ಶ್ರೀ ಗುರುಗಳ ಐತಿಹಾಸಿಕ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಜವಾಬ್ದಾರಿ ವಹಿಸಿ ಸೇವೆ ಮಾಡಿ ! – ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ ಇವರಿಂದ ಸಾಧಕರಿಗೆ ಸಂದೇಶ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ‘ಶ್ರೀ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಜ್ಞಾನಶಕ್ತಿಯ ಮೂಲಕ ಹಿಂದು ರಾಷ್ಟ್ರದ ಸ್ಥಾಪನೆಯ ದೃಷ್ಟಿಯನ್ನು ನೀಡಿದ್ದಾರೆ. ಈ ಹಿಂದೂ ರಾಷ್ಟ್ರದ ಸ್ಥಾಪನೆ, ಎಂದರೆ ಅಧ್ಯಾತ್ಮವನ್ನು ಆಧರಿಸಿದ ರಾಷ್ಟ್ರರಚನೆ (ಧರ್ಮಸಂಸ್ಥಾಪನೆ)ಯಾಗಿದೆ. ಕೇವಲ ಅವತಾರಗಳೇ ಇಂತಹ ಕಾರ್ಯವನ್ನು ಮಾಡಬಹುದು ! ಇಂದು ಎಲ್ಲೆಡೆ ಹಿಂದೂ ರಾಷ್ಟ್ರದ ಚರ್ಚೆ ಆಗುವುದು, ಕೇವಲ ಶ್ರೀ ಗುರುಗಳ ಜ್ಞಾನಶಕ್ತಿಯ ಫಲವಾಗಿದೆ. ಈಗ ಹಿಂದು ರಾಷ್ಟ್ರ ಸ್ಥಾಪನೆಯ ಕಾಲವು ಸಮೀಪಿಸಿದೆ; ಆದರೆ ಭವಿಷ್ಯದಲ್ಲಿ ಸಂಪೂರ್ಣ ರಾಷ್ಟ್ರರಚನೆಯು ಅಧ್ಯಾತ್ಮದ ಮೇಲೆ ಆಧಾರಿತವಾಗಲು ಇಂದಿನಿಂದ ಕೃತಿ ಮಾಡುವುದು, ಇದು ಧರ್ಮಸಂಸ್ಥಾಪನೆಯ ಕಾರ್ಯವಾಗಿದೆ. ಶ್ರೀ ಗುರುಗಳ ಈ ಐತಿಹಾಸಿಕ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಜವಾಬ್ದಾರಿಯನ್ನು ವಹಿಸಿ ಕೊಂಡು ಸೇವೆಯನ್ನು ಮಾಡಿರಿ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು, ಸನಾತನ ಸಂಸ್ಥೆ (೧೪.೪.೨೦೨೩)