜನರ ಸುರಕ್ಷತೆಗೆ ಸಮೃದ್ಧಿ ಮತ್ತು ಶಿಕ್ಷಣ ಇದರ ಎಳ್ಳಷ್ಟು ಸಂಬಂಧ ಇಲ್ಲ, ವಿಕಾಸದ ಜೊತೆಗೆ ಹಿಂದೂಗಳ ರಕ್ಷಣೆಯಾಗುವುದು ಅತ್ಯಂತ ಅವಶ್ಯಕವಾಗಿದೆ, ಎಂಬುದು ತಿಳಿಯುತ್ತದೆ !

ಕಾನಪುರ (ಉತ್ತರಪ್ರದೇಶ) – ನಗರದಲ್ಲಿ ಪ್ರತಿ ತಿಂಗಳು ಮತಾಂತರದ ಒಂದಾದರೂ ಪ್ರಕರಣ ಬೆಳಕಿಗೆ ಬರುತ್ತದೆ. ನಗರವು ಮತಾಂತರದ ನೆಲೆಯಾಗಿದೆ. ಕ್ರೈಸ್ತ ಮಿಷನರಿಗಳು ಇಲ್ಲಿಯ ಗುಡಿಸಲುಗಳಿಗೆ ಹೋಗಿ ಹಿಂದೂಗಳಿಗೆ ಚಿಕಿತ್ಸೆ, ಹಣ, ವಿವಾಹ, ನೌಕರಿ, ವ್ಯವಸಾಯ ಮುಂತಾದ ಆಮಿಷ ತೋರಿಸಿ ಅವರನ್ನು ಮತಾಂತರಿಸುತ್ತಿದ್ದಾರೆ. ಇಂತಹ ಘಟನೆಗಳು ಬೆಳಕಿಗೆ ಬಂದ ನಂತರ ಪೊಲೀಸರು ಸಂಬಂಧಪಟ್ಟ ಮಿಷನರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ; ಆದರೆ ಇದರ ಹಿಂದಿನ ರೂವಾರಿಗಳ ವರೆಗೆ ತಲುಪುವುದು ಕಠಿಣವಾಗಿದೆ. ಮಿಷನರಿಗಳಿಗೆ ವಿದೇಶದಿಂದ ಹಣ ಪೂರೈಕೆ ಆಗುತ್ತಿರುವುದರ ಸಾಕ್ಷಿಗಳು ಕೂಡ ಪೊಲೀಸರಿಗೆ ದೊರೆತಿದೆ. ನಗರದಲ್ಲಿನ ಘಾಟಮಪುರ, ಚಕೆರಿ, ರಾವತಪುರ, ಕರ್ನಲಗಂಜ ಮತ್ತು ಈಗ ಮುನ್ನಿಪುರವ ಇಲ್ಲಿ ಮತಾಂತರದ ಘಟನೆಗಳು ಬೆಳಕಿಗೆ ಬಂದಿವೆ.

೧. ಮುನ್ನಿಪುರವ : ಕಾನಪುರದ ನವಾಬಗಂಜ ಇಲ್ಲಿಯ ಮುನ್ನಿಪುರವ ಪ್ರದೇಶದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಮತಾಂತರದ ಪ್ರಕರಣದಲ್ಲಿ ನೂರಾರು ಹಿಂದೂ ಕುಟುಂಬಗಳಿಗೆ ಆಮಿಷ ತೋರಿಸಿ ಮತಾಂತರಿಸಲಾಗಿದೆ. ಈ ಕುರಿತು ಪ್ರಾರ್ಥನಾಸಭೆಯಲ್ಲಿ ಸಹಭಾಗಿ ಆಗಲು ಒತ್ತಡ ಹೇರಿದ ನಂತರ ಒಂದು ಮತಾಂತರವಾದ ಕುಟುಂಬವು ಮಿಷನರಿಗಳನ್ನು ನಿಷೇಧಿಸುತ್ತಾ ವಿಶ್ವ ಹಿಂದೂ ಪರಿಷತ್ತು, ಭಜರಂಗ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿತು. ಚೋಟು ಎಂಬ ಹಿಂದೂ ವ್ಯಕ್ತಿಯ ಪತ್ನಿ ಬಬಲಿದೇವಿಯು ಧೈರ್ಯ ತೋರಿಸಿ ಪೊಲೀಸರಿಗೆ ದೂರು ಕೂಡ ನೀಡಿದ್ದಾಳೆ. ಇದರ ನಂತರ ಪೊಲೀಸರು ಆಗಸ್ಟ್ ೧೧ ರಂದು ಕ್ರಮ ಕೈಗೊಂಡು ಮ್ಯಾಕ್ಲೋನ್‌ ಸಿಂಹ ಮತ್ತು ಮ್ಯಾರಿಸ ಸಿಂಹ ಇವರ ವಿರುದ್ಧ ಮತಾಂತರ ನಿಷೇಧ ಕಾನೂನಿನ ಕಲಂ ಅಡಿಯಲ್ಲಿ ದೂರು ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಮತಾಂತರಗೊಳ್ಳುವವರಿಗೆ ೧೦ ರಿಂದ ೩೦ ಸಾವಿರ ರೂಪಾಯಿ ನೀಡುತ್ತಾರೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ ಹಾಗೂ ಅವಿವಾಹಿತರ ವಿವಾಹ ಮಾಡಿಸುತ್ತಾರೆ. ಆದ್ದರಿಂದ ಅಸಹಾಯಕ ಹಿಂದೂ ಕುಟುಂಬಗಳು ಮತಾಂತರವಾಗುತ್ತಿವೆ ಎಂದು ಸಂತ್ರಸ್ತ ಕುಟುಂಬದವರು ಹೇಳಿದ್ದಾರೆ. ಕಳೆದ ೪-೫ ವರ್ಷಗಳಲ್ಲಿ ೨೦೦ ಹಿಂದೂ ಕುಟುಂಬಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸಲಾಗಿದೆ ಎಂದು ಪೊಲೀಸ ಅಧಿಕಾರಿ ಅಕಮಲ ಖಾನ್‌ ಇವರು ಹೇಳಿದ್ದಾರೆ.

ಅಷ್ಟೇ ಅಲ್ಲದೆ ವಿಷ್ಣುಪುರಿಯಲ್ಲಿ ‘ಸಮೃದ್ಧ ಚರ್ಚ್‌’ ಕಟ್ಟಲಾಗಿದೆ. ಇಲ್ಲಿ ಪ್ರಾರ್ಥನಾ ಸಭೆಯ ಆಯೋಜಿಸಿ ಜನರಿಗೆ ಚಿಕಿತ್ಸೆ, ಹಣ, ವಿವಾಹ, ನೌಕರಿ, ವ್ಯವಸಾಯ ಮುಂತಾದ ಆಮಿಷ ತೋರಿಸಿ ಅವರನ್ನು ಮತಾಂತರಿಸುತ್ತಿದ್ದಾರೆ.

೨. ಘಟನಪುರ : ಘಾಟನಪುರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ೧೫ ಕ್ಕಿಂತಲೂ ಹೆಚ್ಚಿನ ಚರ್ಚಗಳನ್ನು ಕಟ್ಟ ಲಾಗಿದೆ. ಈ ಪ್ರದೇಶದಲ್ಲಿ ನೂರಾರು ಹಿಂದೂ ಕುಟುಂಬ ಗಳ ಮತಾಂತರವಾಗಿದೆ. ಆರೋಪಿ ಕ್ರೈಸ್ತರಿಗೆ ಬಂಧಿಸಿ ಜಾಮೀನಿನಲ್ಲಿ ಹೊರ ಬಂದ ನಂತರ ಮತ್ತೆ ಮತಾಂತರದ ಕಾರ್ಯ ಮುಂದುವರಿಸುತ್ತಾರೆ.

೩. ಶ್ಯಾಮನಗರ : ಶಾಮನಗರ ಪ್ರದೇಶದ ಅಭಿಜಿತ್‌ ಮತ್ತು ರಜತ ಜಪ್ಸಂ ಈ ರೂವಾರಿಗಳನ್ನು ಬಂಧಿಸಲಾಗಿದೆ. ಇದರಲ್ಲಿನ ರಜತ್‌ ಜಿಪ್ಸಂ ಇವನು ದಕ್ಷಿಣ ಕೊರಿಯಾದ ನಾಗರಿಕನಾಗಿದ್ದಾನೆ.

೪. ರಾವತಪುರ : ನಗರದಲ್ಲಿನ ರಾವತಪುರ. ಪ್ರದೇಶದಲ್ಲಿನ ಥಾರು ವಸತಿಯಲ್ಲಿ ವಾಸವಾಗಿರುವ ‘ನೀರಜ’ ಎಂಬ ಯುವಕ ಮದ್ಯವ್ಯಸನಿಯಾಗಿದ್ದರಿಂದ ಆತನ ಮೂತ್ರಪಿಂಡ ಮತ್ತು ಯಕೃತ್ತು ನಿಷ್ಕ್ರಿಯವಾಗಿದ್ದವು. ಅದರ ನಂತರ ಈ ಪ್ರದೇಶದಲ್ಲಿ ಪಂಜಾಬದಿಂದ ಬಂದಿರುವುದಾಗಿ ಹೇಳಿ ಒಬ್ಬ ಕ್ರೈಸ್ತ ಮಿಷನರಿ ರೋಗಿಗಳ ಮಾಹಿತಿ ಕಲೆ ಹಾಕಿದನು. ಇವರೆಲ್ಲರಿಗೆ ರೋಗವಾಸಿ ಮಾಡುವುದಾಗಿ ಆಮಿಷ ತೋರಿಸುತ್ತಾ ಅಲ್ಲಿ ಪ್ರಾರ್ಥನಾ ಸಭೆ ಆಯೋಜಿಸಲಾಗುತ್ತಿದ್ದವು. ಸಭೆಗೆ ನೂರಾರು ಹಿಂದೂಗಳು ಉಪಸ್ಥಿತರಾಗುತ್ತಿದ್ದರು. ಪೊಲೀಸರಿಗೆ ಇದರ ಮಾಹಿತಿ ದೊರೆಯುತ್ತಲೇ ಎಲ್ಲಾ ಮಿಷನರಿಗಳು ಅಲ್ಲಿಂದ ಓಡಿದರು.

೫. ಕರ್ನಲಗಂಜ : ಕರ್ನಲಗಂಜ ಪ್ರದೇಶದಲ್ಲಿರುವ ಚಿನ್ನೀ ಗಂಜದ ‘ಎಪಿ ಫ್ಯಾನಿ ಶಾಲೆ’ಯ ಪರಿಸರದಲ್ಲಿ ಒಂದು ತಿಂಗಳಿನಿಂದ ಪ್ರಾರ್ಥನಾ ಸಭೆ ಆಯೋಜಿಸಲಾಗುತ್ತಿತ್ತು. ಇದಕ್ಕೇ ನೂರಾರು ಹಿಂದೂಗಳು ಉಪಸ್ಥಿತರಿದ್ದರು. ಅವರಿಗೆ ವಿವಿಧ ರೀತಿಯ ಆಮಿಷ ತೋರಿಸಿ ಮತಾಂತರ ಗೊಳಿಸುವ ಪ್ರಯತ್ನ ನಡೆಯುತ್ತಿತ್ತು. ಭಜರಂಗದಳ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳಿಗೆ ಇದರ ಮಾಹಿತಿ ದೊರೆಯುತ್ತಲೇ ಅವರು ಇದನ್ನು ವಿರೋಧಿಸಿದರು. ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾ ದೂರು ದಾಖಲಿಸಿ ಕೊಂಡರು ಮತ್ತು ಪಾದ್ರಿ ಅಮಿತ್‌ ಲಯನ್‌ ಇವನ ಜೊತೆಗೆ ಇನ್ನೊಬ್ಬ ಮಿಷನರಿಯನ್ನು ಬಂಧಿಸಿದರು.